ಮಾಂತ್ರಿಕ ಕೊಳಲು ಯಾರಿಗೇ ಸೇರಿದ್ದು?


Team Udayavani, Apr 20, 2017, 3:45 AM IST

mantrika-kolalu.jpg

ಒಂದು ಊರಿನಲ್ಲಿ ಗೋಪಿ ಎಂಬ ಬಾಲಕನಿದ್ದನು. ಗುಡ್ಡಗಾಡಿನಲ್ಲಿ ಕುರಿಗಳನ್ನು ಮೇಯಿಸುವುದು ಅವನ ಕೆಲಸವಾಗಿತ್ತು. ಅವನನ್ನು ದುಷ್ಟ ಅಜ್ಜಿ ಮತ್ತವಳ ಮಗ ಕೆಲಸಕ್ಕಿರಿಸಿಕೊಂಡಿದ್ದರು. ಅವನಿಗೆ ಸರಿಯಾಗಿ ಊಟ, ಬಟ್ಟೆ ಸಿಗುತ್ತಿರಲಿಲ್ಲ. ಹೊಡೆದು ಬಡಿದು ಹಿಂಸಿಸುತ್ತಿದ್ದರು. ಒಂದು ದಿನ, ಗೋಪಿಯು ಕುರಿಮಂದೆಯೊಡನೆ ಕಾಡಿನಲ್ಲಿ ಸಾಗುತ್ತಿದ್ದನು. ಜಿಂಕೆಯ ಮರಿಯೊಂದರ ಕೊಂಬು ಆಲದ ಮರದ ಬಿಳಲುಗಳ ನಡುವೆ ಸಿಕ್ಕಿಕೊಂಡಿತ್ತು. ಮುಂದಕ್ಕೆ ಹೋಗಲಾರದೆ ಒದ್ದಾಡುತ್ತಿತ್ತು. ಗೋಪಿಯು ಧಾವಿಸಿ ಬಂದು ಜಿಂಕೆ ಮರಿಯನ್ನು ಬಿಳಲುಗಳಿಂದ ಬಿಡಿಸಿದನು. ಅಲ್ಲೇ ಓಡಾಡುತ್ತಿದ್ದ ತಾಯಿ ಜಿಂಕೆಯು ಬಹಳ ಖುಷಿಪಟ್ಟಿತು. ಬಾಲಕನಿಗೆ ಉಡುಗೊರೆಯೊಂದನ್ನು ಕೊಡಬೇಕೆನಿಸಿ ಮಾಯಾಶಕ್ತಿಯಿದ್ದ ಕೊಳಲನ್ನು ನೀಡಿತು. ಅದು ಕೇಳಿದ್ದೆಲ್ಲವನ್ನೂ ಪೂರೈಸುತ್ತಿತ್ತು. ಆದರೆ ಅದಕ್ಕೆ ಮುಂಚೆ ಮಂತ್ರವೊಂದನ್ನು ಉಚ್ಚರಿಸಬೇಕು. ಜಿಂಕೆ ಆ ಮಂತ್ರವನ್ನು ಬಾಲಕನಿಗೆ ಹೇಳಿಕೊಟ್ಟು ಕಣ್ಮರೆಯಾಯಿತು. 

ಗೋಪಿಯು ಮಾಯಾ ಕೊಳಲಿನ ಶಕ್ತಿಯಿಂದ ಆಹಾರ ಮತ್ತು ಉಡುಗೆ ತೊಡುಗೆಗಳನ್ನು ಪಡೆದುಕೊಂಡನು. ತಾವು ಹಸಿವಿನಿಂದ ಕೆಡವಿದರೂ ದಷ್ಟಪುಷ್ಟನಾಗಿ, ಒಳ್ಳೊಳ್ಳೆ ಬಟ್ಟೆ ಧರಿಸುವುದನ್ನು ಕಂಡ ಅಜ್ಜಿ ಮತ್ತು ಮಗನಿಗೆ ಅನುಮಾನ ಬಂದಿತು. ಒಮ್ಮೆ ಅಜ್ಜಿ ಗೋಪಿಯನ್ನು ಹಿಂಬಾಲಿಸಿದಾಗ ಆಕೆಗೆ ಕೊಳಲಿನ ರಹಸ್ಯ ತಿಳಿದುಹೋಯಿತು. ಮಂತ್ರವನ್ನೂ ಬಾಯಿಪಾಠ ಮಾಡಿಕೊಂಡಳು. ಅಜ್ಜಿ ಮತ್ತಾಕೆಯ ಮಗ ಇಬ್ಬರೂ ಸೇರಿ, ಕೊಳಲನ್ನು ಕದಿಯಲು ಹೊಂಚು ಹಾಕಿದರು. ಒಂದು ದಿನ ರಾತ್ರಿ ಗೋಪಿ ಮಲಗಿದ್ದಾಗ ಕೊಳಲನ್ನು ಕದ್ದರು. ಗೋಪಿಗೆ ಇದು ಅಜ್ಜಿಯದೇ ಕೆಲಸ ಎಂದು ತಿಳಿದು ಹೋಯಿತು. ಅವನು ರಾಜನ ಬಳಿ ದೂರು ಕೊಟ್ಟ. ನ್ಯಾಯ ತೀರ್ಮಾನ ಮಾಡಲು ಇಬ್ಬರನ್ನೂ ರಾಜ ಕರೆಸಿದ.

ಮೊದಲು ಗೋಪಿ ಮಾಯಾ ಕೊಳಲಿಂದ ರಾಜನಿಗೆ ಭಕ್ಷ್ಯ ಭೋಜನಗಳನ್ನು ತರಿಸಿಕೊಟ್ಟ. ರಾಜ ಆ ರುಚಿಯನ್ನು ತನ್ನ ಜೀವನದಲ್ಲೇ ಸವಿದಿರಲಿಲ್ಲ. ಈಗ ಕೊಳಲು ತನ್ನದೆಂದು ಸಾಬೀತು ಪಡಿಸುವ ಸರದಿ ಅಜ್ಜಿಯದು. ಅಜ್ಜಿ ಮಂತ್ರ ಉಚ್ಚರಿಸಿ ರಾಜನ ಮೀಸೆ ಉದ್ದವಾಗಲಿ ಎಂದುಬಿಟ್ಟಳು. ರಾಜನ ಮೀಸೆ ಬೆಳೆಯುತ್ತಲೇ ಹೋಯಿತು. ಅಲ್ಲಿ ನೆರೆದಿದ್ದವರಿಗೆಲ್ಲಾ ಅಚ್ಚರಿ ರಾಜ ಹೇಗೆ ಇಷ್ಟು ಭಾರವಾದ ಮೀಸೆಯನ್ನು ಹೊತ್ತು ತಿರುಗುತ್ತಾನೆಂದು. ಏನು ಮಾಡಿದರೂ ನಿಲ್ಲುತ್ತಿಲ್ಲ. ರಾಜ ಅಜ್ಜಿಗೆ ಏನಾದರೂ ಮಾಡುವಂತೆ ಆಜ್ಞಾಪಿಸಿದ. ಅಜ್ಜಿಗೂ ಏನು ಮಾಡುವುದೆಂದು ತಿಳಿಯುತ್ತಿಲ್ಲ. ಕಡೆಗೆ ಗೋಪಿ ಮುಂದೆ ಬಂದು ಮೀಸೆ ಬೆಳೆಯುವುದನ್ನು ನಿಲ್ಲಿಸಿದ. ಇದು ಹೇಗಾಯಿತೆಂದು ರಾಜ ಕೇಳಿದಾಗ ಹೇಳಿದ “ಈ ಕೊಳಲು ಆಸೆ ನೆರವೇರಿಸಲು ಮಂತ್ರವಿರುವಂತೆ, ನಿಲ್ಲಿಸಲೂ ಒಂದು ಮಂತ್ರವಿದೆ. ಅದು ಅಜ್ಜಿಗೆ ಗೊತ್ತಿರಲಿಲ್ಲ’. ಈಗ ಪೆಚ್ಚಾಗುವ ಸರದಿ ಅಜ್ಜಿ ಮತ್ತವಳ ಮಗನದಾಗಿತ್ತು. ಅವರಿಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡರು. ಕೊಳಲು ಗೋಪಿಯ ಬಳಿಯೇ ಉಳಿಯಿತು.

– ರಾಜೇಶ್ವರಿ ಜಯಕೃಷ್ಣ,ಬೆಂಗಳೂರು

ಟಾಪ್ ನ್ಯೂಸ್

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Voting ಹದಿನೈದು ನಿಮಿಷ ಕಾದು‌ ಮತ ಹಾಕಿದ ಅನಂತಕುಮಾರ!

Voting ಹದಿನೈದು ನಿಮಿಷ ಕಾದು‌ ಮತ ಹಾಕಿದ ಅನಂತಕುಮಾರ್ ಹೆಗಡೆ!

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.