ಮೊಬೈಲ್‌ ಮಾದಕ ವ್ಯಸನಕ್ಕಿಂತ ಕಡಿಮೆಯೇನಲ್ಲ: ಆಡಾಡುತ್ತಾ ಅಪಾಯ


Team Udayavani, Aug 2, 2017, 7:34 AM IST

02-ANKAKA-4.jpg

ಯುವ ಜನಾಂಗವನ್ನು ಆಕರ್ಷಿಸಲೆಂದೇ ಆನ್‌ಲೈನ್‌ನಲ್ಲಿ ಕೆಲವು ಅಪಾಯಕಾರಿ ಆಟಗಳು ಸೃಷ್ಟಿಯಾಗಿವೆ. ಬ್ಲೂವೇಲ್‌ ಚಾಲೆಂಜ್‌ ಆಧುನಿಕ ಆವಿಷ್ಕಾರದ ಅಡ್ಡ ಪರಿಣಾಮಕ್ಕೊಂದು ಉದಾಹರಣೆ. 

ಮುಂಬಯಿಯಲ್ಲಿ 14 ವರ್ಷದ ಬಾಲಕನೊಬ್ಬ ಸೋಮವಾರ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಬ್ಲೂವೇಲ್‌ ಚಾಲೆಂಜ್‌ ಅಥವಾ ಬ್ಲೂವೇಲ್‌ ಗೇಮ್‌ ಎಂಬ ಮೊಬೈಲ್‌ ಮೂಲಕ ಆಡುವ ಆನ್‌ಲೈನ್‌ ಆಟ ಕಾರಣ ಎಂದು ತಿಳಿದು ಬಂದ ಬಳಿಕ ಪೋಷಕರು ಗಾಬರಿಯಾಗಿದ್ದಾರೆ. ಸ್ಮಾರ್ಟ್‌ಫೋನ್‌ಗಳು ಈಗ ಹೆಚ್ಚಿನೆಲ್ಲ ಮಕ್ಕಳ ಕೈಗಳಲ್ಲಿವೆ. ಇಂಟರ್‌ನೆಟ್‌ ಡಾಟಾ ಬಹಳ ಅಗ್ಗವಾದ ಬಳಿಕ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆಯೂ ತೀವ್ರವಾಗಿ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಯಕಶ್ಚಿತ್‌ ಮೊಬೈಲ್‌ ಆಟವೊಂದು ಮಕ್ಕಳ ಪ್ರಾಣ ತೆಗೆಯಬಲ್ಲುದು ಎಂದರಿವಾದಾಗ ಪೋಷಕರು ಗಾಬರಿ ಆಗುವುದು ಸಹಜ. ಹದಿಹರೆಯದ ಮನಸ್ಸುಗಳು ಕೆಟ್ಟದ್ದರತ್ತ ಹೆಚ್ಚು ಆಕರ್ಷಿತವಾಗುತ್ತವೆ ಮತ್ತು ಕೆಟ್ಟದ್ದನ್ನೇ ಹೆಚ್ಚು ಸ್ವೀಕರಿಸುತ್ತವೆ. ಇಂತಹ ವರನ್ನು ಆಕರ್ಷಿಸಲೆಂದೇ ಆನ್‌ಲೈನ್‌ನಲ್ಲಿ ಕೆಲವು ಅಪಾಯಕಾರಿ ಆಟಗಳು ಸೃಷ್ಟಿಯಾಗಿವೆ. ಬ್ಲೂವೇಲ್‌ ಚಾಲೆಂಜ್‌ ಈ ಪೈಕಿ ಒಂದು. ಇದು ಆಧುನಿಕ ಆವಿಷ್ಕಾರದ ಅಡ್ಡ ಪರಿಣಾಮಕ್ಕೊಂದು ಉದಾಹರಣೆ. 

ಬ್ಲೂವೇಲ್‌ ಚಾಲೆಂಜ್‌ ಮಾದರಿಯಲ್ಲೇ ಕಳೆದ ವರ್ಷ ಪೋಕೆಮೋನ್‌ ಗೋ ಎಂಬ ಆನ್‌ಲೈನ್‌ ಆಟ ಭಾರೀ ಸುದ್ದಿ ಮಾಡಿತ್ತು. ಪೋಕೆಮೋನ್‌ ಗೋ ಆಡುವ ದೇಶಗಳಲ್ಲಿ ಭಾರತ 4ನೇ ಸ್ಥಾನದಲ್ಲಿತ್ತು. ಈ ಆಟ ಮಾಡಿರುವ ಅನಾಹುತಗಳು ಒಂದೆರಡಲ್ಲ. ಅಮೆರಿಕದಲ್ಲಿ ಬರೀ 10 ದಿನದಲ್ಲಿ ಪೋಕೆಮೋನ್‌ ಗೋ ಆಟದಿಂದಾಗಿ 1.10ಲಕ್ಷಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ಯುವಕರು ಪೋಕೆಮೋನ್‌ ಗೋ ಆಡುತ್ತಾ ಸಮುದ್ರದೊಳಗೆ ಪ್ರವೇಶಿಸಿದ್ದರು. ಓಹಿಯೊದಲ್ಲಿ ತರುಣರ ಗುಂಪೊಂದು ಪೋಕೆಮೋನ್‌ ಗೋ ನೀಡಿದ ಚಾಲೆಂಜ್‌ ಹುಡುಕುತ್ತಾ ಅಣು ಸ್ಥಾವರದೊಳಗೆ ಅಕ್ರಮ ಪ್ರವೇಶ ಮಾಡಿದ್ದರು. ಹಲವು ದೇಶಗಳಲ್ಲಿ ಪೋಕೆಮೋನ್‌ ಗೋ ವಿರುದ್ಧ ಪ್ರತಿಭಟನೆ ನಡೆದಿತ್ತು. ಮುಂಬಯಿಯಲ್ಲೂ ಆಟ ಸುದ್ದಿ ಮಾಡಿತ್ತು. ವ್ಯಕ್ತಿಯೊಬ್ಬ ಪೋಕೆಮೋನ್‌ ಗೋ ಆಡುತ್ತಾ ತನ್ನ ದುಬಾರಿ ಕಾರನ್ನು ದಿಢೀರ್‌ ರಸ್ತೆ ಮಧ್ಯೆ ನಿಲ್ಲಿಸಿದಾಗ ಹಿಂಬದಿಯಿಂದ ರಿಕ್ಷಾ ಢಿಕ್ಕಿ ಹೊಡೆದಿತ್ತು. ಇದು ಭಾರತದಲ್ಲಿ ಪೋಕೆಮೋನ್‌ ಗೋ ಆಟದಿಂದಾಗಿ ಸಂಭವಿಸಿದ ಮೊದಲ ಅವಘಡ. ಅನಂತರ ಹಲವು ಸಲ ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆಗಳು ಕಾಣಿಸಿಕೊಂಡ ಬಳಿಕ ಪೊಲೀಸರು ಎಚ್ಚರಿಕೆ ನೀಡಬೇಕಾಯಿತು. ಪೋಕೆಮೋನ್‌ ಗೋ ಕ್ರೇಜ್‌ ಕಡಿಮೆಯಾಗುತ್ತಾ ಬಂದಂತೆ ಇದೀಗ ಹೋದೆಯಾ ಪಿಶಾಚಿ ಎಂದರೆ ಬಂದೆ ಕಿಟಿಕಿಯಲ್ಲಿ ಎಂಬಂತೆ ಅದಕ್ಕಿಂತಲೂ ಅಪಾಯಕಾರಿಯಾದ ಬ್ಲೂವೇಲ್‌ ಚಾಲೆಂಜ್‌ ಕಾಣಿಸಿಕೊಂಡಿದೆ.   ಬ್ಲೂವೇಲ್‌ ಚಾಲೆಂಜ್‌ ರಶ್ಯಾದಲ್ಲಿ ಹುಟ್ಟಿಕೊಂಡ ಪ್ರಾಣ ತೆಗೆಯುವ ಆಟ. ನಾಲ್ಕು ವರ್ಷಗಳ ಹಿಂದೆಯೇ ಈ ಆಟ ಶುರುವಾಗಿದ್ದರೂ ಜನಪ್ರಿಯವಾಗಿರುವುದು ಇತ್ತೀಚೆಗಿನ ಕೆಲ ತಿಂಗಳುಗಳಲ್ಲಿ. ರಶ್ಯಾವೊಂದರಲ್ಲೇ ನೂರಕ್ಕೂ ಹೆಚ್ಚು ಯುವಕರು ಈ ಆಟಕ್ಕೆ ಬಲಿಯಾಗಿದ್ದಾರೆ. ಜಗತ್ತಿನಾದ್ಯಂತ ಸುಮಾರು 300 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತಿವೆ. 50 ದಿನಗಳ ಆಟದಲ್ಲಿ ಕಡೆಯ ದಿನ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ಇರುತ್ತದೆ. ಆಟ ಎಷ್ಟು ಗಾಢವಾಗಿ ಯುವ ಮನಸ್ಸುಗಳನ್ನು ಪ್ರಭಾವಿಸುತ್ತದೆ ಎಂದರೆ ಸಮ್ಮೊಹಿನಿಗೆ ಒಳಗಾದವರಂತೆ ಅವರು ಟಾಸ್ಕ್ಗಳನ್ನು ಮಾಡುತ್ತಾ ಹೋಗುತ್ತಾರೆ. ಆಟ ಶುರು ಮಾಡಿದವನನ್ನು ರಶ್ಯಾ ಪೊಲೀಸರು ಹಿಡಿದು ಜೈಲಿಗಟ್ಟಿದ್ದಾರೆ. ಆದರೆ ಆಟವಿನ್ನೂ ಅಂತರ್ಜಾಲದಲ್ಲಿ ಯುವಕರನ್ನು ಸಾವಿನತ್ತ ಆಹ್ವಾನಿಸುತ್ತಿದೆ. 

ಇಂತಹ ಆಟಗಳನ್ನು ಸೃಷ್ಟಿಸುವುದರ ಹಿಂದೆ ವಿಕೃತ ಆನಂದ ಪಡೆಯುವ ವಿಲಕ್ಷಣ ಮನಃಸ್ಥಿತಿಯಲ್ಲದೆ ಬೇರೇನೂ ಇಲ್ಲ. ಇಂದು ಮುಂಬಯಿಗೆ ಬಂದ ಆಟ ನಾಳೆ ನಮ್ಮ ಮನೆಗೂ ಬರಬಹುದು. ಪೋಷಕರು ತಮ್ಮ ಮಕ್ಕಳ ಆನ್‌ಲೈನ್‌ ಚಟುವಟಿಕೆಗಳ ಮೇಲೆ ಸೂಕ್ಷ್ಮ ಗಮನ ಇರಿಸಿ ಇಂತಹ ಆಟಗಳ ಪ್ರಲೋಭನೆಗೆ ಬಲಿ ಬೀಳದಂತೆ ನೋಡಿಕೊಳ್ಳುವುದೊಂದೇ ದಾರಿ. ಯುವ ಜನತೆ ಹಾದಿ ತಪ್ಪದಂತೆ ನೋಡಿಕೊಳ್ಳುವ ಹೊಣೆ ಸರಕಾರ ಅಥವಾ ಸೈಬರ್‌ ಕ್ರೈಮ್‌ನಂತಹ ಇಲಾಖೆಗಳ ಮೇಲೂ ಇದೆ.

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.