ಭಾರತದ ಗೆಲುವಿಗೆ ಸ್ಪಿನ್ ಪಿಚ್ ಅಗತ್ಯವಿಲ್ಲ: ಗಿಲ್ಲಿ
Team Udayavani, Mar 1, 2017, 10:59 AM IST
ಹೊಸದಿಲ್ಲಿ: ಭಾರತದ ಗೆಲುವಿಗೆ ಅತಿಯಾಗಿ ತಿರುವು ಪಡೆಯುವ ಪಿಚ್ ತಯಾರಿಸುವ ಅಗತ್ಯವೇನಿಲ್ಲ ಎಂದು ಆಸ್ಟ್ರೇಲಿಯ ತಂಡದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್ಕ್ರಿಸ್ಟ್ ತಿಳಿಸಿದ್ದಾರೆ.
“ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಬಲಿಷ್ಠ ವಾಗಿದೆ. ಯಾವುದೇ ಹಂತದಲ್ಲಿ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಆಸ್ಟ್ರೇಲಿಯ ಆಟ ಗಾರರು ಮೈಮರೆಯುವಂತಿಲ್ಲ. ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್ಮನ್. ಒಂದೆರಡು ಪಂದ್ಯಗಳಲ್ಲಿ ವೈಫಲ್ಯ ಎದುರಿಸುವುದು ಸಹಜ’ ಎಂದಿದ್ದಾರೆ ಗಿಲ್ಕ್ರಿಸ್ಟ್.
ಎರಡನೇ ಟೆಸ್ಟ್ ಬೆಂಗಳೂರಿನಲ್ಲಿ ನಡೆಯಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಿಲ್ಕ್ರಿಸ್ಟ್, “ನಮಗೆ ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಗೊತ್ತು. ಇದೊಂದು ಸುಂದರ ಪಿಚ್ ಆಗಿದ್ದು, ಬ್ಯಾಟ್ಸ್ಮನ್ ಮತ್ತು ಬೌಲರ್ ಇಬ್ಬರಿಗೂ ನೆರವು ನೀಡಲಿದೆ…’ ಎಂದಿದ್ದಾರೆ.
ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಭಾರತ ಹೀನಾಯವಾಗಿ ಸೋಲುಂಡಿತ್ತು. ಇದಕ್ಕೆ “ಅತಿಯಾದ ಸ್ಪಿನ್ ಪಿಚ್’ ಮಾಡಿದ್ದೇ ಕಾರಣ ಎನ್ನಲಾಗಿತ್ತು. ಓ’ಕೀಫ್ 12 ವಿಕೆಟ್ ಪಡೆದು ಭಾರತದ ಸೋಲಿಗೆ ಪ್ರಮುಖ ಕಾರಣರಾಗಿದ್ದರು. ಹೀಗಾಗಿ ಸ್ಪಿನ್ ಪಿಚ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.