ಪ್ರೀತಿಯ ಹುಚ್ಚು! ಮೋಸ ಹೋದವರ ಮತ್ತು ಮಾಡುವವರ ಕಥೆ
Team Udayavani, Sep 1, 2017, 6:00 AM IST
ಹಾರರ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಚಿತ್ರವೊಂದು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದೆ. “ಹೆಚ್’ ಎನ್ನುವುದು ಚಿತ್ರದ ಹೆಸರಾದರೆ, “ಯಾರಿಗೆ’ ಎಂಬುದು ಶೀರ್ಷಿಕೆ ಅಡಿಬರಹ. ಶೀರ್ಷಿಕೆಯೇ ವಿಭಿನ್ನವಾಗಿದೆ. ಹಾಗಾದರೆ, ಸಿನಿಮಾ ಹೇಗಿದೆ? ಇದಕ್ಕೆ ಸಿನಿಮಾ ಬರೋವರೆಗೆ ಕಾಯಬೇಕು. ಈ ಚಿತ್ರದ ಮೂಲಕ ಲಕ್ಷ್ಮೀರಾಜ್ ಶೆಟ್ಟಿ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ಹೀರೋ ಕೂಡ ಆಗಿದ್ದಾರೆ.
ಇಲ್ಲಿ “ಹೆಚ್’ ಅಂದರೆ ಏನರ್ಥ? ಅದಕ್ಕೆ ಉತ್ತರಿಸುವ ನಿರ್ದೇಶಕರು, “ಈ ಹೃದಯದ ಪ್ರೀತಿ ಹುಚ್ಚು ಎಲ್ಲರಿಗೂ ಕಿಚ್ಚು ಬರುವಂತೆ ಮಾಡುತ್ತೆ. ಅದೇ ಅರ್ಥ ಶೀರ್ಷಿಕೆಯಲ್ಲೂ ಉಂಟು. ಅದು ಸಿನಿಮಾ ನೋಡಿದಾಗ ಎಲ್ಲವೂ ಅರ್ಥವಾಗುತ್ತೆ’ ಅನ್ನುತ್ತಾರೆ ನಿರ್ದೇಶಕರು. “ಒಂದು ಹೆಣ್ಣು ಹೇಗೆ ಮೋಸ ಹೋಗುತ್ತಾಳ್ಳೋ, ಹಾಗೆ ಗಂಡು ಕೂಡ ಅದೇ ರೀತಿ ಮೋಸ ಹೋಗುತ್ತಾನೆ ಮತ್ತು ಮಾಡುತ್ತಾನೆ ಅನ್ನೋದು ಸಿನಿಮಾದ ಕಥೆ. ಇಲ್ಲಿ ಕುತೂಹಲಕಾರಿ ಅಂಶಗಳಿವೆ. ಹೊಸಬಗೆಯ ಚಿತ್ರದಲ್ಲಿ ಎಲ್ಲವೂ ಹೊಸತನದಿಂದ ಕೂಡಿವೆ. ಬೆಂಗಳೂರು, ಚೆನ್ನಪಟ್ಟಣ, ರಾಮನಗರ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಕಡಿಮೆ ಬಜೆಟ್ನಲ್ಲಿ ಒಂದು ಗುಣಮಟ್ಟದ ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕರು.
ಇನ್ನು, ಮಂಜು ಕವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಹಿಂದೆ ಮಂಜು ಕವಿ ಐವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ, ಭಕ್ತಿಗೀತೆಗಳ ಆಲ್ಬಂ ಮಾಡಿದ್ದಾರೆ. ಅವರಿಗೆ ಇದು ಹೊಸ ಅನುಭವವಂತೆ. ಚಿತ್ರದಲ್ಲಿ ರಾಯಚೂರು ಮೂಲದ ಜ್ಯೋತಿಗೆ ಇಲ್ಲಿ ಸಂಪ್ರದಾಯಸ್ಥ ಕುಟುಂಬದ ಹುಡುಗಿ ಪಾತ್ರ ಸಿಕ್ಕಿದೆಯಂತೆ. ಅವಳಿಗೊಂದು ನ್ಯೂನ್ಯತೆ ಇದ್ದು, ಅದೇ ಸಿನಿಮಾಗೊಂದು ತಿರುವು ಎನ್ನುತ್ತಾರೆ ಅವರು. ಶಿಕಾರಿಪುರದ ವಿದ್ಯಾ ಶೆಟ್ಟಿಗಾರ್ ಎಂಬ ಮತ್ತೂಬ್ಬ ನಾಯಕಿಯೂ ಇಲ್ಲಿದ್ದಾರೆ. ಅವರಿಲ್ಲಿ ಪ್ರೀತಿ ನಂಬಿ ಯಾವ ರೀತಿ ಮೋಸ ಹೋಗುವ ಪಾತ್ರ ಮಾಡಿದ್ದಾರಂತೆ. ಚಿತ್ರದಲ್ಲಿ ಇನ್ನೊಬ್ಬ ನಾಯಕಿಯೂ ಇದ್ದಾರೆ. ಅವರ ಪಾತ್ರವೇ ಚಿತ್ರಕ್ಕೊಂದು ಜೀವಾಳ ಎಂಬುದು ಚಿತ್ರತಂಡದ ಮಾತು.
ಚಿತ್ರಕ್ಕೆ ವಿನಯ್ ಗೌಡ ಕ್ಯಾಮೆರಾ ಹಿಡಿದರೆ, ಎ.ಆರ್.ಕೃಷ್ಣ ಸಂಕಲನ ಮಾಡಿದ್ದಾರೆ. ಇನ್ನು, ಈ ಚಿತ್ರವನ್ನು ನಿರ್ಮಿಸಿರೋದು, ಚಿತ್ರಮಂದಿರದಲ್ಲಿ ಗೇಟ್ಕೀಪರ್ ಆಗಿ, ವಿತರಕರಾಗಿ, ಆ ಬಳಿಕ ನಿರ್ಮಾಣ ನಿರ್ವಹಣೆ ಸೇರಿದಂತೆ ಹಲವು ವಿಭಾಗದಲ್ಲಿ ಕೆಲಸ ಮಾಡಿ ಸುಮಾರು 24 ವರ್ಷ ಅನುಭವ ಪಡೆದಿರುವ ಬ್ರಿಜೇಶ್ ಕುಮಾರ್. ಇವರ ಜತೆಗೆ ಗೆಳಯ ಮಹೇಂದ್ರ ವರಕೂಡು ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ಕರುಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ