ಅಕೌಂಟ್‌ನಲ್ಲಿ ಕಾಸಿಲ್ಲದಿದ್ದರೂ ಭಾರಿ ದಂಡ; ಎಸ್‌ಬಿಐನಿಂದ ಹೊಸ ನಿಯಮ


Team Udayavani, Mar 4, 2017, 3:50 AM IST

sbi.jpg

ಮುಂಬೈ: ಅಪನಗದೀಕರಣದ ಬಳಿಕ ರಾಷ್ಟ್ರೀಕೃತ ಬ್ಯಾಂಕುಗಳು ಒಂದೊಂದೇ ನೀತಿ ಪ್ರಕಟಿಸುತ್ತಿವೆ. ಈಗ ಸರದಿ ಎಸ್‌ಬಿಐನದ್ದು. ನಿಮ್ಮದು ಎಸ್‌ಬಿಐ ಉಳಿತಾಯ ಖಾತೆ ಆಗಿದ್ದಲ್ಲಿ, ನೀವು ಮೆಟ್ರೋ ನಗರದಲ್ಲೇ ವಾಸಿಸುತ್ತಿದ್ದಲ್ಲಿ ಕನಿಷ್ಠ 5 ಸಾವಿರ ರೂ. ಠೇವಣಿ ಇಟ್ಟಿರಲೇಬೇಕು. ಇಲ್ಲದಿದ್ರೆ ದಂಡ ಪಕ್ಕಾ!

ಉಳಿತಾಯ ಖಾತೆಗಳ “ಮಾಸಿಕ ಸರಾಸರಿ ಮೊತ್ತ’ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಸ್‌ಬಿಐ ಈ ನೀತಿ ಜಾರಿ ತಂದಿದೆ. ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ, ಮೆಟ್ರೋಪಾಲಿಟನ್‌ ನಗರಗಳಲ್ಲಿ ಈ ದಂಡದ ಮೊತ್ತ ಹೆಚ್ಚು! ಏ.1 ರಿಂದ ಈ ನೀತಿ ಜಾರಿಯಾಗಲಿದೆ. ಅದರಲ್ಲೂ ಅಂದಿನಿಂದಲೇ ಎಸ್‌ಬಿಐ ಜತೆಗೆ ಇತರೆ ಸಹವರ್ತಿ ಬ್ಯಾಂಕುಗಳು ವಿಲೀನವಾಗುತ್ತಿರುವುದರಿಂದ ಇದರ ಅಡ್ಡಪರಿಣಾಮ ತುಸು ಹೆಚ್ಚಾಗಿಯೇ ಇರಲಿದೆ.

ಎಷ್ಟು ದಂಡ?: ಮೆಟ್ರೋ ಸಿಟಿಯ ಗ್ರಾಹಕರ ಖಾತೆಯಲ್ಲಿ 5 ಸಾವಿರ ಮೊತ್ತ ಇರಲೇಬೇಕು. ಅದು ಶೇ.50ರಷ್ಟು ಕಡಿಮೆ ಆಯಿತೆಂದರೆ, 50 ರೂಪಾಯಿ ದಂಡದ ಜೊತೆಗೆ ಸೇವಾ ತೆರಿಗೆಯನ್ನೂ ಕಟ್ಟಬೇಕು. ಶೇ.50-70ರಷ್ಟು ಕಡಿಮೆ ಆಯಿತೆಂದರೆ, 75 ರೂ. ಮತ್ತು ಸೇವಾ ತೆರಿಗೆ ಕಟ್ಟಬೇಕು. ಒಂದು ವೇಳೆ ಶೇ.75ಕ್ಕಿಂತ ಹೆಚ್ಚು ಹಣ ತೆಗೆದರೆ 100 ರೂ. ಜತೆಗೆ ಸೇವಾ ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ.

ನಗರಗಳಲ್ಲಿ ಸರಾಸರಿ ಠೇವಣಿ ಮೊತ್ತ 3 ಸಾವಿರ ರೂ., ಅರೆನಗರಗಳಲ್ಲಿ 2 ಸಾವಿರ ರೂ. ಮತ್ತು ಗ್ರಾಮಗಳಲ್ಲಿ 1 ಸಾವಿರ ರೂಪಾಯಿಗೆ ಮಿತಿಗೊಳಿಸಲಾಗಿದೆ. ಹಳ್ಳಿ ಪ್ರದೇಶಗಳ ಮಂದಿ ಈ ಮಿತಿ ಕಾಯ್ದುಕೊಳ್ಳಲು ವಿಫ‌ಲರಾದರೆ, ಮೇಲೆ ತಿಳಿಸಿದಂತೆ ಶೇಕಡಾವಾರು ಕ್ರಮದಲ್ಲಿ 20,30, 50 ರೂ. ಜತೆಗೆ ಸೇವಾ ತೆರಿಗೆಯನ್ನು ಕಟ್ಟಬೇಕು.

ಯಾಕೆ ಹೀಗೆ?: ಎಸ್‌ಬಿಐನಲ್ಲಿ ಈ ಹಿಂದೆಯೂ ಸರಾಸರಿ ಮೊತ್ತ ಕಾಯ್ದುಕೊಳ್ಳಲು ವಿಫ‌ಲರಾದರೆ ದಂಡನೀತಿ ಜಾರಿಯಲ್ಲಿತ್ತು. ಆದರೆ, 2012ರಲ್ಲಿ ಹೊಸ ಗ್ರಾಹಕರನ್ನು ಸೆಳೆಯಲು ಆ ನೀತಿಯನ್ನು ಕೈಬಿಟ್ಟಿತ್ತು. ಗ್ರಾಹಕರ ಹಣವನ್ನು ಆದಷ್ಟು ಬ್ಯಾಂಕ್‌ನಲ್ಲೇ ಇರುವಂತೆ ನೋಡಿಕೊಳ್ಳಲು ಬ್ಯಾಂಕ್‌ ಈ ನಿರ್ಧಾರಕ್ಕೆ ಬಂದಿದೆ. ಖಾತೆಯಲ್ಲಿ ಮೊತ್ತ ಇದ್ದಷ್ಟು ಬ್ಯಾಂಕಿಗೇ ಲಾಭವಾಗಲಿದೆ.

ದೇಶದಲ್ಲಿ ಒಟ್ಟಾರೆ 25 ಕೋಟಿ ಎಸ್‌ಬಿಐ ಉಳಿತಾಯಿ ಖಾತೆಗಳಿವೆ. ಸೊನ್ನೆ ಠೇವಣಿ ಇಟ್ಟುಕೊಂಡಿದ್ದರೂ ದಂಡ ವಿಧಿಸುತ್ತಿರಲಿಲ್ಲ. ಅಪನಗದೀಕರಣದ ವೇಳೆ ಸಾಕಷ್ಟು ಖಾತೆಗಳು ಸೃಷ್ಟಿಯಾಗಿದ್ದು, ಕನಿಷ್ಠ ಮೊತ್ತದ ಖಾತೆಗಳ ನಿರ್ವಹಣೆ ಬ್ಯಾಂಕಿಗೆ ಹೊರೆಯಾಗಿದೆ.

ಎಸ್‌ಬಿಐನಿಂದಲೂ ಹೆಚ್ಚುವರಿ ಶುಲ್ಕ
ಖಾಸಗಿ ಬ್ಯಾಂಕುಗಳಷ್ಟೇ ಅಲ್ಲ, ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ಬ್ಯಾಂಕ್‌(ಎಸ್‌ಬಿಐ) ಕೂಡ ಏಪ್ರಿಲ್‌ ತಿಂಗಳಿಂದ ಹೆಚ್ಚುವರಿ ವಹಿವಾಟಿಗೆ ಶುಲ್ಕ ವಿಧಿಸಲು ಮುಂದಾಗಿದೆ. ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ಎಟಿಎಂ ಅಥವಾ ಡೆಬಿಟ್‌ ಕಾರ್ಡ್‌ ವಹಿವಾಟು ನಡೆಸಿದರೆ, ತನ್ನ ಗ್ರಾಹಕರಿಗೆ ಹೆಚ್ಚುವರಿ 10 ರೂ.(ಸೇವಾ ತೆರಿಗೆ ಹೊರತುಪಡಿಸಿ) ಶುಲ್ಕ ವಿಧಿಸಲಿದೆ. ಬೇರೆ ಬ್ಯಾಂಕಿನ ಗ್ರಾಹಕರು 3 ಉಚಿತ ವಹಿವಾಟಿನ ಬಳಿಕದ ಟ್ರಾನ್ಸಾಕ್ಷನ್‌ಗೆ 20ರೂ. ಶುಲ್ಕ ಪಾವತಿಸಬೇಕು.

ಎಟಿಎಂನಲ್ಲಿ ಪಿನ್‌ ಚೇಂಜ್‌, ಬ್ಯಾಲೆನ್ಸ್‌ ಚೆಕ್‌ ಮಾಡಿದ್ರೂ ಹೆಚ್ಚುವರಿ ಶುಲ್ಕ
ನವದೆಹಲಿ
: ಬ್ಯಾಂಕುಗಳಲ್ಲಿ ಹೆಚ್ಚುವರಿ ವಹಿವಾಟಿಗಷ್ಟೇ ಅಲ್ಲ, ಬ್ಯಾಲೆನ್ಸ್‌ ಚೆಕ್‌ ಮಾಡಿದರೆ, ಪಿನ್‌ ಬದಲಾಯಿಸಿದರೆ, ಮಿನಿ ಸ್ಟೇಟ್‌ಮೆಂಟ್‌ ಪಡೆದರೆ, ಅದಕ್ಕೂ ನೀವು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕು!

ಉಚಿತ ವಹಿವಾಟಿಗಿರುವ ಮಿತಿ ಮುಗಿದ ಬಳಿಕ ವಿತ್‌ಡ್ರಾ ಮತ್ತು ಠೇವಣಿಗೆ ಹೆಚ್ಚುವರಿಯಾಗಿ 150 ರೂ. ಶುಲ್ಕ ವಿಧಿಸುವುದಾಗಿ ಕೆಲವು ಖಾಸಗಿ ಬ್ಯಾಂಕುಗಳು ಘೋಷಿಸಿದ ಬೆನ್ನಲ್ಲೇ ಬ್ಯಾಂಕುಗಳು ವಿಧಿಸುತ್ತಿರುವ ಇನ್ನೂ ಕೆಲವು ಶುಲ್ಕಗಳ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಎಚ್‌ಡಿಎಫ್ಸಿ ಬ್ಯಾಂಕ್‌ 2014ರಿಂದಲೇ ತನ್ನ ಗ್ರಾಹಕರಿಗೆ ಇಂಥ ಶುಲ್ಕಗಳನ್ನು ವಿಧಿಸುತ್ತಾ ಬಂದಿರುವುದಾಗಿ “ಇಂಡಿಯಾ ಟುಡೇ’ ವರದಿ ಮಾಡಿದೆ. ಎಟಿಎಂನಲ್ಲಿ ಉಚಿತ 3 ವಹಿವಾಟುಗಳನ್ನು ನಡೆಸಿದ ಬಳಿಕ ಪ್ರತಿ ನಗದು ವಹಿವಾಟಿಗೂ ನಿಮ್ಮ ಖಾತೆಯಿಂದ ಹೆಚ್ಚುವರಿ 20 ರೂ. ಹಾಗೂ ನಗದೇತರ ವಹಿವಾಟಿಗೆ 8.50 ಪೈಸೆ ಕಡಿತಗೊಳ್ಳುತ್ತದೆ. ನಗದೇತರ ವಹಿವಾಟುಗಳು ಎಂದರೆ ಖಾತೆಯಲ್ಲಿ ಎಷ್ಟು ಹಣವಿದೆ (ಬ್ಯಾಲೆನ್ಸ್‌ ಚೆಕ್‌) ಎಂದು ನೋಡುವುದು, ಮಿನಿ ಸ್ಟೇಟ್‌ಮೆಂಟ್‌ ಪಡೆಯುವುದು, ಪಿನ್‌ ಬದಲಾಯಿಸುವುದು ಇತ್ಯಾದಿ.

ಮತ್ತೂಂದು ವಿಚಾರವೆಂದರೆ, 3 ಉಚಿತ ವಹಿವಾಟುಗಳೆಂದರೆ ಅದು ನಗದು ವಿತ್‌ಡ್ರಾ ಮಾಡುವುದಷ್ಟೇ ಅಲ್ಲ. ನೀವು ಸುಮ್ಮನೆ ಬ್ಯಾಲೆನ್ಸ್‌ ಚೆಕ್‌ ಮಾಡಿದ್ರೂ, ಪಿನ್‌ ಬದಲಾಯಿಸಿದ್ರೂ ಅದು ವಹಿವಾಟು ಎಂದೇ ಪರಿಗಣಿಸಲ್ಪಡುತ್ತದೆ. ಮೇಲೆ ಹೇಳಿರುವ ಶುಲ್ಕವೇ ಅಂತಿಮವಲ್ಲ. ಅದಕ್ಕೆ ತೆರಿಗೆಯೂ ಹೆಚ್ಚುವರಿಯಾಗಿ ಸೇರಿರುತ್ತದೆ.  ಈ ಎಲ್ಲ ಅಂಶಗಳನ್ನೂ ಎಚ್‌ಡಿಎಫ್ಸಿ ಬ್ಯಾಂಕಿನ ಎಟಿಎಂ ಶುಲ್ಕ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಟಾಪ್ ನ್ಯೂಸ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

Covid vaccine ಅಡ್ಡ ಪರಿಣಾಮದಿಂದಲೇ ಹೃದಯಾಘಾತ?: ನಟ ಶ್ರೇಯಸ್ ಹೇಳಿದ್ದೇನು?

1-aaa

Pen drive case; ಇಂದೇ ಪ್ರಜ್ವಲ್‌ ರೇವಣ್ಣ ಎಸ್‌ಐಟಿ ಮುಂದೆ ಶರಣು?

1-wqeqewqe

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

1-wwewewqe

Temple; ಎಪ್ರಿಲ್‌ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?

court

Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್‌ ಅಲ್ಲ: ಹೈಕೋರ್ಟ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.