ಮೂಡಬಿದಿರೆ ಕೋಟಿ ಚೆನ್ನಯ ಕಂಬಳಕ್ಕೆ  ಸಂಭ್ರಮದ ಚಾಲನೆ 


Team Udayavani, Nov 12, 2017, 2:30 PM IST

12-nOV-1.jpg

ಮೂಡಬಿದಿರೆ: ಇಪ್ಪತ್ತು ತಿಂಗಳ ಬಳಿಕ ಬಹಳಷ್ಟು ಸಂಭ್ರಮ, ಆಶಾವಾದಗಳೊಂದಿಗೆ ಮೂಡಬಿದಿರೆಯ 15ನೇ ವರ್ಷದ
ಕೋಟಿ ಚೆನ್ನಯ ಜೋಡುಕರೆ ಕಂಬಳ ಶನಿವಾರ ಬೆಳಗ್ಗೆ ಪ್ರಾರಂಭವಾಯಿತು.

ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ, ನಾಗರಕಟ್ಟೆ ಜೋಡುಕಟ್ಟೆ ಗರಡಿ, ಮೂಡಬಿದಿರೆ ಹನುಮಂತ ದೇವಸ್ಥಾನ, ಒಂಟಿಕಟ್ಟೆ ಅಯ್ಯಪ್ಪ ಗುಡಿ ಸಹಿತ ಹಲವು ಆರಾಧನಾ ಕ್ಷೇತ್ರಗಳಿಂದ ತಂದ ಪ್ರಸಾದವನ್ನು ಜೋಡುಕರೆಗೆ ಸಮರ್ಪಿಸಲಾಯಿತು.

ಸರ್ವ ಧರ್ಮೀಯರ ಪ್ರತಿನಿಧಿಗಳಾಗಿ ಪಾಲ್ಗೊಂಡ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ| ಮೂ| ಈಶ್ವರ ಭಟ್‌, ಅಲಂಗಾರು ಚರ್ಚ್‌ನ ರೆ| ಫಾ| ಸುನೀಲ್‌ ವೇಗಸ್‌, ಮೂಲ್ಕಿಯ ರೆ| ಫಾ| ಎಫ್‌. ಎಕ್ಸ್‌. ಗೋಮ್ಸ್‌ ಕರೆಯಲ್ಲಿ ಜ್ಯೋತಿ ಬೆಳಗುವುದರ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು. 

ಕಂಬಳವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಸಾಕ್ಷಿಯಾದ ಮೂಡಬಿದಿರೆ ಕಂಬಳ ಕ್ರೀಡಾಂಗಣದಲ್ಲಿ ಕಂಬಳದ ಸಂಶೋಧನ ಕೇಂದ್ರವನ್ನು ಪ್ರಾರಂಭಿಸುವ ದಿನ ಬರಲಿ ಎಂದು ರೆ| ಫಾ| ಎಫ್‌. ಎಕ್ಸ್‌ ಗೋಮ್ಸ್‌ ಹೇಳಿದರು.  ರೆ| ಫಾ| ಸುನೀಲ್‌ ವೇಗಸ್‌ ಮಾತನಾಡಿ, ಇದು ಸಂತೋಷದ, ಸಾಮರಸ್ಯದ ಕಂಬಳವಾಗಲಿ ಎಂದು ಹಾರೈಸಿದರು.

ಚೌಟರ ಅರಮನೆ ಕುಲದೀಪ ಎಂ. ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅಬುಲಾಲ ಪುತ್ತಿಗೆ, ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್‌ ಪೈ, ಉದ್ಯಮಿಗಳಾದ ಸ್ಟೀಫನ್‌ ಮೆಂಡಿಸ್‌, ಅರುಣ್‌ ಮೆಂಡಿಸ್‌, ನಂದ ಕುಮಾರ ಆರ್‌. ಕುಡ್ವ, ಕೆ. ವಿಶ್ವನಾಥ ಪ್ರಭು, ಅಬ್ದುಲ್‌ ಲತೀಫ್‌, ರೋಟರಿ ಕ್ಲಬ್‌ ಅಧ್ಯಕ್ಷ ಶ್ರೀಕಾಂತ ಕಾಮತ್‌, ಲಯನ್ಸ್‌ ಅಧ್ಯಕ್ಷ ರಾಮಚಂದ್ರ ಆಚಾರ್ಯ, ತ್ರಿಭುವನ್‌ ಜೇಸಿ ಅಧ್ಯಕ್ಷ ಸಂತೋಷ್‌ ಆರ್‌.ಎಲ್‌., ರೊಟರ್ಯಾಕ್ಟ್ ಅಧ್ಯಕ್ಷ ಸಚಿನ್‌ ಫೆರ್ನಾಂಡಿಸ್‌, ರೋಟರಿ ಮಿಡ್‌ಟೌನ್‌ ಅಧ್ಯಕ್ಷ ಕುಮಾರ್‌ ಪೂಜಾರಿ, ಟೆಂಪಲ್‌ ಟೌನ್‌ ಅಧ್ಯಕ್ಷ ಬಲರಾಮ್‌ ಭಟ್‌, ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್‌, ಅಭಿಜಿತ್‌ ಎಂ. ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.

137 ಜತೆ ಕೋಣಗಳು ತಮ್ಮ ಯಜಮಾನರು, ಓಟಗಾರರು ಹಾಗೂ ಪರಿವಾರದವರ ಜತೆಗೂಡಿ, ಕಂಬಳ ಸಮಿತಿಯ ಹುದ್ದರಿಗಳೊಂದಿಗೆ 146 ಮೀ. ಉದ್ದದ ಜೋಡುಕರೆಯಲ್ಲಿ ಹೆಜ್ಜೆ ಹಾಕಿ ಮುಂದಿನ ಓಟಕ್ಕೆ ತಯಾರಾದವು. ಶಾಸಕ, ಕಂಬಳ ಸಮಿತಿ ಅಧ್ಯಕ್ಷ ಕೆ. ಅಭಯಚಂದ್ರ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಕೆ. ಗುಣಪಾಲ ಕಡಂಬ, ಕೋಶಾಧಿಕಾರಿ, ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಎಸ್‌. ಕೋಟ್ಯಾನ್‌, ಉಪಾಧ್ಯಕ್ಷರಾದ ಪಂಚರತ್ನ ತಿಮ್ಮಯ ಶೆಟ್ಟಿ, ಪಿ.ಕೆ. ಥಾಮಸ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೆಲೆರಿಯನ್‌ ಸಿಕ್ವೇರಾ, ದಿನಕರ ಶೆಟ್ಟಿ ಬೆಳುವಾಯಿ, ಪ್ರೇಮನಾಥ ಮಾರ್ಲ, ಕಾರ್ಯದರ್ಶಿ ರತ್ನಾಕರ ಸಿ. ಮೊಲಿ, ಮುಡಾ ಅಧ್ಯಕ್ಷ ಸುರೇಶ ಪ್ರಭು, ಚಂದ್ರಹಾಸ ಸನಿಲ್‌ ಏರಿಮಾರುಬರ್ಕೆ, ನವೀನ್‌ ಚಂದ್ರ ಅಂಬೂರಿ, ಹರ್ಷವರ್ಧನ ಪಡಿವಾಳ್‌, ರಾಜೀವ್‌ ಶೆಟ್ಟಿ ಎಡೂ¤ರು, ಜತೆ ಕಾರ್ಯದರ್ಶಿಗಳಾದ ಪ್ರಭಾಕರ ಹೆಗ್ಡೆ ಬೆಳುವಾಯಿ, ನಮಿರಾಜ (ನೇಮಿ), ಕಾನ ಮಾದು ಭಂಡಾರಿ, ಗೋಪಾಲ ಬಂಗೇರ, ಗಿರೀಶ್‌ ಕೋಟ್ಯಾನ್‌ ಒಂಟಿಕಟ್ಟೆ, ವಾಸು ಪೂಜಾರಿ ಸಹಿತ ಪದಾಧಿಕಾರಿಗಳಿದ್ದರು. ನವೀನ್‌ ಚಂದ್ರ ಅಂಬೂರಿ, ರತ್ನಾಕರ ಸಿ. ಮೊಲಿ, ನಮಿರಾಜ ಮೊದಲಾದವರು ನಿರೂಪಿಸಿದರು.

ಕಂಬಳ ಉಳಿಯಲಿ
‘ಜಾಗದ ಭೋಗ ಮಲ್ಲೆ, ಮಣ್ಡ್ ದ ಭಾಗ್ಯ ಮಲ್ಲೆ, ದೇವೆರೆ ಸತ್ಯ ಮಲ್ಲೆ, ಹಿರಿಯೆರೆ ಧರ್ಮ ಮಲ್ಲೆ. ಇದು ಈ ಕಂಬಳದ ಭೂಮಿಗೂ ಅನ್ವಯ. ಭಕ್ತಿ ಶ್ರದ್ಧೆ, ಪರಿಶ್ರಮದ ಪ್ರತೀಕವಾದ ಕಂಬಳ ಉಳಿದು ಬೆಳೆಯಲಿ’ ಎಂದು ಅಲಂಗಾರು ವೇ| ಮೂ| ಈಶ್ವರ ಭಟ್‌ ಅವರ ನುಡಿದಾಗ ಕಂಬಳಾಭಿಮಾನಿಗಳೆಲ್ಲ ರೋಮಾಂಚನಗೊಂಡರು.

ಟಾಪ್ ನ್ಯೂಸ್

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

Udupi Gitanjali Silk, Shantisagar Hotel founder Neere Bailur Govinda Naik passes away

Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

Fake CBI ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ಪಾರು

Fake CBI ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ಪಾರು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

swati maliwal

AAP; ಸಂತ್ರಸ್ತೆಯಾದ ಸ್ವಾತಿ ಮಲಿವಾಲ್

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.