ಬಾಂಗ್ಲಾ, ಅಸ್ಸಾಂ ವಲಸಿಗರ ಬಗ್ಗೆ ಎಚ್ಚರವಿರಲಿ: ಶಾಸಕ ಬೋಪಯ್ಯ


Team Udayavani, Nov 30, 2017, 3:50 PM IST

30-32.jpg

ಮಡಿಕೇರಿ: ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸುವ ಫ‌ಲಾನು ಭವಿಗಳಿಗೆ ದೃಢೀಕರಣ ಪತ್ರ ನೀಡುವ ಹಂತದಲ್ಲಿ ಬಾಂಗ್ಲಾ ಮತ್ತು ಅಸ್ಸಾಂ ವಲಸಿಗರ ಬಗ್ಗೆ ಎಚ್ಚರಿಕೆ ವಹಿಸು ವಂತೆ ಶಾಸಕ  ಕೆ.ಜಿ. ಬೋಪಯ್ಯ  ಗ್ರಾ. ಪಂ.‌ ಪಿಡಿಒಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಮಡಿಕೇರಿ ತಾ. ಪಂ. ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸುವವರ ಬಗ್ಗೆ ತೀವ್ರ ನಿಗಾ ವಹಿಸಿ, ಅಸ್ಸಾಂ, ಬಾಂಗ್ಲಾ ದೇಶಿಗರಾಗಿದ್ದಲ್ಲಿ ಯಾವುದೇ ಕಾರಣಕ್ಕು ಅಂತಹವರಿಗೆ ದೃಢೀಕರಣ ಪತ್ರ ನೀಡಕೂಡದೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು. 

ಅರ್ಜಿ ಸಲ್ಲಿಸಲು ಅವಕಾಶ 
ಸರಕಾರಿ ಜಾಗ ಒತ್ತುವರಿ ಸಕ್ರಮದ 94 ಸಿ ಮತ್ತು 94ಸಿಸಿ ಅರ್ಜಿ ಸಲ್ಲಿಕೆಗೆ ಪ್ರಸಕ್ತ ಸಾಲಿನ ಡಿ. 31ರ ವರೆಗೆ ಅವಕಾಶವಿದ್ದು, ಸೌಲಭ್ಯದತ್ತ ಆಸಕ್ತರಾಗಿರುವವರು ಅರ್ಜಿ ಸಲ್ಲಿಸುವಂತೆ ಶಾಸಕ ಬೋಪಯ್ಯ ಇದೇ ಸಂದರ್ಭ ಸೂಚಿಸಿ,  ಈ ಹಿಂದೆ 2012ರ ಒಳಗೆ ಸರಕಾರಿ ಜಾಗ ಒತ್ತುವರಿ ಮಾಡಿ ಕೊಂಡಿದ್ದವರಿಗೆ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿತ್ತು. ಆದರೆ, ಇದೀಗ ಸರಕಾರ ಡಿಸೆಂಬರ್‌ ಅಂತ್ಯದವರೆಗೆ ಕಾಲಾವ ಕಾಶ ವಿಸ್ತರಿಸಿರುವುದಾಗಿ ತಿಳಿಸಿದರು.

ತಹಶೀಲ್ದಾರ್‌ ಕುಸುಮಾ ಅವರು ಶಾಸಕರಿಗೆ ಮಾಹಿತಿ ನೀಡಿ, 94ಸಿ ಯಡಿ ಮಡಿಕೇರಿ ತಾಲೂಕಿನಲ್ಲಿ ಸಲ್ಲಿಕೆಯಾಗಿದ್ದ 2,208 ಅರ್ಜಿಗಳು ಬಂದಿದ್ದು, ಇದರಲ್ಲಿ 2,115 ಅರ್ಜಿ ವಿಲೇಯಾಗಿದ್ದು, 93 ಬಾಕಿ ಇರುವುದಿಲ್ಲವೆಂದು ಮಾಹಿತಿಯನ್ನಿತ್ತರು.  ಈ ಹಂತದಲ್ಲಿ ತಾ.ಪಂ. ಸದಸ್ಯರಾ ನಾಗೇಶ್‌ ಕುಂದಲ್ಪಾಡಿ, ತಮ್ಮ ಸಂಪಾಜೆ ಕ್ಷೇತ್ರ ವ್ಯಾಪ್ತಿಯಲ್ಲಿ 94 ಸಿಯಡಿ 60ರಿಂದ 70 ಅರ್ಜಿಗಳು ಸಲ್ಲಿಕೆಯಾಗಿದ್ದು, ಇಲ್ಲಿಯವರೆಗೆ ಕೇವಲ ಏಳೆೆಂಟು ಮಂದಿಗಷ್ಟೆ ಹಕ್ಕುಪತ್ರವನ್ನು ನೀಡಲಾಗಿದೆ ಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀ ಲ್ದಾರ್‌, ಹೆದ್ದಾರಿ ಬದಿಯಲ್ಲಿ   ಜಾಗ  ಮಂಜೂರಾತಿಗೆ ಕೋರಿದ ಅರ್ಜಿಗಳಷ್ಟೆ ತಿರಸ್ಕೃತವಾಗಿದೆಯೆಂದು ಸಮಜಾಯಿಷಿಕೆ ನೀಡಿದರೆ, ಶಾಸಕ ಬೋಪಯ್ಯ ಅವರು, ಸಂಪಾಜೆ ವಿಭಾಗ ದಲ್ಲಿ ಸಲ್ಲಿಕೆಯಾದ ಅರ್ಜಿಗಳ ಮಾಹಿತಿ ನೀಡಲು ನಾಗೇಶ್‌ ಕುಂದಲ್ಪಾಡಿ ಅವರಿಗೆ ತಿಳಿಸಿದರು.

ನವಗ್ರಾಮದಲ್ಲಿ ಜನರಿಲ್ಲ
ಗಾಳಿಬೀಡು ಗ್ರಾಪಂ ಅಧ್ಯಕ್ಷ ಸುಭಾಷ್‌ ಮಾತನಾಡಿ, ಕಳೆದ ಹದಿನೈದು ವರ್ಷಗಳ ಹಿಂದೆ ಗಾಳಿಬೀಡಿನಲ್ಲಿ  ನವಗ್ರಾಮ ಯೋಜನೆಯಡಿ ನಿರ್ಮಾಣವಾದ 15 ರಿಂದ 20 ಮನೆಗಳಲ್ಲಿ ಕೇವಲ ಎರಡು ಮೂರು ಮಂದಿ ಮಾತ್ರ ನೆಲೆಸಿದ್ದಾರೆ. ಈ ಮನೆಗಳಿಗೆ ಹಕ್ಕುಪತ್ರ ಒದಗಿಸಲಾಗಿದ್ದರು ಆರ್‌ಟಿಸಿ ಒದಗಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರೆ, ತಹಶೀಲ್ದಾರ್‌ ಅವರು ನವಗ್ರಾಮ ಯೋಜನೆಯ ಮನೆಗಳಿಗೆ ನಿಯಮದಂತೆ ಹಕ್ಕುಪತ್ರವನ್ನಷ್ಟೆ ನೀಡ ಲಾಗುತ್ತದೆ. ಆರ್‌ಟಿಸಿ ಇಲ್ಲವೆಂದು ಸ್ಪಷ್ಟಡಿಸಿದರು.

ಮರಗೋಡು ಗ್ರಾ. ಪಂ. ಅಧ್ಯಕ್ಷ ಬಿದ್ರುಪಣೆ ಮೋಹನ್‌ ಮಾತನಾಡಿ, ಪಂಚಾಯತ್‌ ಶ್ಮಶಾನ ಜಾಗ ಒತ್ತುವರಿ ಮಾಡಿರುವುದನ್ನು ಪ್ರಸ್ತಾವಿಸಿದಾಗ ಶಾಸಕ ಬೋಪಯ್ಯ, ಅಂತಹ ಒತ್ತುವರಿಯನ್ನು ಎಳೆದು ಹಾಕುವಂತೆ ಸೂಚಿಸಿದರು.
ಸಭೆಯಲ್ಲಿ  ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ, ಮಡಿಕೆೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್‌, ಉಪಾಧ್ಯಕ್ಷ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್‌ ತಮ್ಮಯ್ಯ, ಇಒ ಜೀವನ್‌ ಕುಮಾರ್‌, ಪ್ರೊಬೇಷನರಿ ಇಒ ಲಕ್ಷ್ಮೀ ಉಪಸ್ಥಿತರಿದ್ದರು.

ಯುಜಿಡಿ ಎಂಜಿನಿಯರ್‌ ಅಮಾನತಿಗೆ ನಿರ್ಣಯ ಮಾಡಿ ಮಡಿಕೇರಿ ನಗರ ವ್ಯಾಪ್ತಿಯ ಒಳಚರಂಡಿ ಕಾಮಗಾರಿಯ ಅವ್ಯವಸ್ಥೆಗಳ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ನಗರಸಭೆಯಲ್ಲಿ ಯುಜಿಡಿ ಇಂಜಿನಿಯರ್‌ ಅಮಾನತಿಗೆ ನಿರ್ಣಯ ಕೈಗೊಂಡು ಕಳುಹಿಸಿಕೊಡುವಂತೆ ನಗರಸಭಾ ಆಯುಕ್ತರಿಗೆ ಸ್ಪಷ್ಟ ನಿರ್ದೇಶನ ನೀಡಿದರು.

    ತಾಪಂ ತ್ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಒಳಚರಂಡಿ ಯೋಜನೆಯಡಿ ಶುದ್ಧೀಕರಣ ಘಟಕ ನಿರ್ಮಾಣಕ್ಕೂ ಮೊದಲೆ ಪೈಪ್‌ ಅಳವಡಿಕೆಯಿಂದ ರಸ್ತೆಗಳು ಹಾಳಾಗಿವೆ. ಇದರ ದುರಸ್ತಿ ಸಮರ್ಪಕವಾಗಿ ನಡೆಯುತ್ತಿಲ್ಲ, ಈ ಬಗ್ಗೆ ಅಗತ್ಯ ಕ್ರಮವನ್ನೂ ನೀವು ಕೈಗೊಳ್ಳುತ್ತಿಲ್ಲವೆಂದು ನಗರಸಭಾ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ಈ ಸಂದರ್ಭ ನಗರಸಭಾ ಆಯುಕ್ತರಾದ ಬಿ. ಶುಭಾ ಮಾತನಾಡಿ, ಯುಜಿಡಿ ಯೋಜನೆಯಡಿ ಪೈಪ್‌ ಅಳವಡಿಕೆಯ ಅನಂತರ ಆರು ತಿಂಗಳ ಕಾಲಾವಕಾಶದ ಬಳಿಕ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಯುಜಿಡಿ ಅಳವಡಿಕೆಯ ಚರಂಡಿ ಕುಸಿಯುತ್ತದೆ ಎಂದು ಮತ್ತು ಯುಜಿಡಿಗೆ ಸಂಬಂಧಿಸಿದಂತೆ ನಗರದ ಒಂಬತ್ತು ಕಡೆಗಳಲ್ಲಿ ಅಗತ್ಯ ಸಂಸ್ಕರಣ ಘಟಕಗಳಿಗೆ ಜಾಗವನ್ನು ಒದಗಿಸಿಲ್ಲವೆಂದು ತಿಳಿಸಿದರು. ಈ ಬಗ್ಗೆ ಡಿಸಿಯವರೊಂದಿಗೆ ಚರ್ಚಿಸಲಾಗಿದ್ದು, ಅಗತ್ಯವಿರುವೆಡೆ ಜಾಗ ಸ್ವಾಧೀನಕ್ಕೆ ಪ್ರಯತ್ನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಟಾಪ್ ನ್ಯೂಸ್

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.