ಡ್ಯೂಟಿ ಅವಧಿ ಮುಗಿದಿದೆ ಎಂದು ರನ್ ವೇನಲ್ಲಿ ವಿಮಾನ ಬಿಟ್ಟು ಹೋದ ಪೈಲಟ್
Team Udayavani, Nov 10, 2017, 5:37 PM IST
ನವದೆಹಲಿ: ಜೈಪುರದಿಂದ ದೆಹಲಿಗೆ ಹೊರಡಲು ವಿಮಾನವೊಂದು ರೆಡಿಯಾಗಿತ್ತು, ಆದರೆ ವಿಮಾನ ಇನ್ನೇನು ಟೇಕ್ ಆಫ್ ಆಗುತ್ತೆ ಎಂದು ಕಾದು ಕುಳಿತಿದ್ದ ಪ್ರಯಾಣಿಕರಿಗೆ ಶಾಕ್ ಕಾದಿತ್ತು. ಅದೇನಪ್ಪಾ ಅಂದರೆ ತನ್ನ ಕೆಲಸದ ಅವಧಿ ಮುಗಿಯಿತು ಎಂದು ಪೈಲಟ್ ವಿಮಾನದಿಂದ ಇಳಿದು ಹೊರಟೇಬಿಟ್ಟಿದ್ದ!
ಡಿಎನ್ ಎ ಪತ್ರಿಕೆಯ ವರದಿ ಪ್ರಕಾರ, ಲಕ್ನೋದಿಂದ ಜೈಪುರದ ಮೂಲಕ ದೆಹಲಿಗೆ ಈ ವಿಮಾನ ಪ್ರಯಾಣ ಬೆಳೆಸಬೇಕಿತ್ತು. ಆದರೆ ನನ್ನ ಡ್ಯೂಟಿ ಸಮಯ ಮುಗಿದಿದೆ ಎಂದು ಹೇಳಿ ಪೈಲಟ್ ಹೊರಟೇ ಬಿಟ್ಟಿದ್ದ, ಇದರಿಂದಾಗಿ ಸುಮಾರು 40 ಮಂದಿ ಪ್ರಯಾಣಿಕರು ಪರದಾಡುವಂತಾಗಿತ್ತು.
ಅಧಿಕಾರಿಗಳ ಪ್ರಕಾರ, ಕೆಲವರು ಬಸ್ ಮೂಲಕ ದೆಹಲಿಗೆ ಹೊರಟಿದ್ದರು, ಕೆಲವರಿಗೆ ಹೋಟೆಲ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗಿತ್ತು, ಉಳಿದ ಪ್ರಯಾಣಿಕರಿಗೆ ಗುರುವಾರ ಬೆಳಗ್ಗೆ ವಿಮಾನ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿತ್ತು ಎಂದು ತಿಳಿಸಿದ್ದಾರೆ.
ಪೈಲಟ್ ಡ್ಯೂಟಿ ಅವಧಿ ಮುಗಿದಿದ್ದರಿಂದ ಆತ ಮತ್ತೆ ವಿಮಾನ ಚಾಲನೆಗೆ ಒಪ್ಪಲಿಲ್ಲ ಎಂದು ಜೈಪುರ್ ವಿಮಾನ ನಿಲ್ದಾಣದ ನಿರ್ದೇಶಕ ಎಸ್ ಬಾಲ್ ಹರಾ ಅವರು ಹೇಳಿದ್ದಾರೆ. ಡೈರೆಕ್ಟರೇಟ್ ಜನರಲ್ ಸಿವಿಲ್ ಏವಿಯೇಷನ್ ಕಾಯ್ದೆಯನ್ವಯ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಅವಧಿಯ ಡ್ಯೂಟಿ ಮಾಡುವಂತಿಲ್ಲ ಎಂದು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ