ಜಾನಪದ ತಂಡಗಳು ಹೆಚ್ಚು ಭಾಗವಹಿಸಲಿ: ಪೇಜಾವರ ಶ್ರೀ
Team Udayavani, Sep 18, 2017, 7:00 AM IST
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆ, ಕಲಾ ಪ್ರದರ್ಶನಗಳಲ್ಲಿ ಅನೇಕ ಹುಲಿ ವೇಷ ತಂಡಗಳು ಭಾಗವಹಿಸಿದ್ದವು. ಜಾನಪದ ತಂಡಗಳ ಸಂಖ್ಯೆ ಕಡಿಮೆಯಿತ್ತು. ಜಾನಪದ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆನ್ನುವುದು ನಮ್ಮ ಅಪೇಕ್ಷೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ರವಿವಾರ ರಾಜಾಂಗಣದಲ್ಲಿ ಬಹುಮಾನ ವಿತರಿಸಿ ಅವರು ಆಶೀವìಚನ ನೀಡಿದರು. ವಿಟ್ಲ ಪಿಂಡಿಯ ದಿನ ಶ್ರೀ ಕೃಷ್ಣ ವೇಷ, ಕುಣಿತ, ನೃತ್ಯಗಳು ಉತ್ತಮ ರೀತಿಯಲ್ಲಿ ನಡೆದಿವೆ. ಶ್ರೀಕೃಷ್ಣನಿಗೆ ನೃತ್ಯ, ವೇಷಗಳೆಂದರೆ ಅತೀವ ಪ್ರೀತಿ. ಅದು ಶ್ರೀಕೃಷ್ಣನಿಗೆ ನೀಡುವ ಸೇವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರೂ ಪ್ರಶಸ್ತಿ ಪಡೆಯಲು ಸಾಧ್ಯವಿಲ್ಲ. ಬಹುಮಾನ ಪಡೆಯದವರು ನಿರಾಶರಾಗಬಾರದು. ಎಲ್ಲರಿಗೂ ಶ್ರೀ ಕೃಷ¡ನ ಆಶೀರ್ವಾದ ಪ್ರಾಪ್ತವಾಗುತ್ತದೆ ಎಂದರು.
ಪರ್ಯಾಯ ಶ್ರೀ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ನಿರೂಪಿಸಿದರು.