ನಾರಾಯಣ್‌ ಕೈತಪ್ಪಿಹೋದ 18 ಚಿತ್ರಗಳು; ನಾವು ನತದೃಷ್ಟರೋ, ಬಕ್ರಾಗಳೋ


Team Udayavani, Feb 6, 2018, 12:35 PM IST

S-Narayan.jpg

ಅಂತೂ ಒಂದು ಚಿತ್ರದ ಮುಹೂರ್ತ ಆಯ್ತು …ಹಾಗಂತ ಹೇಳಿ ನಕ್ಕರು ಎಸ್‌. ನಾರಾಯಣ್‌. ಕಳೆದ ವರ್ಷ ಅವರ ಎರಡು ಚಿತ್ರಗಳ ಮುಹೂರ್ತವಾಗಿದ್ದವು. ಆದರೆ, ಆ ಎರಡೂ ಚಿತ್ರಗಳು ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಇನ್ನು ಹಲವು ಚಿತ್ರಗಳ ಕೆಲಸ ನಡೆಯುತ್ತಿದ್ದರೂ, ಒಂದಲ್ಲ ಒಂದು ಕಾರಣಕ್ಕೆ ಕೈತಪ್ಪಿ ಹೋಗುತ್ತಿದ್ದವಂತೆ. ಈಗ ಕೊನೆಗೂ ಅವರ ಹೊಸ ಚಿತ್ರ ಸೋಮವಾರ ಬೆಳಿಗ್ಗೆ, ಹನುಮಂತನಗರದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಪ್ರಾರಂಭವಾಯಿತು. ಇಷ್ಟಕ್ಕೂ ನಾರಾಯಣ್‌ ಅವರಿಂದ ಚಿತ್ರಗಳು ಕೈತಪ್ಪಿ ಹೋಗುತ್ತಿದುದೇಕೆ ಎಂಬ ಪ್ರಶ್ನೆಗೆ ಅವರ ಬಳಿಯೂ ಉತ್ತರವಿಲ್ಲ.

“ನಿರ್ಮಾಪಕರು ಬರೋರು. ಕಥೆ ಬರೆದು ಮುಗಿಸುತ್ತಿದ್ದೆ. ಕೆಲವು ಚಿತ್ರಗಳು ಸಂಗೀತ ಸಂಯೋಜನೆ ಲೆವೆಲ್‌ವರೆಗೂ ಬರುತಿತ್ತು. ಆದರೆ, ಇದಕ್ಕಿದ್ದಂತೆ ಕೈತಪ್ಪಿ ಹೋಗೋದು. ನಿಜ ಹೇಳಬೇಕೆಂದರೆ, ಕನ್ನಡ ಚಿತ್ರರಂಗದಲ್ಲಿ ನನ್ನಷ್ಟು ಬಿಝಿ ಯಾರೂ ಇಲ್ಲ. ಸತತವಾಗಿ ಬರೆಯುವ ಕೆಲಸದಲ್ಲಿ ನಿರತನಾಗಿದ್ದೆ. ಆದರೆ, ಚಿತ್ರ ಮಾತ್ರ ಒಂದಲ್ಲ ಕಾರಣಕ್ಕೆ ನನ್ನ ಕೈತಪ್ಪಿ ಹೋಗೋದು. ಎಲ್ಲಾ ಮುಗಿದು ಇನ್ನು ಚಿತ್ರೀಕರಣ ಶುರುವಾಗಬೇಕು ಎನ್ನುವಷ್ಟರಲ್ಲಿ, ಅದೇ ನಿರ್ಮಾಪಕರು ಅದೇ ಕಥೆಯನ್ನಿಟ್ಟುಕೊಂಡು ಬೇರೆಯವರ ಜೊತೆಗೆ ಚಿತ್ರ ಮಾಡುತ್ತಿದ್ದುದು ಇದೇ. ನನಗೆ ಪೇಪರ್‌ ನೋಡಿದ ಮೇಲಷ್ಟೇ, ಆ ನಿರ್ಮಾಪಕರು ಬೇರೆ ಇನ್ನೊಂದು ಚಿತ್ರ ಮಾಡುತ್ತಿರುವುದು ಗೊತ್ತಾಗುತಿತ್ತು. 

ಇತ್ತೀಚೆಗೆ ಒಂದು ಚಿತ್ರ ಮಿಸ್‌ ಆಯ್ತು. ನಾಲ್ಕು ತಿಂಗಳು ಕೆಲಸ ಮಾಡಿದ್ದೆ. ಕಾರಣ ಇಲ್ಲದೇ ಅದು ಕೈತಪ್ಪಿ ಹೋಯಿತು. ಇದುವರೆಗೂ 18 ಸಿನಿಮಾಗಳು ನನ್ನ ಕೈತಪ್ಪಿ ಹೋದವು’ ಎನ್ನುತ್ತಾರೆ ನಾರಾಯಣ್‌. 

ಬರೀ ನಾರಾಯಣ್‌ಗಷ್ಟೇ ಅಲ್ಲ, ಅವರ ಮಗ ಪಂಕಜ್‌ಗೂ ಇದೇ ತರಹ ಆಗಿದೆಯಂತೆ. ಈ ಕುರಿತು ಮಾತನಾಡಿದ ನಾರಾಯಣ್‌, “ಒಬ್ಬರು ಬಂದು ಒಂದು ಪಾತ್ರಕ್ಕೆ ಉದ್ದ ಕೂದಲು ಬೇಕು, ಶೇವಿಂಗ್‌ ಬೇಡ ಎಂದು ಹೇಳಿ ಹೋದರು. ಆಮೇಲೆ ನೋಡಿದರೆ ಅವರು ಮಾಯ. ಇನ್ನೊಮ್ಮೆ ಅವನಿಗೆ ಮಾಡಿದ ಕಥೆಯೊಂದು, ಹಾಡುಗಳ ರೆಕಾರ್ಡಿಂಗ್‌ವರೆಗೂ ಬಂದಿತ್ತು. ಕೊನೆಗೆ ನಿರ್ಮಾಪಕರು ಆ ಕಥೆಯನ್ನು ಬೇರೆ ನಿರ್ದೇಶಕರಿಂದ ಮಾಡಿಸಿದರು. ಎಂಥಾ ವಿಪರ್ಯಾಸ ಎಂದರೆ, ನಾನೇ ಹೋಗಿ ಆ ಚಿತ್ರಕ್ಕೆ ಕ್ಲಾಪ್‌ ಮಾಡಿ ಬಂದೆ.

ನಾವು ನತದೃಷ್ಟರೋ, ಬಕ್ರಾಗಳ್ಳೋ ಗೊತ್ತಿಲ್ಲ. ಒಂದು ಸಿನಿಮಾ ಅಂತೂ ಆಗಲ್ಲ ಎಂದು ಎಲ್ಲರಿಗೂ ಗೊತ್ತಿತ್ತು, ನನ್ನೊಬ್ಬನನ್ನು ಬಿಟ್ಟು. ನಾನು ಆ ಚಿತ್ರ ಆಗೇಆಗುತ್ತದೆ ಎಂದು ಕಾಯುತ್ತಿದ್ದೆ. ಆಮೇಲೆ ನಾನು ಬಕ್ರಾ ಆದೆ ಅಂತ ಗೊತ್ತಾಯ್ತು. ಇನ್ನೊಂದು ಚಿತ್ರಕ್ಕೆ ನನ್ನ ಕೈಯಿಂದ ಖರ್ಚು ಮಾಡಿದ್ದೆ. ಕೆಲವು ವರ್ಷಗಳ ಹಿಂದೆ, ಈ ಚಿತ್ರ ನಿರ್ದೇಶನ ಮಾಡೋದು ನಿಲ್ಲಿಸಿದ್ದೆ. ಆಗ ಎಲ್ಲರೂ ನನ್ನ ನಿರ್ಧಾರವನ್ನ ಬಾಲಿಷ ಎಂದರೆ. ಈಗ ಅದೇ ಸರಿ ಅನಿಸುತ್ತಿದೆ’ ಎನ್ನುತ್ತಾರೆ ನಾರಾಯಣ್‌.

ಎಲ್ಲಾ ಸರಿ, ಈ ಕುರಿತು ಯಾಕೆ ನಾರಾಯಣ್‌ ಕ್ರಮ ಕೈಗೊಳ್ಳಬಾರದು ಎಂಬ ಪ್ರಶ್ನೆ ಬರುವುದು ಸಹಜ. “ಯಾರ ವಿರುದ್ಧ ಕ್ರಮ ಕೈಗೊಳ್ಳಲಿ. ನನಗೆ ಅದೆಲ್ಲಾ ಇಷ್ಟ ಇಲ್ಲ. ಚಿತ್ರರಂಗದಲ್ಲಿ ಕಳೆದ 30 ವರ್ಷಗಳಿಂದ ಇದ್ದು, ಎಲ್ಲವನ್ನೂ ನೋಡಿರುವುದರಿಂದ ನಾನು ಜೀರ್ಣಿಸಿ ಕೊಳ್ಳುತ್ತೀನಿ. ದುರ್ಬಲ ಇರೋರಿಗೆ ಬಹಳ ಕಷ್ಟ’ ಎನ್ನುತ್ತಾರೆ ಅವರು.

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.