ಹಲವು ಪ್ರಕರಣಗಳ ಆರೋಪಿ, ರೌಡಿ ಶೀಟರ್ ಅನಾರೋಗ್ಯದಿಂದ ಸಾವು
Team Udayavani, Jul 25, 2017, 3:52 PM IST
ಮಂಗಳೂರು : 2 ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ರೌಡಿಶೀಟರ್ ಒಬ್ಬ ಆಸ್ಪತ್ರೆಯಲ್ಲಿ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ಯೆಕ್ಕಾರಿನ ನಿಖೀಲ್ ಶೆಟ್ಟಿ (39)ಎಂಬಾತ ಸಾವನ್ನಪ್ಪಿದ್ದು , ಈತ ಕಳೆದ 2 ದಿನಗಳಿಂದ ಕೋಮಾಕ್ಕೆ ಜಾರಿದ್ದ ಎಂದು ತಿಳಿದು ಬಂದಿದೆ.
ಮೃತ ಚೆಮ್ಮನೂರು ಜ್ಯುವೆಲ್ಲರಿ ದರೋಡೆ, ರೌಡಿ ವಾಮಂಜೂರು ರೋಹಿ ಕೊಲೆ ಪ್ರಕರಣ ಸೋಜಾ ಎಲೆಕ್ಟ್ರಾನಿಕ್ಸ್ ಮೇಲಿನ ಶೂಟೌಟ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ತನಿಖೆ ಎದುರಿಸುತ್ತಿದ್ದ.