ಮದುವೆಗಾಗಿ ಮರವೇರಿದ ಭೂಪ!
Team Udayavani, Oct 9, 2017, 7:35 AM IST
ಬಳ್ಳಾರಿ: ಮದುವೆ ಮಾಡಬೇಕೆಂದು ಒತ್ತಾಯಿಸಿ ಯುವಕನೋರ್ವ ಮರವೇರಿ ಕುಳಿತು ಎರಡು ರಾತ್ರಿಯನ್ನು ಅಲ್ಲೇ ಕಳೆದ ಪ್ರಸಂಗ ವೊಂದು ನಡೆದಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಯಂಬಳವಡ್ಡರಹಟ್ಟಿ ಗ್ರಾಮದ ಬಸವರಾಜ (32) ಮದುವೆಗಾಗಿ ಮರವೇರಿದ ಭೂಪ. ಕಾನಾಹೊಸಳ್ಳಿ ಪಿಎಸ್ಐ ಕೃಷ್ಣಾ ನಾಯ್ಕ ಹಾಗೂ ಪೊಲೀಸರು ಭಾನುವಾರ ಈತನ ಮನವೊಲಿಸಿ ಮರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಮರ ಏರಿದ ಬಸವರಾಜ ಅಂದು ಹಾಗೂ ಶನಿವಾರ ರಾತ್ರಿ ಆಹಾರವಿಲ್ಲದೇ ಕಳೆದಿದ್ದಾನೆ. ಪೋಷಕರು ತನಗೆ ಮದುವೆ ಮಾಡುತ್ತೇವೆಂದು ಹೇಳುವವರೆಗೂ ನಾನು ಮರದಿಂದ ಕೆಳಗಿಳಿಯಲ್ಲ ಎಂದು ಬಿಗಿ ಪಟ್ಟು ಹಿಡಿದಿದ್ದ ಎಂದು ಅವನ ಸ್ನೇಹಿತರು ಹೇಳಿದ್ದಾರೆ.
ಬಸವರಾಜನ ಪೋಷಕರು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ತನ್ನ ಬೇಡಿಕೆ ಪೂರೈಸಿಕೊಳ್ಳಲು ಸುಮಾರು 60 ಅಡಿ ಎತ್ತರದ ಮರವೇರಿದ ಬಸವರಾಜ ಕೆಳಗೆ ಬಿದ್ದರೆ ಅಪಾಯವಾಗಬಾರದು ಎಂದು ಕೆಳಗೆ ಪ್ಲಾಸ್ಟಿಕ್ ಚೀಲಗಳ ದೊಡ್ಡ ಬಲೆಯನ್ನು ಕಟ್ಟಿದ್ದನು. ಬಸವರಾಜ ಕಳೆದ ಎರಡು ವರ್ಷಗಳಿಂದ ಮನೆಯವರನ್ನು ಮದುವೆ ಮಾಡಿ ಎಂದು ಪೀಡಿಸುತ್ತಿದ್ದ. ಆದರೆ, ಯಾವುದೇ ದುಡಿಮೆ ಮಾಡದ ನಿನಗೆ ಯಾರು ಹೆಣ್ಣು ಕೊಡ್ತಾರೆ? ಅವಳನ್ನು ಹೇಗೆ ಸಾಕುತ್ತೀಯ? ಎಂದು ಅವನ ಪೋಷಕರು ಈತನಿಗೆ ಮದುವೆ ಮಾಡಿರಲಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!