ಶಿರ್ವ:ಬಾವಿಗೆ ಬಿದ್ದವನ ರಕ್ಷಣೆ
Team Udayavani, Feb 23, 2018, 8:58 AM IST
ಶಿರ್ವ: ಕುಡಿತದ ಮತ್ತಿನಲ್ಲಿ ದಂಡೆಯ ಮೇಲೆ ಕುಳಿತಿದ್ದ ವ್ಯಕ್ತಿಯೋರ್ವರು ಬಾವಿಗೆ ಬಿದ್ದಿದ್ದು, ಆತನನ್ನು ಶಿರ್ವ ಪೊಲೀಸರು ಊರವರ ಸಹಕಾರದೊಂದಿಗೆ ಗುರುವಾರ ಬೆಳಗ್ಗೆ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ತೆಂಕ ಎರ್ಮಾಳು ಅದಮಾರು ಮಠದ ಬಳಿಯ ನಿವಾಸಿ ಕೇಶವ (43) ಬಾವಿಗೆ ಬಿದ್ದವರು. ಇವರು ಪತ್ನಿಯೊಂದಿಗೆ ಜಗಳವಾಡಿ ಶಿರ್ವಕ್ಕೆ ಬಂದು ಬಂಗ್ಲೆ ಮೈದಾನ ಕ್ರಾಸ್ ರಸ್ತೆ ಬಳಿಯ ಮನೆಯ ಗೇಟ್ ಹಾರಿ ಬಾವಿಯ ಬಳಿಗೆ ಹೋಗಿದ್ದ. ದಂಡೆಯ ಮೇಲೆ ಕುಳಿತಿದ್ದವ ಆಯತಪ್ಪಿ ಬಾವಿಗೆ ಬಿದ್ದು ರಾತ್ರಿಯಿಡೀ ಪಂಪ್ಸೆಟ್ನ ಹಗ್ಗ ಹಿಡಿದು ಜೀವ ಉಳಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗಿನ ಜಾವ ಅವರ ಬೊಬ್ಬೆ ಕೇಳಿ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಕಳವಿಗೆ ಬಂದಿದ್ದ: ಸ್ಥಳೀಯರ ಶಂಕೆ
ಘಟನೆ ನಡೆದ ಮನೆಮಂದಿ 2 ದಿನಗಳ ಹಿಂದೆ ಮನೆ ಹಾಗೂ ಗೇಟ್ಗೆ ಬೀಗ ಹಾಕಿ ಮುಂಬಯಿಗೆ ತೆರಳಿದ್ದರು. ಈತ ಬುಧವಾರ ಸಂಜೆ ವೇಳೆ ಆ ಪ್ರದೇಶದಲ್ಲಿ ಅಡ್ಡಾಡಿ ಕೊಂಡಿದ್ದು, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಬಾವಿಯಲ್ಲಿರುವ ಪಂಪ್ಸೆಟ್ ಕದಿಯಲು ಹೋಗಿ ಒಳಗೆ ಬಿದ್ದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ