ಏರ್ಪೋರ್ಟ್ಗೆ ಗ್ರೆನೇಡ್ತಂದ ಯೋಧನ ಬಂಧನ
Team Udayavani, Apr 5, 2017, 3:45 AM IST
ಶ್ರೀನಗರ: ಜೇಬಿನಲ್ಲಿ ಎರಡು ಗ್ರೆನೇಡ್ಗಳನ್ನು ಇರಿಸಿ ಕೊಂಡು ಶ್ರೀನಗರದ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರವೇಶಿಸಿದ ಯೋಧನನ್ನು ಬಂಧಿಸಲಾಗಿದೆ.
ಉರಿ ಪ್ರಾಂತ್ಯದ ಬೋನಿಯಾರ್ ಪ್ರದೇಶದಲ್ಲಿ ನಿಯೋಜ ನೆಗೊಂಡಿದ್ದ, 17 ಜೆಎಕೆ ರೈಫಲ್ಸ್ನ ಭೋಪಲ್ ಮುಖೀಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ನಿಲ್ದಾಣದ ಮುಖ್ಯದ್ವಾರದ ಬಳಿ ತಪಾಸಣೆ ನಡೆಸುವಾಗ ದೊರೆತ ಎರಡು ಗ್ರೆನೇಡ್ಗಳನ್ನು ಸುರಕ್ಷತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. “ಹಿರಿಯ ಅಧಿಕಾರಿಯೊಬ್ಬರು ಗ್ರೆನೇಡ್ಗಳನ್ನು ತನಗೆ ಕೊಟ್ಟಿದ್ದು, ಅವುಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರಿಗೆ ನೀಡುವಂತೆ ತಿಳಿಸಿದ್ದರು,’ ಎಂದು ಬಂಧಿತ ಯೋಧ ಹೇಳಿದ್ದಾನೆ.
ಡಾರ್ಜಲಿಂಗ್ ಮೂಲದ ಯೋಧ ಮುಖೀಯಾ, ರಜೆ ಮೇಲೆ ಸ್ವಗ್ರಾಮಕ್ಕೆ ತೆರಳುತ್ತಿದ್ದರು. “ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಯೋಧನ ವಿರುದ್ಧ ಸೇನೆಯು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದೆ,’ ಎಂದು ರಕ್ಷಣಾ ವಿಭಾಗದ ವಕ್ತಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UNICEF ಇಂಡಿಯಾಗೆ ಕರೀನಾ ಕಪೂರ್ ರಾಯಭಾರಿ
Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ