ಜೈಲು ಹಕ್ಕಿಗಳಿಗೂ ರೆಕ್ಕೆಪುಕ್ಕ ಜೋಡಿಸಿ, ಹಾರಲು ಬಿಡಿ !
Team Udayavani, Sep 16, 2017, 7:43 AM IST
ಹೊಸದಿಲ್ಲಿ: ಎಲ್ಲರ ಹಾಗೆ, ಜೈಲುಗಳಲ್ಲಿರುವ ಕೈದಿಗಳಿಗೂ ಹೊರಜಗತ್ತಿನ ಸಂಪರ್ಕ ಸಿಗುವಂತೆ ಮಾಡಿ, ಕೆಲಸಕ್ಕೆಂದು ಜೈಲಿನಿಂದ ಬೆಳಗ್ಗೆ ಹೋಗಿ, ಸಂಜೆ ವಾಪಸ್ ಬರುವ ಹಾಗೆ ವ್ಯವಸ್ಥೆ ಮಾಡಬಹುದಲ್ಲ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರಕಾರಗಳಿಗೆ ನಿರ್ದೇಶ ನೀಡಿದೆ.
ದೇಶದ 1,382 ಜೈಲುಗಳಲ್ಲಿರುವ ಅವ್ಯವಸ್ಥೆಯನ್ನು ಪರಿಗಣಿಸಿ, ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಕೊಂಡು ವಿಚಾರಣೆ ನಡೆಸುತ್ತಿರುವ ಕೋರ್ಟ್, ಎಲ್ಲ ರಾಜ್ಯಗಳಲ್ಲೂ ತೆರೆದ ಬಂದೀಖಾನೆ (ಓಪನ್ ಜೈಲ್) ಆರಂಭಿಸುವಂತೆ ಹೇಳಿದೆ. ಇದಷ್ಟೇ ಅಲ್ಲ, ಮೊದಲ ಬಾರಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿಗೆ ಬಂದ ವರಿಗೆ ಧೈರ್ಯ ತುಂಬಲು ಆಪ್ತ ಸಮಾ ಲೋಚಕರು ಮತ್ತು ಸಿಬಂದಿ ನೇಮಿಸಿ ಎಂದು ಸೂಚನೆ ನೀಡಿದೆ. ತೆರೆದ ಬಂದೀಖಾನೆಗಳಲ್ಲಿ ಕಾರಾ ಗೃಹ ಸಿಬಂದಿಯ ನಿಯಂತ್ರಣ ಕಡಿಮೆ ಇರುವುದರಿಂದ ಕೈದಿಗಳ ಮೇಲೆ ದೈಹಿಕ ಹಿಂಸೆ ನಡೆಯುವುದು ಕಡಿಮೆ. ಜತೆಗೆ ಸದ್ಯ ಜೈಲುಗಳು ಅಗತ್ಯಕ್ಕಿಂತ ಹೆಚ್ಚು ಕೈದಿಗಳನ್ನು ಹೊಂದಿದ್ದು, ಜಾಗದ ಕೊರತೆಯಿಂದ ನಲುಗುತ್ತಿವೆ. ಈ ಸಮಸ್ಯೆಗೂ ಓಪನ್ ಜೈಲು ಉತ್ತಮ ಪರಿಹಾರ ಎಂದು ನ್ಯಾ| ಮದನ್ ಬಿ. ಲೋಕುರ್ ಅವರ ನೇತೃತ್ವದ ಪೀಠ ರಾಜ್ಯ ಸರಕಾರಗಳಿಗೆ ನಿರ್ದೇಶಿಸಿದೆ.
ಕುಟುಂಬದವರ ಭೇಟಿಗೆ ಅವಕಾಶ ಕೊಡಿ: ಕೈದಿಗಳನ್ನು ಹೊರಜಗತ್ತಿನಿಂದ ಸಂಪೂರ್ಣವಾಗಿ ಮುಚ್ಚಿಡಬೇಡಿ. ಅವರ ಕುಟುಂಬ ಸದಸ್ಯರು ಭೇಟಿ ಗೆಂದು ಬಂದಾಗ ಹೆಚ್ಚಿನ ಸಮಯಾವ ಕಾಶ ನೀಡಿ. ಅಲ್ಲದೆ ಹೆಚ್ಚೆಚ್ಚು ಬಾರಿ ಬಂದು ಹೋಗುವಂತೆ ಅನುವು ಮಾಡಿ ಕೊಡಿ ಎಂದೂ ಕಾರಾಗೃಹಗಳ ಅಧಿ ಕಾರಿಗಳಿಗೆ ಸಲಹೆ ನೀಡಿದೆ.
ಅಸಹಜ ಸಾವಿಗೆ ಪರಿಹಾರ ಕೊಡಿಸಿ: ಇಷ್ಟು ಮಾತ್ರವಲ್ಲದೆ ಜೈಲು ಸೇರಿ ಅಸಹಜ ಸಾವಿಗೆ ತುತ್ತಾದ ಪ್ರಕರಣಗಳು ಜೈಲಿನಲ್ಲಿ ನಡೆದಿದ್ದರೆ, ಸ್ವಯಂ ಪ್ರೇರಣೆಯಿಂದ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ದೇಶದ 24 ಹೈಕೋರ್ಟ್ಗಳಿಗೆ ಸೂಚಿಸಿದೆ ಹಾಗೂ ಮೃತ ಪಟ್ಟವರ ಕುಟುಂಬಕ್ಕೆ ಪರಿಹಾರ ಸಿಗುವಂತೆ ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
Bhupal: ʼಭೂಪೇಂದ್ರ ಜೋಗಿʼ ರೀಲ್ಸ್ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ
Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು
ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು
MUST WATCH
ಹೊಸ ಸೇರ್ಪಡೆ
Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು
ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ
ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
ಪ್ರಜ್ವಲ್ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ