ಕಂತ್ರಿ ಟು ಕಂಟ್ರಿ, ಗಡ್ಡಪ್ಪ ಬಾಯಲ್ಲಿ ಮತ್ತೆ ಡಬಲ್‌ ಮೀನಿಂಗ್‌


Team Udayavani, Nov 17, 2017, 6:20 AM IST

GADDAPPA.jpg

“ಕಂತ್ರಿ ಬಾಯ್ಸ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಸಂಧ್ಯಾ, ಆರಂಭದಲ್ಲಿ ನಿರ್ದೇಶಕರಿಗೆ ಒಂದು ತಿಂಗಳು ಆಟವಾಡಿಸಿದ್ದರಂತೆ. “ನನ್ನ ಸಿನಿಮಾದಲ್ಲಿ ನಟಿಸ್ತೀರಾ’ ಎಂದು ಕೇಳಿದ್ದ ನಿರ್ದೆಶಕ ರಾಜು ಅವರಿಗೆ “ತಾನು ಬಿಝಿ ಇದ್ದೇನೆ’ ಎನ್ನುತ್ತಾ ಒಂದು ತಿಂಗಳು ಆಟವಾಡಿಸಿದ ನಂತರ ತಮ್ಮ ಪಾತ್ರ ಕೇಳಿ ಒಪ್ಪಿಕೊಂಡರಂತೆ. ಅವರು ಕಥೆ ಹೇಳಲು ಬಂದಾಗ ಒಂದು ವಿಷಯವನ್ನು ಮೊದಲೇ ಸ್ಪಷ್ಟಪಡಿಸಿದರಂತೆ. “ನಾನು ಟಾಮ್‌ ಗರ್ಲ್. ನನಗೆ ನಯ, ನಾಜೂಕು ಗೊತ್ತಿಲ್ಲ. ಹಾಗಾಗಿ, ಆ ತರಹದ ಪಾತ್ರವಾದರೆ ಕಷ್ಟವಾಗುತ್ತದೆ’ ಎಂದರಂತೆ. ಕೊನೆಗೆ ನಿರ್ದೇಶಕರು ತುಂಬಿದ ದೈರ್ಯದಿಂದ ತಾನು ನಟಿಸಿದ್ದಾಗಿ ಹೇಳಿಕೊಂಡರು ಶಾಲಿನಿ.

ಅಂದಹಾಗೆ, “ಕಂತ್ರಿಬಾಯ್ಸ’ ಸಂಪೂರ್ಣ ಹೊಸಬರ ಚಿತ್ರ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಚಿತ್ರವನ್ನು ಎಸ್‌. ರಾಜು ಚಟ್ನಳ್ಳಿ ಎನ್ನುವವರು ನಿರ್ದೇಶಿಸಿದ್ದಾರೆ. ಇವರಿಗಿದು ಮೊದಲ ಚಿತ್ರ. ಈ ಹಿಂದೆ ಅನೇಕ ಕಾಮಿಡಿ ಧಾರಾವಾಹಿ ಹಾಗೂ ಶೋಗಳಿಗೆ ಬರೆಯುತ್ತಿದ್ದ ಇವರಿಗೆ ಅವಕಾಶ ಕೊಟ್ಟವರು ಹೇಮಂತ್‌ ಗೌಡ. ಹೇಮಂತ್‌ ಗೌಡ ಅವರು ಕೂಡಾ ಸಿನಿಮಾ ಮಾಡಬೇಕೆಂದು ಓಡಾಡಿಕೊಂಡಿದ್ದಾಗ, ರಾಜು ಅವರ ಪರಿಚಯವಾಯಿತಂತೆ. ಜೊತೆಗೆ ಅವರ ಪ್ರತಿಭೆಯ ಪರಿಚಯವೂ ಆಗಿ ಸಿನಿಮಾ ನಿರ್ಮಿಸಿದ್ದಾಗಿ ಹೇಳಿಕೊಂಡರು ಹೇಮಂತ್‌ ಗೌಡ. 

ಎಲ್ಲಾ, ಓಕೆ “ಕಂತ್ರಿ ಬಾಯ್ಸ’ ಸಿನಿಮಾದಲ್ಲಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಅದಕ್ಕೆ ರಾಜು ಉತ್ತರಿಸುತ್ತಾರೆ. “ಚಿತ್ರದಲ್ಲಿ ಸಾಕಷ್ಟು ತರೆಲ ಅಂಶ, ಫ‌ನ್ನಿ ಡೈಲಾಗ್‌ಗಳಿವೆ. ಅದರ ಜೊತೆಗೆ ಒಂದು ಗಟ್ಟಿ ಕಥೆ ಇದೆ. ಸಮಾಜದಲ್ಲಿ ವೇಶ್ಯೆಯೊಬ್ಬಳು ಅನುಭವಿಸುವ ಕಷ್ಟಗಳ ಬಗ್ಗೆ ಇಲ್ಲಿ ಹೇಳಲಾಗಿದೆ. ವೇಶ್ಯೆಯ ಜೀವನಕ್ಕೆ ಕೇವಲ ಆಕೆ ಮಾತ್ರ ಕಾರಣವಾಗಿರೋದಿಲ್ಲ. ಪುರುಷ ಕೂಡಾ ಕಾರಣನಾಗುತ್ತಾನೆ ಎಂಬ ಅಂಶವನ್ನು ಇಲ್ಲಿ ಹೇಳಿದ್ದೇವೆ. ಜೊತೆಗೆ ಕಂತ್ರಿಬಾಯ್ಸ ಮುಂದೆ ಹೇಗೆ ಕಂಟ್ರಿಬಾಯ್ಸ ಆಗುತ್ತಾರೆಂಬ ಅಂಶವೂ ಇಲ್ಲಿದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು ರಾಜು. 

ಚಿತ್ರದಲ್ಲಿ ಅರವಿಂದ್‌ ನಾಯಕರಾಗಿ ನಟಿಸಿದ್ದಾರೆ. ಚಿತ್ರದಲ್ಲಿ  ವಾಸಂತಿ ಹಾಗೂ ಕನಕ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲಿ ಗಡ್ಡಪ್ಪ ಕೂಡಾ ನಟಿಸಿದ್ದು, ಮತ್ತೂಮ್ಮೆ ಅವರ ಬಾಯಲ್ಲಿ ಡಬಲ್‌ ಮೀನಿಂಗ್‌ ಸಂಭಾಷಣೆಗಳು “ನಲಿ’ದಾಡಿವೆ.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.