ಹಳ್ಳಿಯ ಕಥೆ-ವ್ಯಥೆ


Team Udayavani, Jul 16, 2017, 10:30 AM IST

halli-panchayiti.jpg

ಒಬ್ಬ ಲಾಯರ್‌, ಪಂಚಾಯ್ತಿ ಕಟ್ಟೆಯ ಎರಡು ಹಿರಿಯ ಜೀವಗಳು, ಜೊತೆಗೊಂದು ತುಂಟ ಪ್ರೇಮಿಗಳು … ಇಡೀ ಹಳ್ಳಿಯಲ್ಲಿ ಅವರದ್ದೇ ಹಾವಳಿ. ಸುತ್ತಿ ಬಳಸಿ ಇಡೀ ಹಳ್ಳಿ ಸುತ್ತಿದರೂ ಮತ್ತೆ ಮತ್ತೆ ಅವರೇ ಎದುರಾಗುತ್ತಾರೆ. ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತಾ, ಇನ್ನು ಕೆಲವು ಸಮಸ್ಯೆಗಳನ್ನು ಬಗೆಹರಿಸುತ್ತಾ ಸಾಗುವ ಅಷ್ಟೂ ಮಂದಿ ಒಂದು ಹಂತದಲ್ಲಿ ಒಂದಾಗುತ್ತಾರೆ. ಅದಕ್ಕೊಂದು ಬಲವಾದ ಕಾರಣವಿದೆ. ಆ ಕಾರಣ ಏನೆಂಬ ಕುತೂಹಲವಿದ್ದರೆ ನೀವು “ಹಳ್ಳಿ ಪಂಚಾಯಿತಿ’ ಸಿನಿಮಾ ನೋಡಿ.

ಹೆಸರು ಹೇಳಿದ ಮೇಲೆ ಇದು ಪಕ್ಕಾ ಹಳ್ಳಿ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಹಳ್ಳಿಯಲ್ಲಿ ನಡೆಯುವ ಘಟನೆಗಳನ್ನೇ ವಸ್ತುವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಹಳ್ಳಿ ಜನರ ಮುಗ್ಧತೆ, ಅವರನ್ನು ಯಾಮಾರಿಸುವ ಮಂದಿ, ಹಳ್ಳಿಯ ಸಮಸ್ಯೆಗಳು ಹಳ್ಳಿಕಟ್ಟೆಯಲ್ಲೇ ಪಂಚಾಯ್ತಿಯಾಗಬೇಕೆಂಬ ನಂಬಿಕೆಗಳೇ ಈ ಸಿನಿಮಾದ ಪ್ರಮುಖ ಅಂಶ. ಹಾಗಾಗಿ, ಇಡೀ ಸಿನಿಮಾದಲ್ಲಿ ಅಂತಹ ಘಟನೆಗಳು ಪದೇಪದೇ ಎದುರಾಗುತ್ತಲೇ ಇರುತ್ತವೆ.

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಳ್ಳಿ ಕಥೆಗಳಿರುವ ಅನೇಕ ಸಿನಿಮಾಗಳು ಬಂದಿವೆ. ಬಹುತೇಕ ಸಿನಿಮಾಗಳು ಹಳ್ಳಿ ಮುಗ್ಧ ಜನರು ಮೋಸ ಹೋಗುವ, ಊರಿನ ಗೌಡನ ದರ್ಪದ ಸುತ್ತವೇ ಸುತ್ತಿವೆ. ಈ ಸಿನಿಮಾ ಕೂಡಾ ಅದೇ ಕೆಟಗರಿಗೆ ಸೇರುವ ಸಿನಿಮಾ. ಚಿತ್ರದಲ್ಲಿ ಸೆಂಚುರಿ ಗೌಡ ಹಾಗೂ ಗಡ್ಡಪ್ಪ ಪ್ರಮುಖ ಪಾತ್ರ ಮಾಡಿದ್ದಾರೆ. ಆದರೆ, ಅವರು ಸಿನಿಮಾದಲ್ಲಿದ್ದಾರನ್ನೋದು ಬಿಟ್ಟರೆ ಅವರ ಪಾತ್ರಕ್ಕೊಂದು ತೂಕ, ಅರ್ಥ ಕೊಡುವಲ್ಲಿ ನಿರ್ದೇಶಕರು ಎಡವಿದ್ದಾರೆ.

ಅವರಿಬ್ಬರು ಸಿನಿಮಾದುದ್ದಕ್ಕೂ ಸಾಗಿ ಬಂದರೂ ಅವರನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಹಾಗಾಗಿ, ಅವರಿಬ್ಬರಿಗಿರುವ ಪ್ರಸಿದ್ಧಿಗಾಗಿ ಅವರನ್ನು ಬಳಸಿಕೊಂಡಂತೆ ಕಾಣುತ್ತದೆ. ಅದಕ್ಕೆ ಕಾರಣ, ಚಿತ್ರದಲ್ಲೊಂದು ಗಟ್ಟಿ ಕಥೆ ಇಲ್ಲದ್ದು. ಇಲ್ಲಿ ಘಟನೆಗಳನ್ನು, ಸನ್ನಿವೇಶಗಳನ್ನಿಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಅದು ಈಗಿನ ಟ್ರೆಂಡ್‌ ಎಂದುಕೊಂಡು ನೀವು ಸಿನಿಮಾ ನೋಡಬಹುದು. ಒಂದು ಹಳ್ಳಿ ಎಂದರೆ ಅಲ್ಲಿ ನೂರೆಂಟು ಸಮಸ್ಯೆಗಳು, ಘಟನೆಗಳು ಇರುತ್ತವೆ.

ಆದರೆ, ಇಲ್ಲಿ ಕೆಲವೇ ಸನ್ನಿವೇಶಗಳಿಗೆ ಸೀಮಿತ  ಮಾಡಲಾಗಿದೆ. ಲಾಯರ್‌ ಮಾಡುವ ಮೋಸ ಹಾಗೂ ವಟವಟ ಮಾತನಾಡುವ ಪ್ರೇಮಿಗಳ ಕಾಟದ ಸುತ್ತವೇ ಬಹುತೇಕ ಸಿನಿಮಾ ಸುತ್ತುತ್ತದೆ. ಅಂದಹಾಗೆ, ಇದು ಕೂಡಾ ಮಂಡ್ಯ ಹಿನ್ನೆಲೆಯ ಚಿತ್ರವಾದ್ದರಿಂದ, ಅಲ್ಲಿನ ಭಾಷೆಯನ್ನೇ ಬಳಸಲಾಗಿದೆ. ಹಾಗಂತ ಚಿತ್ರದಲ್ಲಿ ಒಳ್ಳೆಯ ಅಂಶಗಳೇ ಇಲ್ಲವೆಂದಲ್ಲ. ಹಳ್ಳಿಯ ಕೆಲವು ಶಾಲೆಗಳ ದುಸ್ಥಿತಿ, ಅಧ್ಯಾಪಕರ ನಿರ್ಲಕ್ಷ್ಯತನ ಸೇರಿದಂತೆ ಹಲವು ಅಂಶಗಳನ್ನು ಇಲ್ಲಿ ಹೇಳಲಾಗಿದೆ.

ಆದರೆ, ಅವೆಲ್ಲವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೇಳುತ್ತಿದ್ದರೆ ಸಿನಿಮಾಕ್ಕೆ ಪ್ಲಸ್‌ ಆಗುತ್ತಿತ್ತು. ಇಲ್ಲಿ ಖುಷಿಯ ವಿಚಾರವೆಂದರೆ ಚಿತ್ರ ಹಳ್ಳಿಬಿಟ್ಟು ಸಾಗಿಲ್ಲ. ಇಡೀ ಸಿನಿಮಾ ಹಳ್ಳಿಯಲ್ಲೇ ನಡೆದಿದೆ. ಜೊತೆಗೆ ಅಲ್ಲಿನ ಪರಿಸರವನ್ನು ಚೆನ್ನಾಗಿ ಕಟ್ಟಿಕೊಡುವ ಪ್ರಯತ್ನ ಕೂಡಾ ಆಗಿದೆ. ಹೀರೋಯಿಸಂಗೋಸ್ಕರ ಬಿಲ್ಡಪ್‌ ಆಗಲಿ, ಪುಂಡರಿಗಾಗಿ ಐಟಂ ಸಾಂಗ್‌ ಇಡುವ ಗೋಜಿಗೆ ಹೋಗಿಲ್ಲ. ಆ ಮಟ್ಟಿಗೆ ಇದು ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ.

ಆದರೆ, ಚಿತ್ರದ ಕಥೆ ಹಾಗೂ ನಿರೂಪಣೆ ಮತ್ತಷ್ಟು ಬಿಗಿಯಾಗಿದ್ದರೆ “ಪಂಚಾಯ್ತಿ’ ಫ‌ಲಪ್ರದವಾಗುತ್ತಿತ್ತು. ಚಿತ್ರದಲ್ಲಿ ಸೆಂಚುರಿ ಗೌಡ, ಗಡ್ಡಪ್ಪ ಅವರು ನಟಿಸಿದ್ದಾರೆ. ನಟಿಸಿದ್ದಾರೆ ಅನ್ನೋದಕ್ಕಿಂತ ಈ ಹಿಂದಿನ ಚಿತ್ರಗಳಲ್ಲಿ ಹೇಗೆ ಕಾಣಿಸಿಕೊಂಡಿದ್ದರೋ ಬಹುತೇಕ ಅದೇ ಇಲ್ಲಿ ರಿಪೀಟ್‌ ಆಗಿದೆ ಎನ್ನಬಹುದು. ಅಭಿ ನಟನೆ “ತಿಥಿ’ ನೆನಪಿಸುತ್ತದೆ. ನಾಯಕಿ ಮೇಘನಾ ಬೋಲ್ಡ್‌ ಆಗಿ ನಟಿಸಿದ್ದಾರೆ.

ಹಿರಿಯ ನಟ ಗೀತಾ ಹಾಗೂ ಜಯರಾಂ ಅವರು ತೆರೆಮೇಲೆ ಇದ್ದಷ್ಟು ಹೊತ್ತು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಗೆ ನೋಡಿದರೆ ಚಿತ್ರದಲ್ಲಿ ಶಿಕ್ಷಕಿಯಾಗಿ ನಟಿಸಿರುವ ಪ್ರೇಮ ಯುವರಾಜ್‌ ಪಾತ್ರಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಮಕ್ಕಳ ಹಾಗೂ ಊರಿನ ಬಗೆಗಿನ ಕಾಳಜಿಯಲ್ಲಿ ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಂದು ಹಂತದಲ್ಲಿ ಸಿನಿಮಾಕ್ಕೆ ಪ್ರಮುಖ ಟ್ವಿಸ್ಟ್‌ ಕೂಡಾ ಅವರಿಂದಲೇ ಸಿಗುತ್ತದೆ.

ಚಿತ್ರ: ಹಳ್ಳಿ ಪಂಚಾಯ್ತಿ
ನಿರ್ಮಾಣ: ಪ್ರೇಮ ಯುವರಾಜ್‌
ನಿರ್ದೇಶನ: ಜಿ.ಉಮೇಶ್‌
ತಾರಾಗಣ: ಸೆಂಚುರಿ ಗೌಡ, ಗಡ್ಡಪ್ಪ, ಅಭಿ, ಮೇಘನಾ, ಗೀತಾ, ಜಯರಾಂ, ಪ್ರೇಮ ಮತ್ತಿತರರು. 

* ರವಿ ರೈ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.