ದಯವಿಟ್ಟು ಬೆಂಕಿ ಹಾಕಬೇಡಿ


Team Udayavani, Jan 4, 2018, 8:19 AM IST

04-3.jpg

ಮಹಾರಾಷ್ಟ್ರದಲ್ಲಿ ಮತ್ತೂಮ್ಮೆ ಮರಾಠ-ದಲಿತ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ಪುಣೆಯಲ್ಲಿ ಭೀಮಾ ಕೋರೆಗಾಂವ್‌ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಹುಟ್ಟಿಕೊಂಡ ಹಿಂಸಾಚಾರ ಮುಂಬಯಿ ಸೇರಿದಂತೆ ರಾಜ್ಯದ ಇತರೆಡೆಗಳಿಗೆ ಹರಡಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ ನ್ಯಾಯಾಂಗ ತನಿಖೆಗೆ ಆದೇಶಿಸಿದ ಬಳಿಕ ಹಿಂಸಾಚಾರ ತುಸು ತಣ್ಣಗಾಗಿರುವಂತೆ ಕಂಡಿದ್ದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮಹಾರಾಷ್ಟ್ರದಲ್ಲಿ ದಲಿತ-ಮರಾಠ ಸಂಘರ್ಷಕ್ಕೆ ಶತಮಾನಗಳ ಇತಿಹಾಸವೇ ಇದೆ.

ಅತಿ ಹೆಚ್ಚು ದಲಿತ ಜನಸಂಖ್ಯೆಯ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದಲ್ಲಿ ಈ ಮಾದರಿಯ ಹಿಂಸಾಚಾರಗಳಿಗೆ ರಾಜಕೀಯ ಬಣ್ಣ ಬಳಿಯಲು ಹೆಚ್ಚು ಸಮಯವೇನೂ ಹಿಡಿಯುವುದಿಲ್ಲ. ಇದೀಗ ಭೀಮಾ ಕೋರೆಗಾಂವ್‌ ವಿಚಾರದಲ್ಲೂ ನೈಜ ವಿಷಯಕ್ಕಿಂತ ಜಾತಿ ರಾಜಜಕೀಯವೇ ಮುನ್ನೆಲೆಗೆ ಬಂದು ವಿಜೃಂಭಿಸುತ್ತಿದೆ.  200 ವರ್ಷದ ಹಿಂದೆ ಬ್ರಿಟಿಶ್‌ ಸೇನೆ ಪೇಶ್ವೆಗಳ ಸೇನೆಯನ್ನು ಕೋರೆಗಾಂವ್‌ ಭೀಮಾದಲ್ಲಿ ಸೋಲಿಸಿದ ವಿಜಯೋತ್ಸವವನ್ನು ಪ್ರತಿ ವರ್ಷ ಪುಣೆಯಲ್ಲಿ ಆಚರಿಸಲಾಗುತ್ತದೆ. ಇಷ್ಟರ ತನಕ ಸದ್ದಿಲ್ಲದೆ ನಡೆಯುತ್ತಿದ್ದ ಈ ಕಾರ್ಯಕ್ರಮ ಈ ಸಲ ಹಿಂಸಾಚಾರಕ್ಕೆ ತಿರುಗಲು ರಾಜಕೀಯವೇ ಮುಖ್ಯ ಕಾರಣ. ಈ ಸಲದ ಆಚರಣೆಯಲ್ಲಿ ಜೆಎನ್‌ಯು ವಿದ್ಯಾರ್ಥಿ ಉಮರ್‌ ಖಾಲಿದ್‌ ಮತ್ತು ಗುಜರಾತಿನ ದಲತಿ ಮುಖಂಡ ಹಾಗೂ ಶಾಸಕ ಜಿಗ್ನೇಶ್‌ ಮೇವಾನಿ ಭಾಗವಹಿಸಿದ್ದಾರೆ. ಇವರು ನೀಡಿದ ಪ್ರಚೋದನಕಾರಿ ಹೇಳಿಕೆ ಉಳಿದ ಸಮುದಾಯದವರನ್ನು ಕೆರಳಿಸಿದ್ದು ಹಿಂಸಾಚಾರಕ್ಕೆ ಇದು ಕಾರಣ ಎನ್ನಲಾಗುತ್ತಿದೆ.

ಇದೇ ವೇಳೆ ಇನ್ನೊಂದು ತರ್ಕದ ಪ್ರಕಾರ ದಲಿತರು ಇಲ್ಲಿ ಆಚರಿಸುತ್ತಿರುವುದು ನಿಜವಾಗಿ ಬ್ರಿಟಿಷರ ವಿಜಯೋತ್ಸವವನ್ನು. ಇದು ಮರಾಠರು ಮಾತ್ರವಲ್ಲದೆ ಕೆಲವು ಬಲಪಂಥೀಯ ಸಂಘಟನೆಗ ಸಿಟ್ಟಿಗೆ ಕಾರಣವಾಗಿದೆ. ಹೀಗಾಗಿ ಹಿಂಸಾಚಾರದ ಹಿಂದೆ ಆರ್‌ಎಸ್‌ಎಸ್‌ ಇದೆ ಎಂದು ಆರೋಪಿಸುತ್ತಿದ್ದಾರೆ. ಕಳೆದ ವರ್ಷ ಕೋಪರ್ಡಿಯಲ್ಲಿ ಮರಾಠ ಸಮುದಾಯದ ಯುವತಿಯನ್ನು ದಲಿತ ಸಮುದಾಯದ ಕೆಲ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಂದ ಘಟನೆ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಯುವತಿಗೆ ನ್ಯಾಯ ಕೊಡಿಸಲು ಮರಾಠರು ಪ್ರಾರಂಭಿಸಿದ ಪ್ರತಿಭಟನೆ ಕಡೆಗೆ ಮೀಸಲಾತಿ ಬೇಡಿಕೆ ತಿರುಗಿ ಸರಕಾರಕ್ಕೆ ತಲೆನೋವು ತಂದಿತ್ತು. ನಿರ್ದಿಷ್ಟವಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ರೀತಿಜಾತಿಗಳನ್ನು ಎತ್ತಿ ಕಟ್ಟಿ ಸಂಘರ್ಷ ಹುಟ್ಟು ಹಾಕುತ್ತಿರುವ ಪ್ರಯತ್ನಗಳು ವ್ಯವಸ್ಥಿತಾಗಿ ನಡೆಯುತ್ತಿರುವುದು ಎದ್ದು ಕಾಣುತ್ತಿರುವ ಅಂಶ. 2006ರಲ್ಲಿ ಕಾನ್‌ಪುರದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಅಪಚಾರವಾದ ಘಟನೆಯ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಸ್ಫೋಟಗೊಂಡ ಹಿಂಸಾಚಾರದಿಂದ ಹಲವು ದಿನಗಳ ಕಾಲ ನಗರ ಹೊತ್ತಿ ಉರಿದದ್ದು ರಾಜ್ಯದ ಜನರು ಇನ್ನೂ ಮರೆತಿಲ್ಲ. ಇದೀಗ ಭೀಮಾ ಕೋರೆಗಾಂವ್‌ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರವೂ ಇದೇ ಮಾದರಿಯ ತಿರುವು ಪಡೆದುಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ ಮೇಲಿದೆ.

ಮರಾಠರು, ದಲಿತರು ಮಹಾರಾಷ್ಟ್ರದ ಎರಡು ಪ್ರಬಲ ಸಮುದಾಯ. ರಾಜಕೀಯವಾಗಿ ಎರಡೂ ಪಂಗಡಗಳು ಬಲಿಷ್ಠ ವಾಗಿದ್ದರೂ ಅಧಿಕಾರ ಅನುಭವಿಸುವ ಹೆಚ್ಚಿನ ಅವಕಾಶ ಮರಾಠರಿಗೆ ಸಿಕ್ಕಿದೆ. ಶತಮಾನಗಳಿಂದಲೂ ದಲಿತರು ತುಳಿತಕ್ಕೊಳಗಾಗಿದ್ದಾರೆ. ಇಂದಿಗೂ ಈ ಪ್ರಜ್ಞೆ ದಲಿತರಲ್ಲಿ ಜೀವಂತವಾಗಿದೆ. ಹೀಗಾಗಿ ಹಿಂಸಾಚಾರ ಸ್ಫೋಟಗೊಳ್ಳಲು ಚಿಕ್ಕಪುಟ್ಟ ಕಾರಣಗಳೇ ಸಾಕಾಗುತ್ತದೆ. ಆಳುವವರಿಗೆ ಈ ವಿಚಾರ ಗೊತ್ತಿಲ್ಲ ಎಂದಲ್ಲ. ಆದರೆ ಅಧಿಕಾರಶಾಹಿಯ ಜಡ ಧೋರಣೆ ಯಿಂದಾಗಿ ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿರುತ್ತದೆ. ಪುಣೆಯಲ್ಲಿ ವಿಜಯೋತ್ಸವಕ್ಕೆ ಲಕ್ಷಕ್ಕೂ ಮಿಕ್ಕಿ ಜನರು ಸೇರುತ್ತಾರೆ ಎಂದು ಗೊತ್ತಿದ್ದರೂ ಸಮರ್ಪಕವಾದ ಬಂದೋಬಸ್ತಿನ ಏರ್ಪಾಡು ಮಾಡದೆ ಇದ್ದದ್ದು ಆಳುವ ವ್ಯವಸ್ಥೆಯ ಚಲ್ತಾ ಹೈ ಧೋರಣೆಗೊಂದು ನಿದರ್ಶನ. ಇದಕ್ಕೀಗ ರಾಜ್ಯ ಬೆಲೆ ತೆರುತ್ತಿದೆ. ಜಗತ್ತಿಡೀ ಆಧುನಿಕತೆಯ ಹೊಸ ಗಾಳಿಯನ್ನು ಉಸಿರಾಡುತ್ತಿರುವ ಈ ದಿನಗಳಲ್ಲೂ ನಮ್ಮಲ್ಲಿ ಜಾತಿ ಜಾತಿಗಳ ನಡುವೆ ಬೆಂಕಿ ಹಾಕಿ ಮತ ಹುಡುಕುವ ರಾಜಕೀಯ ನಾಯಕರು ಇದ್ದಾರೆ ಎನ್ನುವುದು ತಲೆತಗ್ಗಿಸಬೇಕಾದ ವಿಚಾರ. ಭೀಮಾ ಕೋರೆಗಾಂವ್‌ ಘಟನೆ ಸಂಭವಿಸಿದ ಬೆನ್ನಿಗೆ ರಾಜಕೀಯ ಮುಖಂಡರು ನೀಡಿದ ಹೇಳಿಕೆಗಳನ್ನು ಗಮನಿಸುವಾಗ ವೋಟಿಗಾಗಿ ಪಕ್ಷಗಳು ಯಾವ ಮಟ್ಟಕ್ಕೂ ಇಳಿಯಲು ತಯಾರಾಗಿವೆ ಎನ್ನುವುದು ಅರ್ಥವಾಗುತ್ತದೆ. ಜಾತ್ಯಾತೀತ ನಿಲುವನ್ನು ಅಪ್ಪಿಕೊಂಡ ಬಳಿಕ ನಿಧಾನವಾಗಿಯಾದರೂ ದೇಶದಿಂದ ಜಾತಿ ಸಂಘರ್ಷ ದೂರವಾಗಬೇಕಿತ್ತು. ಇದರ ಬದಲಾಗಿ ಈಗೀಗ ಜಾತೀಯ ಪ್ರಜ್ಞೆ ತೀವ್ರವಾಗುತ್ತಾ ಹೋಗುತ್ತಿರುವುದು ಅಪಾಯಕಾರಿ ಬೆಳವಣಿಗೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.