ಬಸ್ರೂರು ಗ್ರಾ.ಪಂ: ಪ್ರತಿ ಬೇಸಗೆಯಲ್ಲೂ ಉಪ್ಪು ನೀರೇ ಗತಿ!


Team Udayavani, Mar 16, 2018, 10:15 AM IST

Water-Tank-600.jpg

ಬಸ್ರೂರು ಗ್ರಾ.ಪಂ ನಲ್ಲಿ ನೀರಿನ ಸಮಸ್ಯೆ ಇದೆ. ಅದರಲ್ಲೂ  ಹಟ್ಟಿಕುದ್ರುವಿನ ಗ್ರಾಮಸ್ಥರ ಕಷ್ಟ ಬಗೆ ಹರಿಯುವ ಕಾಲ ಇನ್ನೂ ಬಂದಿಲ್ಲ. ಆ ಬೇಸರದಿಂದಲೇ ಮತ್ತೂಂದು ಬೇಸಗೆಗೆ ಸಜ್ಜಾಗಿದ್ದಾರೆ ಅಲ್ಲಿಯವರು.

ಬಸ್ರೂರು: ಈ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಟ್ಟಿಕುದ್ರು ಪ್ರದೇಶದ ಜನರಿಗೆ ಈ ಬೇಸಗೆಗೂ ಉಪ್ಪು ನೀರು ಮತ್ತು ಕಳಿ ಮಿಶ್ರಿತ ಕೊಳಕು ನೀರೇ ಗತಿ. ಬಸ್ರೂರು ಗ್ರಾ.ಪಂ. 6,613 ಜನಸಂಖ್ಯೆ ಹೊಂದಿದೆ. ಹತ್ತು ವಾರ್ಡ್‌ಗಳಿವೆ. ಈ ಪೈಕಿ ಒಂದು ಮತ್ತು ಎರಡನೇ ವಾರ್ಡ್‌ ಇರುವುದು ಹಟ್ಟಿಕುದ್ರುನಲ್ಲಿ. ಇಲ್ಲಿನವರು ಬೇಸಗೆಯಲ್ಲಿ ನೀರು ಪಡೆಯಲು ತಪಸ್ಸು ಮಾಡಬೇಕಾದ ಸ್ಥಿತಿ.

ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು ಹೇಳುವುದೆಂದರೆ, ‘ಹಟ್ಟಿಕುದ್ರುಗೆ ಪೈಪ್‌ ಲೈನ್‌ ಹಾಕಿ ಶುದ್ಧ ಕುಡಿಯುವ ನೀರು ಪೂರೈಸಲು ಈಗಾಗಲೇ ಶಾಸಕರು ಹಾಗೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ’. ಆದರೆ, ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಉಪ್ಪು ಮತ್ತು ಕಳಿ ಮಿಶ್ರಿತ ನೀರನ್ನೇ ಕುಡಿಯುವುದು ತಪ್ಪಿಲ್ಲ. ಈ ಬೇಸಗೆಯಲ್ಲೂ ಎಪ್ರಿಲ್‌, ಮೇ ತಿಂಗಳಿನಲ್ಲಿ ಹಟ್ಟಿಕುದ್ರುವಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಯಾಗಲಿದೆ. 

ಹಟ್ಟಿಕುದ್ರುಗೆ ಗುಲ್ವಾಡಿ ವೆಂಟೆಡ್‌ ಡ್ಯಾಂನಿಂದ ಪೈಪ್‌ ಹಾಕಿ ಶುದ್ಧ ಕುಡಿಯುವ ನೀರು ಪೂರೈಸಲು ರೂಪಿಸಿದ ಯೋಜನೆಗೆ ಕೆಲವರ ಆಕ್ಷೇಪವಿರುವುದರಿಂದ ಇನ್ನೂ ಜಾರಿಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. 

ಉಳಿದ 8 ವಾರ್ಡ್‌ಗಳಿಗೆ ಕುಂದಾಪುರ ಪುರಸಭೆಯ ನೀರು ಗುಪ್ಪಿ ಹಾಡಿಯಲ್ಲಿರುವ 30 ಲಕ್ಷ ರೂ. ಮೌಲ್ಯದ ಹೊಸ ನೀರಿನ ಟ್ಯಾಂಕಿಯಿಂದ ನೀರು ಪೂರೈಸಲಾಗುತ್ತಿದೆ. ‘ಪುರಸಭೆಯಿಂದ ಬೆಳಗ್ಗೆ 5.30ಕ್ಕೆ ಟ್ಯಾಂಕಿಗೆ ನೀರು ಹರಿಸಲಾಗುತ್ತಿದೆ. ಕೂಡಲೇ ಇಲ್ಲಿಂದ ಎಂಟೂ ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತಿದೆ. ಕೆಲವೆಡೆ ಪೈಪ್‌ಗಳ ದುರಸ್ತಿಯನ್ನೂ ಮಾಡಬೇಕಾಗಿದೆ’ ಎನ್ನುತ್ತಾರೆ ಗ್ರಾ.ಪಂ ಆಡಳಿತ ವರ್ಗ.

ಈ ಹಿಂದೆ ಜಪ್ತಿಯ ಜಂಬೂ ನದಿಯಿಂದ ನೀರನ್ನು ಬಸ್ರೂರು ಗ್ರಾ.ಪಂ.ಗೆ ತರಲು ಹಾಕಿದ ಪೈಪ್‌ಗ್ಳನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಕೋಳ್ಕೆರೆ ಜನತಾ ಕಾಲನಿಯಲ್ಲಿ ಕುಡಿಯುವ ನೀರಿಗಾಗಿ ಎರಡು ತೆರದ ಬಾವಿಗಳಿದ್ದು, ಅವುಗಳ ನೀರು ಬಳಸಲಾಗುತ್ತಿದೆ. ಪಾನಕದ ಕಟ್ಟೆಯ ಏಳು ಕುಟುಂಬಗಳಿಗೆ ಪ್ರತ್ಯೇಕ ಬಾವಿ ತೆರೆಯಲಾಗಿದೆ. ಉಳಿದಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 57 ತೆರದ ಬಾವಿಗಳಿವೆ. ಬಸ್ರೂರು ಕೆಳಪೇಟೆಯ ದೇವಸ್ಥಾನ ಸಮೀಪದ ಬಾವಿಗಳಿವೆ. ಹಾಲು ಡೈರಿಯ ಬಳಿ ಇರುವ 2 ಬಾವಿಗಳೊಳಗೆ ಗಿಡಗಂಟಿಗಳು ಬೆಳೆದಿದ್ದು ಉಪಯೋಗಕ್ಕೆ ಅರ್ಹವಾಗಿಲ್ಲ. ಕುಡಿಯುವ ನೀರಿಗಾಗಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸರಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎನ್ನುತ್ತಾರೆ ಗ್ರಾ.ಪಂ.ನವರು.

ಶಾಸಕರಿಗೆ ಮನವಿ
ಪುರಸಭೆಯ ನೀರನ್ನು ಪೈಪ್‌ ಅಳವಡಿಸಿ ಕೊಂಕಣ ರೈಲ್ವೆ ಸೇತುವೆ ಮೂಲಕ ಹಟ್ಟಿಕುದ್ರುಗೆ ಹರಿಸಲು ಶಾಸಕರಿಗೆ ಮನವಿ ಮಾಡಲಾಗಿದೆ. ಮುಂದಿನ ಅವಧಿಯಲ್ಲಿ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ.
– ಸಂತೋಷ್‌ ಕುಮಾರ್‌ ಎಚ್‌., ಅಧ್ಯಕ್ಷ, ಗ್ರಾ.ಪಂ. ಬಸ್ರೂರು

– ದಯಾನಂದ ಬಳ್ಕೂರು

ಟಾಪ್ ನ್ಯೂಸ್

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

9-

Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.