ರಾಗಧನ ಪಲ್ಲವಿ ಪ್ರಶಸ್ತಿ ಪ್ರದಾನ
Team Udayavani, Feb 4, 2018, 11:54 AM IST
ಉಡುಪಿ: ಉಡುಪಿ ರಾಗಧನ ಸಂಸ್ಥೆಯ 30ನೇ ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ಮತ್ತು ರಾಗಧನಶ್ರೀ ಪತ್ರಿಕೆಯ ದಶ ಮಾನೋತ್ಸವ ಸಂಭ್ರಮದ ಪ್ರಯುಕ್ತ ಫೆ. 3ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಗಧನ ಪಲ್ಲವಿ ಪ್ರಶಸ್ತಿ ಕಾರ್ಯಕ್ರಮ ನಡೆಯಿತು.
ಡಾ| ಸುಶೀಲಾ ಉಪಾಧ್ಯಾಯ ಸಂಸ್ಮರಣಾರ್ಥ ಡಾ| ಯು.ಪಿ. ಉಪಾಧ್ಯಾಯ ಅವರು ಪ್ರಾಯೋಜಿ ಸಿರುವ ರಾಗಧನ ಪಲ್ಲವಿ ಪ್ರಶಸ್ತಿಯನ್ನು ಅರ್ಚನಾ ಮತ್ತು ಸಮನ್ವಿ ಅವರಿಗೆ ಡಾ| ಕುಮಾರ ಸುಬ್ರಹ್ಮಣ್ಯ ಅಮೈ ಅವರು ಪ್ರದಾನಿಸಿದರು. ಡಾ| ಯು.ಪಿ. ಉಪಾಧ್ಯಾಯ, ರಾಗಧನದ ಸರೋಜಾ ಆಚಾರ್ಯ, ಅರವಿಂದ ಹೆಬ್ಟಾರ್, ಉಮಾಶಂಕರಿ ಉಪಸ್ಥಿತರಿದ್ದರು.
ಎ. ಈಶ್ವರಯ್ಯ ಸ್ವಾಗತಿಸಿದರು. ಸದಾಶಿವ ರಾವ್ ನಿರ್ವಹಿಸಿದರು.