ಉಡುಪಿ ರೈಲು ನಿಲ್ದಾಣ ಈಗ ಕ್ಯಾಶ್‌ಲೆಸ್‌


Team Udayavani, Jul 3, 2017, 3:30 AM IST

Cashless-2-7.jpg

ಉಡುಪಿ: ದೂರದ ಊರಿನಿಂದ ಬಂದು ಉಡುಪಿ ರೈಲು ನಿಲ್ದಾಣದಲ್ಲಿ ಇಳಿದಾಗ ಖಾತೆಯಲ್ಲಿ ಹಣವಿದ್ದು, ಕೈಯಲ್ಲಿ ಹಣವಿಲ್ಲದಿದ್ದರೆ ಚಿಂತಿಸಬೇಕಾದ ಅಗತ್ಯವಿಲ್ಲ. ಕ್ರೆಡಿಟ್‌ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಇದ್ದರೆ ಸಾಕು. ಎಲ್ಲ ರೀತಿಯ ವ್ಯವಹಾರ ನಡೆಸಬಹುದು. ಹೌದು ಕೊಂಕಣ ರೈಲ್ವೇಯ ಉಡುಪಿ ನಿಲ್ದಾಣವು ಈಗ ಸಂಪೂರ್ಣ ನಗದು ರಹಿತ ವಹಿವಾಟಿಗೆ ತೆರೆದುಕೊಂಡಿದ್ದು, ಇನ್ನು ಮುಂದೆ ಪ್ರಯಾಣಿಕರು ಚಿಲ್ಲರೆ ಸಮಸ್ಯೆಗೆ ತಡಕಾಡುವ ಪರಿಸ್ಥಿತಿ ಇರುವುದಿಲ್ಲ.

ಎರಡು ತಿಂಗಳ ಹಿಂದೆಯೇ ಮುಂಗಡ ಟಿಕೆಟ್‌ ಕಾದಿರಿಸುವಿಕೆಗೆ ಕ್ಯಾಶ್‌ಲೆಸ್‌ ವ್ಯವಸ್ಥೆ ಮಾಡಲಾಗಿತ್ತು. ರೈಲ್ವೇ ಸಾಮಾನ್ಯ ಟಿಕೆಟ್‌ ಕೇಂದ್ರದಿಂದ ಆರಂಭವಾಗಿ ನಿಲ್ದಾಣದಲ್ಲಿರುವ ಸಸ್ಯಾಹಾರ ಹೊಟೇಲ್‌, ಟೀ ಸ್ಟಾಲ್‌, ಕಾರು – ಬೈಕ್‌ ಪಾರ್ಕಿಂಗ್‌ ಪಾವತಿ, ಪ್ರಿಪೇಯ್ಡ ಆಟೋ, ಬುಕ್‌ ಸ್ಟಾಲ್‌, ಸ್ಥಳೀಯ ಆಹಾರ ಮಳಿಗೆ, ಜನರಲ್‌ ಸ್ಟೋರ್‌ ಸಹಿತ ಇತರ ಸ್ಟಾಲ್‌ಗ‌ಳಲ್ಲಿ ಸ್ಪೈಪ್‌ ಮೆಷಿನ್‌ ಹಾಗೂ ಪೇಟಿಎಂ ಮೊಬೈಲ್‌ ಆ್ಯಪ್‌ ಮೂಲಕ ನಗದು ರಹಿತ ವ್ಯವಹಾರ ನಡೆಸಲು ಶನಿವಾರದಿಂದ ಚಾಲನೆ ನೀಡಲಾಗಿದೆ.

1 ರೂ.ನಿಂದ ಆರಂಭ
ರೈಲು ನಿಲ್ದಾಣದಲ್ಲಿ ಈಗ ಕನಿಷ್ಠ ಒಂದು ರೂಪಾಯಿಯಿಂದ ಗರಿಷ್ಠ ಪ್ರಮಾಣದವರೆಗೆ ನಗದು ರಹಿತ ವಹಿವಾಟು ನಡೆಸಬಹುದು. ಸದ್ಯ ನಿಲ್ದಾಣದಲ್ಲಿರುವ ಕನಿಷ್ಠ ವಹಿವಾಟು ಎಂದರೆ 2 ರೂ.ನ ಸೈಕಲ್‌ ಪಾರ್ಕಿಂಗ್‌. ದ್ವಿಚಕ್ರ ವಾಹನಕ್ಕೆ 5 ರೂ., ಜತೆಗೆ ಪ್ರಿಪೇಯ್ಡ ಆಟೊ ನಿಲ್ದಾಣ, ಆಹಾ ರೋತ್ಪನ್ನ  ಖರೀದಿಯಲ್ಲಿ ನಗದು ರಹಿತ ವ್ಯವಹಾರ ನಡೆಸಬಹುದು.

ಗಳಿಕೆಯಲ್ಲೂ ಉಡುಪಿ ಪ್ರಥಮ
ತೋಕೂರಿನಿಂದ ಆರಂಭವಾಗಿ ಮಹಾರಾಷ್ಟ್ರದ ರೋಹಾವರೆಗೆ ಕೊಂಕಣ ರೈಲ್ವೇ ವ್ಯಾಪ್ತಿಯಿದ್ದು, ಒಟ್ಟು 65 ನಿಲ್ದಾಣಗಳಿವೆ. ಉಡುಪಿ ನಿಲ್ದಾಣದಲ್ಲಿ ಎಲ್ಲ ವ್ಯವಹಾರವು ಕ್ಯಾಶ್‌ಲೆಸ್‌ ಆಗುತ್ತಿರುವುದು ಬಹುಶಃ ಕೊಂಕಣ್‌ ರೈಲ್ವೇ ವ್ಯಾಪ್ತಿಯಲ್ಲಿ ಪ್ರಥಮ ಇರಬಹುದು. ಕೊಂಕಣ ರೈಲ್ವೇಯ ಎಲ್ಲ ನಿಲ್ದಾಣಗಳಲ್ಲಿ ಉಡುಪಿಯು ವಾರ್ಷಿಕ ಹಣಗಳಿಕೆಯಲ್ಲೂ ಮುಂಚೂಣಿಯಲ್ಲಿದೆ. ದಿನಕ್ಕೆ ಸುಮಾರು 4 ಲ.ರೂ.ಗೂ ಅಧಿಕ ವಹಿವಾಟು ನಡೆಯುತ್ತಿದ್ದು, ಪ್ರವಾಸಿ ಸ್ಥಳ ಹಾಗೂ ಶಿಕ್ಷಣ ತಾಣವಾಗಿರುವ ಕಾರಣ ದಿನವೊಂದಕ್ಕೆ 2,000ಕ್ಕೂ ಮಿಕ್ಕಿ ಮಂದಿ ಪ್ರಯಾಣಿಕರು ಬಂದು- ಹೋಗುತ್ತಿರುತ್ತಾರೆ ಎಂದು ಕೊಂಕಣ ರೈಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಸುಧಾಕೃಷ್ಣ ಮೂರ್ತಿ ತಿಳಿಸಿದರು.

ಜನರಿಗೆ ಹೆಚ್ಚಿನ ಪ್ರಯೋಜನ
ರೈಲು ಟಿಕೆಟ್‌ ಕೇಂದ್ರದಲ್ಲಿ ಈಗಾಗಲೇ ನಗದು ರಹಿತ ವಹಿವಾಟು ನಡೆಯುತ್ತಿದೆ. ಈಗ ನಿಲ್ದಾಣದ ಎಲ್ಲ ಮಳಿಗೆಗಳಲ್ಲಿ ಆರಂಭಿಸಿರುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರತಿಯೊಂದು ಮಳಿಗೆಗೂ ಸ್ವೈಪಿಂಗ್‌ ಯಂತ್ರಗಳನ್ನು ಅಳವಡಿಸಿದ್ದು, ಜನರಿಗೆ ಇನ್ನಷ್ಟು ಪ್ರಯೋಜನ ಸಿಗಲಿದೆ. ಇನ್‌ಸ್ಟಾಲೇಶನ್‌ ಸಮಸ್ಯೆಯಿಂದ ಸಾಮಾನ್ಯ ಟಿಕೆಟ್‌ ಕೌಂಟರ್‌ನಲ್ಲಿ ನಗದು ರಹಿತ ವಹಿವಾಟು ಆರಂಭಿಸಿಲ್ಲ. ಒಂದೆರಡು ದಿನಗಳಲ್ಲಿ ಅದು ಸಹ ಕ್ಯಾಶ್‌ಲೆಸ್‌ ಆಗಲಿದೆ.
– ಎಸ್‌. ವಿನಯ ಕುಮಾರ್‌, ಕೊಂಕಣ ರೈಲ್ವೇ ಮಂಗಳೂರು ವಲಯಾಧಿಕಾರಿ

ಟಾಪ್ ನ್ಯೂಸ್

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.