ಪ್ರಶ್ನೆಗೆ ಉತ್ತರಿಸಿ ದುಬೈ ಪ್ರವಾಸ ಭಾಗ್ಯ ಪಡೆಯಿರಿ
Team Udayavani, Aug 18, 2017, 3:24 PM IST
ಕೋಡ್ಲು ರಾಮಕೃಷ್ಣ ನಿರ್ದೇಶನದ “ಮಾರ್ಚ್ 22′ ಚಿತ್ರವು ಗಣೇಶನ ಹಬ್ಬಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಚಿತ್ರಕ್ಕೆ ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಚಿತ್ರತಂಡದವರು ಹೊಸದೊಂದು ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಗೆದ್ದರೆ ಬಹುಮಾನವೇನು ಗೊತ್ತಾ? ದುಬೈ ಪ್ರವಾಸ.
ಹೌದು. “ಮಾರ್ಚ್ 22′ ಚಿತ್ರದ ಪ್ರಮೋಷನ್ ಸಲುವಾಗಿ http://acmemovies.in/ ಎಂಬ ವೆಬ್ಸೈಟ್ನಲ್ಲಿ ಒಂದು ಸ್ಪರ್ಧೆ ಶುರುವಾಗಲಿದೆ. ಈ ವೆಬ್ಸೈಟ್ನಲ್ಲಿರುವ ಪ್ಲೇ ಆ್ಯಂಡ್ ವಿನ್ ವಿಭಾಗದಲ್ಲಿ ಒಂದಿಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದವರಲ್ಲಿ, ಎರಡು ಜೋಡಿಗಳಿಗೆ ದುಬೈಗೆ ಕರೆಸಿಕೊಳ್ಳಲಾಗುತ್ತದಂತೆ.
ಅಲ್ಲಿ ಮೂರು ಹಗಲು ಮತ್ತು ಮೂರು ರಾತ್ರಿಗಳ ಕಾಲ ಪ್ರವಾಸ ಮಾಡಬಹುದಂತೆ. ಅಷ್ಟೇ ಅಲ್ಲ, ದುಬೈನಲ್ಲಿ ನಡೆಯಲಿರುವ ಚಿತ್ರದ ಪ್ರೀಮಿಯರ್ಗೆ ವಿಶೇಷ ಅತಿಥಿಗಳಾಗಿ ಭಾಗವಹಿಸಬಹುದಂತೆ. ವಿಶ್ವ ಜಲದಿನದ ದಿನಾಂಗವನ್ನೇ ಶೀರ್ಷಿಕೆಯಾಗಿಟ್ಟುಕೊಂಡು ಮೂಡಿಬಂದಿರುವ ಈ ಚಿತ್ರದಲ್ಲಿ ಅನಂತ್ನಾಗ್, ಗೀತಾ, ವಿನಯಾ ಪ್ರಸಾದ್, ಶರತ್ ಲೋಹಿತಾಶ್ವ, ಪದ್ಮಜಾ ರಾವ್, ರಮೇಶ್ ಭಟ್, ರವಿ ಕಾಳೆ, ಸಾಧು ಕೋಕಿಲ, ಆಶೀಶ್ ವಿದ್ಯಾರ್ಥಿ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ನಟಿಸಿದ್ದಾರೆ.
ಜೊತೆಗೆ ಅನಿವಾಸಿ ಭಾರತೀಯ ಬಿ.ಆರ್. ಶೆಟ್ಟಿ ಅವರು ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ದುಬೈನಲ್ಲಿ ನೆಲೆಸಿರುವ ಉದ್ಯಮಿ ಹರೀಶ್ ಶೆರಿಗಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಣಿಕಾಂತ್ ಕದ್ರಿ ಮತ್ತು ರವಿಶೇಖರ್ ಅವರ ಸಂಗೀತ, ಮೋಹನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
ʼಟಾಕ್ಸಿಕ್ʼ ಅಪ್ಡೇಟ್ಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗ್ತಾರಾ ಯಶ್?
Kaatera; ಬರಹಗಾರರಿಗೆ ರಾಕ್ಲೈನ್ ಕಾರು ಗಿಫ್ಟ್
Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು