ಸಂಭಾಲ್ಪುರ-ಜಮ್ಮು ತಾವಿ ವಿಸ್ತರಿತ ರೈಲಿಗೆ ಪ್ರಭು ಹಸಿರು ನಿಶಾನೆ
Team Udayavani, Aug 12, 2017, 4:26 PM IST
ಭುವನೇಶ್ವರ : ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಇಂದು ಶನಿವಾರ ದಿಲ್ಲಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರೂರ್ಕೇಲಾ-ಜಮ್ಮು-ತಾವಿ-ರೂರ್ಕೇಲಾ ಎಕ್ಸ್ಪ್ರೆಸ್ ರೈಲಿಗೆ ಸಂಭಾಲ್ಪುರದ ವರೆಗಿನ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದರು.
ಇದೇ ವೇಳೆ ಸಚಿವ ಪ್ರಭು ಅವರು ಪಲಾಸಾ ಮತ್ತು ಶ್ರೀಕಾಕುಳಂ ಸ್ಟೇಶನ್ನಲ್ಲಿನ ವೈ-ಫೈ ಸೇವೆಗೆ ಚಾಲನೆ ನೀಡಿದರು. ಮತ್ತು ಪೂರ್ವ ಕರಾವಳಿ ರೈಲ್ವೇ ವ್ಯಾಪ್ತಿಗೆ ಒಳಪಡುವ ಪಾರ್ವತೀಪುರಂ ಸ್ಟೇಶನ್ನಲ್ಲಿನ ಪ್ರಯಾಣಿಕರ ನಿರೀಕ್ಷಣ ಕೊಠಡಿ ಮತ್ತು ಡಾರ್ಮಟರೀಗಳನ್ನು ಉದ್ಘಾಟಿಸಿದರು.
ಉದ್ಘಾಟನಾ ಓಡಾಟವಾಗಿ ವಿಶೇಷ ರೈಲು ಸಂಭಾಲ್ಪುರ ಸ್ಟೇಶನ್ನಿಂದ ಜಮ್ಮು ತಾವಿಗೆ ಬೆಳಗ್ಗೆ 11.30ರ ಹೊತ್ತಿಗೆ ತನ್ನ ಯಾನವನ್ನು ಆರಂಭಿಸಿತು. ಹಾಗಿದ್ದರೂ ಈ ನೂತನ ವಿಸ್ತರಿತ ಭಾಗದಲ್ಲಿ ರೈಲಿನ ಅಧಿಕೃತ ಓಡಾಟ ಈಗಾಗಲೇ ಪ್ರಕಟಿತ ವೇಳಾ ಪಟ್ಟಿಯ ಪ್ರಕಾರ ಇದೇ ಆಗಸ್ಟ್ 13ರಿಂದ ಆರಂಭಗೊಳ್ಳಲಿದೆ.