ಗುರುದ್ವಾರದಲ್ಲಿ ನಮಾಜ್ ಮಾಡಿ ಬಕ್ರೀದ್ ಆಚರಣೆ
Team Udayavani, Sep 3, 2017, 10:50 AM IST
ಗೋಪೇಶ್ವರ: ಬಕ್ರೀದ್ ದಿನ ಮುಸ್ಲಿಮರು ಮಸೀದಿ, ದರ್ಗಾ, ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ಸಹಜ. ಆದರೆ ಸಾವಿರಾರು ಮುಸ್ಲಿಮರು ಗುರುದ್ವಾರವೊಂದಕ್ಕೆ ತೆರಳಿ ನಮಾಜ್ ಮಾಡಿ, ಸೌಹಾರ್ದ ಮೆರೆದ ಕ್ಷಣಕ್ಕೆ ಉತ್ತರಾ ಖಂಡದ ಜೋಷಿಮಠ ನಗರ ಸಾಕ್ಷಿಯಾಗಿದೆ.
ಇಂಥ ಸೌಹಾರ್ದ ಮೂಡಲು ಕಾರಣ ಮಳೆ! ಹೌದು, ಬಕ್ರೀದ್ ಹಿನ್ನೆಲೆ ಇಲ್ಲಿನ ಮುಸ್ಲಿಮರು ಪ್ರಾರ್ಥನೆಗೆ ಮೈದಾನಕ್ಕೆ ತೆರಳಿದ್ದರು. ಆದರೆ ಇದ್ದಕ್ಕಿದ್ದಂತೆ ಮಳೆ ಸುರಿ ದಿದ್ದರಿಂದ ಪ್ರಾರ್ಥನೆಗೆ ಅಡ್ಡಿಯುಂ ಟಾ ಯಿತು. ಇದನ್ನು ಗಮನಿಸಿದ ನಗರದ ಗುರುದ್ವಾರದ ಪ್ರಬಂಧಕ ಸಮಿತಿ ಸದ ಸ್ಯರು, ಮೈದಾನದಲ್ಲಿದ್ದ ಎಲ್ಲ ಮುಸ್ಲಿಮ ರನ್ನು ಗುರುದ್ವಾರದ ಆವರಣಕ್ಕೆ ಕರೆಸಿ ಕೊಂಡು ಅಲ್ಲಿ ನಿಶ್ಚಿಂತೆಯಿಂದ ನಮಾಜ್ ಮಾಡಲು ಅವಕಾಶ ಕೊಟ್ಟಿದ್ದಾರೆ.