ಟೀಮ್‌ ಇಂಡಿಯಾ-ಆಸೀಸ್‌ ಟಿ20 ಟೈಮ್‌


Team Udayavani, Oct 7, 2017, 11:17 AM IST

07-23.jpg

ರಾಂಚಿ: ಭಾರತದ ಕ್ರೀಡಾ ಪ್ರೇಮಿಗಳಿಗೆ ಪ್ರೊ ಕಬಡ್ಡಿ, ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌, ರಣಜಿ ಹಾಗೂ ಚುಟುಕು ಕ್ರಿಕೆಟ್‌ ಸಮರವನ್ನು ಏಕಕಾಲದಲ್ಲಿ ವೀಕ್ಷಿಸುವ ಅಪೂರ್ವ ಅವಕಾಶ! ಈ “ಫ‌ುಲ್‌ ನ್ಪೋರ್ಟ್ಸ್ ಪ್ಯಾಕೇಜ್‌’ಗೆ ಅ. 7ರ ಶನಿವಾರ ಸಾಕ್ಷಿಯಾಗಲಿದೆ. ಭಾರತ-ಆಸ್ಟ್ರೇಲಿಯ ತಂಡಗಳು 3 ಪಂದ್ಯಗಳ ಸರಣಿಯ ಮೊದಲ ಟಿ-20 ಪಂದ್ಯದಲ್ಲಿ ಸೆಣಸಲಿವೆ. ತಾಣ, ಧೋನಿ ಊರಾದ ರಾಂಚಿ. 

ಏಕದಿನದಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇ ಲಿಯಕ್ಕೆ 4-1 ಸೋಲಿನೇಟು ನೀಡಿದ ಭಾರತವೀಗ ಇದೇ ಆತ್ಮವಿಶ್ವಾಸದಲ್ಲಿ ಚುಟುಕು ಕ್ರಿಕೆಟ್‌ ಸರಣಿಯಲ್ಲೂ ಕಾಂಗರೂ ಪಡೆಯನ್ನು ಉರುಳಿಸುವ ಯೋಜನೆಯಲ್ಲಿದೆ. ಏಕದಿನದ ಸರಣಿ ಗೆಲುವು ಭಾರತವನ್ನು ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿಸಿತ್ತು. ಟಿ-20 ಯಶಸ್ಸು ಟೀಮ್‌ ಇಂಡಿಯಾವನ್ನು ಗರಿಷ್ಠ ದ್ವಿತೀಯ ಸ್ಥಾನಕ್ಕೆ ಕೊಂಡೊಯ್ಯಲಿದೆ. ಆದರೆ ಇದಕ್ಕೆ 3-0 ಕ್ಲೀನ್‌ಸ್ವೀಪ್‌ ಸಾಹಸ ಅಗತ್ಯ.

ಭಾರತದ್ದೇ ಮೇಲುಗೈ: ಸದ್ಯ ರ್‍ಯಾಂಕಿಂಗ್‌ ಲೆಕ್ಕಾಚಾರದಲ್ಲಿ ಈ ಎರಡೂ ತಂಡಗಳು ಬಹಳ ಕೆಳಗಿವೆ. ಭಾರತ 5ನೇ ಸ್ಥಾನದಲ್ಲಿದ್ದರೆ (115 ಅಂಕ), ಆಸ್ಟ್ರೇಲಿಯ ಏಳರಲ್ಲಿದೆ (110). ಆಸೀಸ್‌ ಎದುರಿನ ಸಾಧನೆಯ ಲೆಕ್ಕಾಚಾರದಲ್ಲಿ ಭಾರತದ್ದೇ  ಮೇಲುಗೈ. 9-3 ಗೆಲುವಿನ ದಾಖಲೆ ಟೀಮ್‌ ಇಂಡಿಯಾ ಪರವಾಗಿದೆ. ಆಸ್ಟ್ರೇಲಿಯದಲ್ಲಿ ಆಡಲಾದ ಕಳೆದ ವರ್ಷಾರಂಭದ ಸರಣಿಯಲ್ಲಿ 3-0 ಕ್ಲೀನ್‌ಸ್ವೀಪ್‌ ಸಾಧಿಸಿದ್ದು “ಮೆನ್‌ ಇನ್‌ ಬ್ಲೂ’ ಪರಾಕ್ರಮಕ್ಕೆ ಸಾಕ್ಷಿ. ಭಾರತ-ಆಸ್ಟ್ರೇಲಿಯ ನಡುವೆ 5 ದ್ವಿಪಕ್ಷೀಯ ಟಿ-20 ಸರಣಿಗಳನ್ನು ಆಡಲಾಗಿದ್ದು, ಭಾರತ ಮೂರನ್ನು ತನ್ನದಾಗಿಸಿಕೊಂಡಿದೆ. ಒಂದರಲ್ಲಷ್ಟೇ ಸೋತಿದೆ. ಇನ್ನೊಂದು ಸರಣಿ 1-1 ಸಮಬಲಗೊಂಡಿದೆ.

ಟಿ-20 ಕ್ರಿಕೆಟ್‌ನಲ್ಲಿ ಫೇವರಿಟ್‌ ತಂಡಗಳನ್ನು ಗುರುತಿಸಬಾರದು ಎಂಬ ಮಾತಿದೆ. ಕಾರಣ, ಇಲ್ಲಿ ಏನೂ ಸಂಭವಿಸಬಹುದು. ಕೇವಲ ಒಂದು ಓವರ್‌, ಒಬ್ಬ ಆಟಗಾರನಿಂದ ಇಡೀ ಪಂದ್ಯದ ದಿಕ್ಕೇ ಬದಲಾಗಬಲ್ಲದು. ಆದರೂ ಆಸ್ಟ್ರೇಲಿಯ ವಿರುದ್ಧ ಭಾರತ ಮೇಲುಗೈ ಸಾಧಿಸಬಹುದು ಎಂಬುದು ಅನೇಕರ ಲೆಕ್ಕಾಚಾರ.

ಭಾರತದ ಬೌಲಿಂಗ್‌ ವೈವಿಧ್ಯ: ಏಕದಿನದಲ್ಲಿ ಭಾರತ ಪ್ರತಿಯೊಂದು ವಿಭಾಗದಲ್ಲೂ ಪ್ರಭುತ್ವ ಸಾಧಿಸಿತ್ತು. ಬ್ಯಾಟಿಂಗ್‌, ಬೌಲಿಂಗ್‌ ವೆರೈಟಿ ಟೀಮ್‌ ಇಂಡಿಯಾದ ಹೆಚ್ಚುಗಾರಿಕೆಯಾಗಿತ್ತು. ಇನ್ನೊಂದೆಡೆ ಚಾಂಪಿ ಯನ್ನರಿಗೆ ತಕ್ಕ ಆಟವನ್ನು ಪ್ರದರ್ಶಿಸಲು ವಿಫ‌ಲವಾದ ಆಸ್ಟ್ರೇಲಿಯ ಬಹುತೇಕ ಎಲ್ಲ ವಿಭಾಗಗಳಲ್ಲೂ ಹಿಂದುಳಿದಿತ್ತು. 20 ಓವರ್‌ಗಳ ಕ್ರಿಕೆಟ್‌ನಲ್ಲಿ ಈವರೆಗೆ ಗಮನಾರ್ಹ ನಿರ್ವಹಣೆ ತೋರದ ಆಸೀಸ್‌, ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲಿದೆ ಎಂದು ಭಾವಿಸುವುದು ತಪ್ಪಾಗಬಹುದು.

ಅವಳಿ ಸ್ಪಿನ್ನರ್‌ಗಳಾದ ಅಶ್ವಿ‌ನ್‌, ಜಡೇಜ ಗೈರಲ್ಲೂ ಭಾರತ ಚುಟುಕು ಕ್ರಿಕೆಟಿಗೆ ಅಗತ್ಯವಿರುವ ಸಮರ್ಥ ಪಡೆಯನ್ನೇ ಹೊಂದಿದೆ. 38ರ ಹರೆಯದ ಆಶಿಷ್‌ ನೆಹ್ರಾ ಆಯ್ಕೆ ಅಚ್ಚರಿಯಾಗಿ ಕಂಡರೂ ಅವರ ಡೆತ್‌ ಓವರ್‌ ಸಾಮರ್ಥ್ಯದ ಬಗ್ಗೆ ಈಗಲೂ ವಿಶ್ವಾಸ ಇಡಬಹುದಾಗಿದೆ. ಇವರಿಗೆ ಭುವನೇಶ್ವರ್‌, ಬುಮ್ರಾ ತಕ್ಕ ಜತೆಗಾರರಾಗಿ ಗೋಚರಿಸುತ್ತಾರೆ. ಸ್ಪಿನ್ನಿಗೆ ಕುಲದೀಪ್‌, ಚಾಹಲ್‌, ಪಟೇಲ್‌, ಜಾಧವ್‌ ಇದ್ದಾರೆ. ಏಕದಿನ ಸರಣಿಶ್ರೇಷ್ಠ ಪಾಂಡ್ಯ ಇಲ್ಲಿಯೂ ಸುಂಟರಗಾಳಿಯಾಗುವುದು ಖಂಡಿತ.

ಧವನ್‌ ಮರಳಿದ್ದರಿಂದ ಬ್ಯಾಟಿಂಗ್‌ ವಿಭಾಗ ಹೆಚ್ಚು ಬಲಿಷ್ಠವಾಗಿದೆ. ರೋಹಿತ್‌, ಕೊಹ್ಲಿ, ಪಾಂಡೆ, ಧೋನಿ, ಜಾಧವ್‌, ಕಾರ್ತಿಕ್‌ ಅವರಿಂದ ಉತ್ತಮ ಆಟವನ್ನು ನಿರೀಕ್ಷಿಸಲಾಗಿದೆ. ಅಂದಹಾಗೆ ಭಾರತ ಕೊನೆಯ ಸಲ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಸೋತದ್ದು 2012ರ ವಿಶ್ವಕಪ್‌ನಲ್ಲಿ!

ಆಸೀಸ್‌ ಹೋರಾಟ ನಿರೀಕ್ಷೆ: ವಾರ್ನರ್‌, ಫಿಂಚ್‌, ಸ್ಮಿತ್‌, ಹೆಡ್‌ ಆಸ್ಟ್ರೇಲಿಯದ ಬ್ಯಾಟಿಂಗ್‌ ಹೀರೋಗಳು. ಏಕದಿನದಲ್ಲಿ ಮಿಂಚಿದ ಸ್ಟೊಯಿನಿಸ್‌ ಇಲ್ಲಿಲ್ಲ. ಫಾಕ್ನರ್‌ ಅವರನ್ನೂ ಮನೆಗೆ ಕಳಿಸಲಾಗಿದೆ. ಬದಲು ಆಲ್‌ರೌಂಡರ್‌ಗಳಾದ ಹೆನ್ರಿಕ್ಸ್‌, ಕ್ರಿಸ್ಟಿಯನ್‌ ಸೇರ್ಪಡೆಗೊಂಡಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಫಾರ್ಮ್ ಬಗ್ಗೆ ಅನುಮಾನವಿದೆ. ಎಡಗೈ ವೇಗಿ ಬೆಹೆಡಾಫ್ì ಪಾದಾರ್ಪಣೆಯ ಕ್ಷಣಗಣನೆಯಲ್ಲಿದ್ದಾರೆ. ಕೋಲ್ಟರ್‌ ನೈಲ್‌, ಕಮಿನ್ಸ್‌, ಝಂಪ, ರಿಚರ್ಡ್‌ಸನ್‌ ಬೌಲಿಂಗ್‌ ಕೈಚಳಕ ತೋರಬೇಕಾದ ಅಗತ್ಯವಿದೆ. ಆಗಷ್ಟೇ ನಿಜವಾದ ಟಿ-20 ಜೋಶ್‌ ನಿರೀಕ್ಷಿಸಲು ಸಾಧ್ಯ.

ಟಾಪ್ ನ್ಯೂಸ್

lKarkala ಮದ್ಯ ಅಕ್ರಮ ದಾಸ್ತಾನು: ವಶಕ್ಕೆ

Karkala ಮದ್ಯ ಅಕ್ರಮ ದಾಸ್ತಾನು: ವಶಕ್ಕೆ

Heavy Rain 9 ಜಿಲ್ಲೆಗಳಲ್ಲಿ ಮುಂದುವರಿದ ಮಳೆ

Heavy Rain 9 ಜಿಲ್ಲೆಗಳಲ್ಲಿ ಮುಂದುವರಿದ ಮಳೆ

ಪರಿಷತ್ತಿನ 6 ಕ್ಷೇತ್ರಗಳಿಗೆ ಚುನಾವಣೆ

MLC Elections; ಪರಿಷತ್ತಿನ 6 ಕ್ಷೇತ್ರಗಳಿಗೆ ಚುನಾವಣೆ

Bommai BJP

Modi 3ನೇ ಸಲ ಪ್ರಧಾನಿಯಾದ 3 ತಿಂಗಳಲ್ಲಿ ಕಾಂಗ್ರೆಸ್‌ ಇಬ್ಭಾಗ: ಬೊಮ್ಮಾಯಿ ಭವಿಷ್ಯ

1-qwe-ewewe

AAP ನಾಯಕರಿಗೆ 100 ಕೋಟಿ ಕಿಕ್ ಬ್ಯಾಕ್;ಕವಿತಾ ವಿರುದ್ಧ ಇಡಿ ಆರೋಪ

1-qwewewq

Delhi; ಹೊತ್ತಿ ಉರಿದ ತಾಜ್ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು

renukaacharya

Threat ಇವತ್ತೇ ನಿನಗೆ ಕೊನೆಯ ದಿನ; ರೇಣುಕಾಚಾರ್ಯ ಅವರಿಗೆ ವಿದೇಶದಿಂದ ಬೆದರಿಕೆ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsadads

DD ಸ್ಪೋರ್ಟ್ಸ್ ನಲ್ಲಿ ಟಿ20 ವಿಶ್ವಕಪ್‌, ಒಲಿಂಪಿಕ್ಸ್‌ ನೇರ ಪ್ರಸಾರ

pragyananda

Norway ಚೆಸ್‌ ಟೂರ್ನಿ: ಪ್ರಜ್ಞಾನಂದ ಪರಾಭವ

Kedar Jadhav

Kedar Jadhav; ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಆಲ್ ರೌಂಡರ್ ಕೇದಾರ್ ಜಾಧವ್

8

Natasa Stankovic: ಹಾರ್ದಿಕ್‌ ಪಾಂಡ್ಯ ಜೊತೆಗಿನ ಮದುವೆ ಫೋಟೋಗಳನ್ನು ಮತ್ತೆ ಹಂಚಿಕೊಂಡ ನತಾಶ

ಟಿ20 ವಿಶ್ವಕಪ್ ನ ಪಂದ್ಯಗಳನ್ನು ನಾನು ನೋಡುವುದಿಲ್ಲ..: ರಿಯಾಗ್ ಪರಾಗ್

T20 World Cup 2024: ವಿಶ್ವಕಪ್ ನ ಪಂದ್ಯಗಳನ್ನು ನಾನು ನೋಡುವುದಿಲ್ಲ..: ರಿಯಾನ್ ಪರಾಗ್

MUST WATCH

udayavani youtube

ನಿಮ್ಮ ಮಗುವಿಗೆ Adenoid ಸಮಸ್ಯೆ ಇದೆಯೇ ಇಲ್ಲಿದೆ ಪರಿಹಾರ

udayavani youtube

ಉಳ್ಳಾಲ: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

ಹೊಸ ಸೇರ್ಪಡೆ

Siddapura ಅಡಿಕೆ ಕಳವು ಪ್ರಕರಣ; ದೂರು ದಾಖಲು

Siddapura ಅಡಿಕೆ ಕಳವು ಪ್ರಕರಣ; ದೂರು ದಾಖಲು

lKarkala ಮದ್ಯ ಅಕ್ರಮ ದಾಸ್ತಾನು: ವಶಕ್ಕೆ

Karkala ಮದ್ಯ ಅಕ್ರಮ ದಾಸ್ತಾನು: ವಶಕ್ಕೆ

Udupi ಕಾರು ಮಾರಾಟ: ವಂಚನೆ; ದೂರು

Udupi ಕಾರು ಮಾರಾಟ: ವಂಚನೆ; ದೂರು

1-dsadads

DD ಸ್ಪೋರ್ಟ್ಸ್ ನಲ್ಲಿ ಟಿ20 ವಿಶ್ವಕಪ್‌, ಒಲಿಂಪಿಕ್ಸ್‌ ನೇರ ಪ್ರಸಾರ

pragyananda

Norway ಚೆಸ್‌ ಟೂರ್ನಿ: ಪ್ರಜ್ಞಾನಂದ ಪರಾಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.