ಭಾವುಕ ನಾಯಕ: ಪ್ರಣವ್ಗೆ ಪ್ರಧಾನಿ ಬರೆದ ಪತ್ರ ವೈರಲ್
Team Udayavani, Aug 4, 2017, 8:50 AM IST
ಹೊಸದಿಲ್ಲಿ: ‘ನೀವು ನನ್ನ ತಂದೆಯಂತೆ. ಸದಾ ಮಾರ್ಗದರ್ಶಕರಾಗಿ ಮುನ್ನಡೆಸಿದ್ದೀರಿ’ ಹೀಗಂತ ಭಾವನಾತ್ಮಕವಾಗಿ ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಅಧಿಕಾರಾವಧಿಯ ಕೊನೆಯ ದಿನ ಪ್ರಧಾನಿ ಮೋದಿ ಅವರು ಪತ್ರ ಬರೆದಿದ್ದು, ಪ್ರಣವ್ ಅವರೊಂದಿಗೆ ಒಡನಾಟಗಳನ್ನು ಹಂಚಿ ಕೊಂಡಿದ್ದಾರೆ. ಈ ಪತ್ರವನ್ನೀಗ ಪ್ರಣವ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ನನ್ನ ಹೃದಯ ತಟ್ಟಿದೆ ಎಂದು ಹೇಳಿಕೊಂಡಿದ್ದಾರೆ. ಈ ಪತ್ರ ಈಗ ವೈರಲ್ ಆಗಿದೆ.
‘ಪ್ರಣವ್ ದಾ’ ಎಂದು ಮೋದಿ ಅವರು ಸಂಬೋಧಿಸಿದ್ದು, ‘ನಿಮ್ಮೊಂದಿಗೆ ಕೆಲಸ ಮಾಡುವುದೇ ಖುಷಿಯ ವಿಚಾರ. ಮೂರು ವರ್ಷ ಹಿಂದೆ ಪ್ರಧಾನಿಯಾಗಿ ದಿಲ್ಲಿಗೆ ಬಂದಾಗ ಹೊರಗಿನವನಾಗಿದ್ದೆ. ನನ್ನೆದುರಿದ್ದ ಕೆಲಸ ಮತ್ತು ಸವಾಲುಗಳು ಅಗಾಧವಾಗಿದ್ದವು. ಈ ವೇಳೆ ನೀವು ತಂದೆಯಂತೆ, ಮಾರ್ಗದರ್ಶಕರಂತೆ ಕೈ ಹಿಡಿದು ನಡೆಸಿದ್ದೀರಿ. ನಿಮ್ಮ ಮಾರ್ಗದರ್ಶನ, ವೈಯಕ್ತಿಕ ಬೆಂಬಲ, ನನಗೆ ಹೆಚ್ಚಿನ ವಿಶ್ವಾಸ ಮತ್ತು ಬಲ ತಂದುಕೊಟ್ಟವು’ ಎಂದಿದ್ದಾರೆ.
‘ನಮ್ಮ ಪಕ್ಷ ಸಿದ್ಧಾಂತ, ರಾಜಕೀಯ ಪ್ರಯಾಣಗಳು ಬೇರೆ ಬೇರೆಯಾಗಿದ್ದವು. ನನಗೆ ರಾಜ್ಯವೊಂದರ ಆಡಳಿತದಲ್ಲಿ ಅನುಭವವಿದ್ದರೆ, ನಿಮಗೆ ದೇಶದ ಆಡಳಿತ, ರಾಜಕೀಯದಲ್ಲಿ ದಶಕಗಳ ಅನುಭವವಿತ್ತು. ನಿಮ್ಮ ಅಪಾರ ಅನುಭವ, ಚಿಂತನೆಗಳನ್ನು ಹಂಚಿಕೊಳ್ಳುವ ಮೂಲಕ ಒಟ್ಟಾಗಿ ಕೆಲಸ ಮಾಡುವಂತೆ ಮಾಡಿದ್ದೀರಿ. ರಾಜಕೀಯ ಹೊರತಾಗಿ ಈ ದೇಶಕ್ಕೆ, ಸಮಾಜಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ನೀವು ದೇಶದ ಉನ್ನತ ನಾಯಕರ ಸಾಲಿನಲ್ಲಿ ನಿಲ್ಲುತ್ತೀರಿ. ನಿಮ್ಮೊಂದಿಗೆ, ನಿಮ್ಮ ಪ್ರಧಾನಿಯಾಗಿ ಕೆಲಸ ಮಾಡಿರುವುದು ನನಗೆ ಸಿಕ್ಕಿದ ಗೌರವ’ ಎಂದು ಪ್ರಧಾನಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ
Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ
Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ
Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?
Jammu and Kashmir ಉಗ್ರ ದಾಳಿ; ಮಾಜಿ ಸರಪಂಚ್ ಸಾವು, ಇಬ್ಬರು ಪ್ರವಾಸಿಗರಿಗೆ ಗಾಯ
MUST WATCH
ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಹೊಸ ಸೇರ್ಪಡೆ
Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!
Kaup: ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ
Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ
Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ
Rain: ಕಳಸ ತಾಲೂಕಿನಾದ್ಯಂತ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ, ವಿದ್ಯುತ್ ಸಂಪರ್ಕ ಕಡಿತ