ನೀವಿನ್ನೂ ಕನ್ಯೆಯಾ ? ಮಹಿಳಾ ಉದ್ಯೋಗಿಗಳಿಗೆ IGIMS ನಿರ್ಲಜ್ಜ ಪ್ರಶ್ನೆ
Team Udayavani, Aug 2, 2017, 5:53 PM IST
ಪಟ್ನಾ : ಅತ್ಯಂತ ವಿಚಿತ್ರ ಎನ್ನಬಹುದಾದ ಪ್ರಕರಣವೊಂದರಲ್ಲಿ ಇಲ್ಲಿನ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಐಜಿಐಎಂಎಸ್) ತನ್ನ ಮಹಿಳಾ ಉದ್ಯೋಗಿಗಳಿಗೆ ತಮ್ಮ ಕನ್ಯತ್ವವನ್ನು ಘೋಷಿಸುವಂತೆ ಕೇಳಿಕೊಂಡಿದೆ. ಮಾತ್ರವಲ್ಲದೆ ಪುರುಷ ಉದ್ಯೋಗಿಗಳಿಗೆ ತಮ್ಮ ವೈವಾಹಿಕ ಸಂಬಂಧದಲ್ಲಿರುವ ಪತ್ನಿಯರ ಸಂಖ್ಯೆಯನ್ನು ಘೋಷಿಸುವಂತೆ ತಾಕೀತು ಮಾಡಿದೆ.
ಐಜಿಐಎಂಎಸ್ ತನ್ನ ಉದ್ಯೋಗಿಗಳಿಗೆ ನೀಡಿರುವ ಸ್ಥಿತಿಗತಿ ಘೋಷಣಾ ನಮೂನೆಯಲ್ಲಿ ಉದ್ಯೋಗಿಗಳು ತಾವು ವಿಧುರರೇ, ಅವಿವಾಹಿತರೇ ಅಥವಾ ಕನ್ಯತ್ವವನ್ನು ಉಳಿಸಿಕೊಂಡಿರುವವರೇ ಎಂಬುದನ್ನು ತಿಳಿಸಬೇಕಾಗಿದೆ.
ಐಜಿಐಎಂಎಸ್ ತನ್ನ ಮಹಿಳಾ ಉದ್ಯೋಗಿಗಳಿಗೆ “ಇತರ ಜೀವಂತ ಪತ್ನಿ ಇಲ್ಲದ ವ್ಯಕ್ತಿಯನ್ನು ನಾನು ಮದುವೆಯಾಗಿದ್ದೇನೆ’ ಎಂದು ಘೋಷಿಸಿಕೊಳ್ಳುವಂತೆಯೂ ಪುರುಷ ಉದ್ಯೋಗಿಗಳು “ವಿವಾಹಿತನಾಗಿದ್ದೇನೆ ಮತ್ತು ಒಂದಕ್ಕಿಂತ ಹೆಚ್ಚು ಪತ್ನಿಯನ್ನು ಹೊಂದಿದ್ದೇನೆ’ ಎಂದು ಘೋಷಿಸಿಕೊಳ್ಳುವಂತೆಯೂ ಕೇಳಿಕೊಂಡಿದೆ.
ಈ ಘೋಷಣಾ ಪತ್ರದಲ್ಲಿ ಉದ್ಯೋಗಿಗಳು ಸಹಿ ಹಾಕುವಲ್ಲಿ ಹೀಗೊಂದು ಒಕ್ಕಣೆ ಇದೆ :
“ಕೆಳಗೆ ಹೇಳಲಾಗಿರುವ ಕಾರಣಗಳನ್ನು ಪರಿಗಣಿಸಿ, ಒಂದಕ್ಕಿಂತ ಹೆಚ್ಚು ಜೀವಂತ ಪತ್ನಿಯನ್ನು ಹೊಂದಿರುವ ವ್ಯಕ್ತಿಯನ್ನು ಸೇವೆಗೆ ನೇಮಿಸಿಕೊಳ್ಳುವಲ್ಲಿ ಇರುವ ನಿರ್ಬಂಧದಿಂದ ನನಗೆ ವಿನಾಯಿತಿ ನೀಡಬೇಕು ಎಂದು ನಾನು ಕೋರುತ್ತೇನೆ’.
ಈ ರೀತಿಯ ವಿಚಿತ್ರ ಘೋಷಣಾ ಪತ್ರವನ್ನು ಉದ್ಯೋಗಿಗಳಿಗೆ ನೀಡುವ ಮೂಲಕ ವಿವಾದ ಸೃಷ್ಟಿಸಿರುವ ಐಜಿಐಎಂಎಸ್ ಈಚೆಗೆ ತಪ್ಪು ಕಾರಣಕ್ಕಾಗಿ ಸುದ್ದಿಯಲ್ಲಿತ್ತು.
ಕ್ಯಾನ್ಸರ್ ಪೀಡಿತನಾಗಿ ಮೃತ ಪಟ್ಟ ತನ್ನ ಐದು ವರ್ಷ ಪ್ರಾಯದ ಪುತ್ರನನ್ನು ಅಂತ್ಯಕ್ರಿಯೆಗೆ ಒಯ್ಯಲು ಅಂಬುಲೆನ್ಸ್ ನೀಡುವಂತೆ ಮಗುವಿನ ತಂದೆ ಮಾಡಿಕೊಂಡಿದ್ದ ಕೋರಿಕೆಯನ್ನು ಐಜಿಐಎಂಎಸ್ ತಿರಸ್ಕರಿಸಿದ ಕಾರಣಕ್ಕೆ ಕೊನೆಗೆ ಆ ದುಃಖತಪ್ತ ತಂದೆ ತನ್ನ ಮಗುವಿನ ಶವವನ್ನು ಹೆಗಲ ಮೇಲೆ ಮಸಣಕ್ಕೆ ಒಯ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ
Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ
Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ
Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ
Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ
RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ
Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ
Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು