ದಂತ ವೈದ್ಯ ಮತ್ತು ಸುದಂತಯೋಜನ ತಜ್ಞ ವ್ಯತ್ಯಾಸಗಳೇನು ?


Team Udayavani, Feb 25, 2018, 6:00 AM IST

Dentist-750110.jpg

ನೀವು ಏಕೆ ಸುದಂತ ಯೋಜನ 
ಚಿಕಿತ್ಸೆ ಪಡೆಯಬೇಕು?

ಸುದಂತ ಯೋಜನ ಚಿಕಿತ್ಸೆಯ ಗುರಿ ಎಂದರೆ ಸುಂದರ ನಗು ಮತ್ತು ಉತ್ತಮ ಜಗಿತ – ಅರ್ಥಾತ್‌ ಎದುರು ದವಡೆಯ ಹಲ್ಲುಗಳೊಂದಿಗೆ ಸರಿಯಾಗಿ ಸಂಯೋಜನೆ ಹೊಂದುವ ನೇರ, ಸುಂದರವಾದ ಹಲ್ಲುಗಳು. ಉತ್ತಮ ಜಗಿತವು ನಿಮಗೆ ಜಗಿಯುವುದಕ್ಕೆ, ಚೀಪುವುದಕ್ಕೆ ಮತ್ತು ಮಾತನಾಡುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಸುಂದರ ನಗು ಆತ್ಮ ಗೌರವ, ಆತ್ಮವಿಶ್ವಾಸಕ್ಕೆ ಕೊಡುಗೆಯಾಗುವ ಮೂಲಕ ಅನೇಕರಿಗೆ ಒಳ್ಳೆಯ ಭವಿಷ್ಯರೂಪಕವಾಗುತ್ತದೆ. ನಾವು ಇಂದು ಹೆಚ್ಚು ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಬದುಕುತ್ತಿದ್ದೇವೆ, ಒಳ್ಳೆಯ ನಗು ನಮ್ಮ ವ್ಯಕ್ತಿತ್ವಕ್ಕೊಂದು ಹೊಸ ಹೊಳಪನ್ನು ನೀಡುತ್ತದೆ. 
ಬಹಳಷ್ಟು ಬಾರಿ ಸುದಂತ ಯೋಜನ ಚಿಕಿತ್ಸೆಯು ಸಮಗ್ರ ದಂತ ಆರೈಕೆ ಯೋಜನೆಯ ಭಾಗವಾಗಿರುತ್ತದೆ. ಅಗತ್ಯವಾದಾಗ ಸುದಂತ ಯೋಜನ ಚಿಕಿತ್ಸೆಯೊಂದಿಗೆ ಉತ್ತಮ ಆರೈಕೆಯಿಂದ ಹಲ್ಲುಗಳು ಜೀವನಪರ್ಯಂತ ಚೆನ್ನಾಗಿರುತ್ತವೆ.
 
ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಮಕ್ಕಳು ಅಥವಾ ಹದಿವಯಸ್ಕರಲ್ಲಿ ಚಿಕಿತ್ಸೆಯು ಈಗಾಗಲೇ ಮುಖ ಮತ್ತು ದವಡೆಗಳು ಸಂಪೂರ್ಣ ಬೆಳವಣಿಗೆ ಹೊಂದಿದವರಿಗಿಂತ ಹೆಚ್ಚು ಒಳ್ಳೆಯ ಫ‌ಲಿತಾಂಶವನ್ನು ನೀಡುತ್ತವೆ. 

ನೀವು ಚಿಕಿತ್ಸೆ ಪಡೆಯುತ್ತಿರುವಾಗ ಎಷ್ಟು ಸಮಯಕ್ಕೊಮ್ಮೆ 
ಸುದಂತ ಯೋಜನ ತಜ್ಞ ವೈದ್ಯರನ್ನು ಕಾಣಬೇಕು?

ನಿಮ್ಮ ಚಿಕಿತ್ಸೆಯ ಅವಧಿಯಲ್ಲಿ ಸರಾಸರಿ 5-6 ವಾರಗಳಿಗೆ ಒಮ್ಮೆ ನೀವು ಸುದಂತ ಯೋಜನ ತಜ್ಞ ವೈದ್ಯರನ್ನು ಕಾಣಬೇಕು. ಇದರಿಂದ ನಿಮ್ಮ ಸುದಂತ ಯೋಜನ ತಜ್ಞ ವೈದ್ಯರಿಗೆ ಚಿಕಿತ್ಸೆಯ ಅವಧಿಯಲ್ಲಿ ಅಗತ್ಯ ಬದಲಾವಣೆಗಳು ಪ್ರಗತಿ ಹೊಂದುವಂತೆ ಮಾಡುವುದಕ್ಕೆ, ನಿಮ್ಮ ಚಿಕಿತ್ಸಾ ಪ್ರಗತಿಯ ಮೇಲೆ ಗಮನವಿರಿಸುವುದಕ್ಕೆ ಹಾಗೂ ನಿಮ್ಮ ಹಲ್ಲುಗಳು ಮತ್ತು ವಸಡುಗಳ ಆರೋಗ್ಯದ ಮೇಲೆ ನಿಗಾ ಇರಿಸುವುದಕ್ಕೆ ಸಾಧ್ಯವಾಗುತ್ತದೆ. 

ಸುದಂತಯೋಜನ ತಜ್ಞ ಮಾತ್ರ ನಿಮ್ಮ ನಗುವನ್ನು ಅತ್ಯಂತ ಸುಂದರಗೊಳಿಸಬಲ್ಲ ತರಬೇತಿ, ಅನುಭವ ಮತ್ತು ಚಿಕಿತ್ಸಾ ಆಯ್ಕೆಗಳನ್ನು ಹೊಂದಿರುತ್ತಾನೆ. 

ಎಲ್ಲ ಸುದಂತ ಯೋಜನ ತಜ್ಞರು ದಂತ ವೈದ್ಯರಾಗಿರುತ್ತಾರೆ; ಆದರೆ ದಂತವೈದ್ಯರಲ್ಲಿ ಶೇ. 6 ಮಂದಿ ಮಾತ್ರ ಸುದಂತಯೋಜನ ತಜ್ಞರಾಗಿರುತ್ತಾರೆ. 

ಚಿಕಿತ್ಸೆ ಎಷ್ಟು ಸಮಯ ನಡೆಯುತ್ತದೆ?
ಚಿಕಿತ್ಸೆಯ ಅವಧಿ ನಿರ್ದಿಷ್ಟ ರೋಗಿಯ ವ್ಯಕ್ತಿಗತ ಸಮಸ್ಯೆಯನ್ನು ಅವಲಂಬಿಸಿರುತ್ತದೆ. ಸರಳ ಪ್ರಕರಣಗಳಿಗೆ ಚಿಕಿತ್ಸೆ ನೀಡುವುದಕ್ಕೆ ಕೆಲವು ತಿಂಗಳುಗಳ ಕಾಲಾವಕಾಶ ಸಾಕು; ಇದೇವೇಳೆ ಸಂಕೀರ್ಣ ಜಗಿತ ಸರಿಪಡಿಸುವಿಕೆಯಂತಹ ಚಿಕಿತ್ಸೆಗಳಿಗೆ 2-3 ವರ್ಷ ತಗಲಬಹುದು. ಅತ್ಯಂತ ಕನಿಷ್ಟ ಅವಧಿಯಲ್ಲಿ ನಿಮ್ಮ ಮುಖದಲ್ಲಿ ಆರೋಗ್ಯಯುತವಾದ ಸುಂದರ ನಗುವನ್ನು ಅರಳಿಸುವುದಕ್ಕೆ ಅಗತ್ಯವಾದಂತಹ ಕೌಶಲ ಮತ್ತು ಸಲಕರಣೆಗಳನ್ನು ನಿಮ್ಮ ಸುದಂತ ಯೋಜನ ತಜ್ಞ ವೈದ್ಯರು ಹೊಂದಿರುತ್ತಾರೆ.

ಡಾ| ರಿತೇಶ್‌ ಸಿಂಗ್ಲಾ ,
ಅಸೊಸಿಯೇಟ್‌ ಪ್ರೊಫೆಸರ್‌, ಆಥೊìಡಾಂಟಿಕ್ಸ್‌ ವಿಭಾಗ,
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ.

ಟಾಪ್ ನ್ಯೂಸ್

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

1——dsadsa

Madikeri; ಮೊಬೈಲ್ ನಿಂದ ಬಡಿದು ಅತ್ತೆ ಹತ್ಯೆಗೈದು ಕಥೆ ಕಟ್ಟಿದ ಸೊಸೆ!

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.