ಶಿರಾಡಿ ಘಾಟಿ ರಸ್ತೆಯಲ್ಲಿ ಬಿರುಸಿನ ಕಾಮಗಾರಿ


Team Udayavani, Mar 31, 2018, 8:30 AM IST

Shiradi-Ghat-Road-Repair-30-3.jpg

ಉಪ್ಪಿನಂಗಡಿ: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟಿ ರಸ್ತೆಯ 2ನೇ ಹಂತದ ಕಾಂಕ್ರೀಟ್‌ ರಸ್ತೆ ಕಾಮಗಾರಿ ಕ್ಷಿಪ್ರಗತಿಯಿಂದ ನಡೆಯುತ್ತಿದ್ದು, ಮೇ ಅಂತ್ಯದ ಒಳಗೆ ಪೂರ್ಣಗೊಂಡು ಜೂನ್‌ ಆರಂಭದಲ್ಲಿ ಸಂಚಾರಕ್ಕೆ ಮುಕ್ತವಾಗುವ ಭರವಸೆ ಕಂಡುಬಂದಿದೆ. ರಾ. ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 13 ಕಿ.ಮೀ. ಕಾಂಕ್ರೀಟ್‌ ರಸ್ತೆ 2ನೇ ಹಂತದ ಕಾಮಗಾರಿಗೆ 74 ಕೋ. ರೂ. ಮಂಜೂರು ಆಗಿದ್ದು, ಜರ್ಮನಿಯಿಂದ ತರಿಸಲಾದ ಹೊಸ ಯಂತ್ರವನ್ನು ಬಳಸಿ ಆಧುನಿಕ ತಂತ್ರಜ್ಞಾನ ಆಧರಿಸಿ ಕಾಮಗಾರಿ ಬಹಳ ವೇಗವಾಗಿ ಸಾಗುತ್ತಿದೆ. ಈ ರಸ್ತೆಯಲ್ಲಿ 77 ಮೋರಿಗಳಿದ್ದು, 74 ಮೋರಿ ಕಾಮಗಾರಿ ಪೂರ್ಣಗೊಂಡಿದೆ. ಈ ಪೈಕಿ 3 ಸೇತುವೆಗಳ ವಿಸ್ತರಣೆಯೂ ನಡೆಯುತ್ತಿದೆ.

ಅತ್ಯಾಧುನಿಕ ಜರ್ಮನ್‌ ಯಂತ್ರ ಬಳಕೆ
ಕಾಮಗಾರಿಯ ಸಲುವಾಗಿ ಜರ್ಮನಿಯಿಂದ 10 ಕೋ. ರೂ. ಮೌಲ್ಯದ ವಿರ್ಟ್‌ಜನ್‌ ಕಂಪೆನಿಯ ಟಿಸಿಎಂ-180 ಸೆನ್ಸರ್‌ ಪೇವರ್‌ ಯಂತ್ರವನ್ನು ತರಿಸಲಾಗಿದೆ. ಇದರ ಮೂಲಕ ತಳಮಟ್ಟದ ಗ್ರ್ಯಾನುಲಾರ್‌ ಸಬ್‌ಬೇಸ್‌ (ಜಿ.ಎಸ್‌.ಬಿ.), ಅದಕ್ಕಿಂತ ಮೇಲಿನ ಡ್ರೈ ಲೀನ್‌ ಕಾಂಕ್ರೀಟ್‌ (ಡಿ.ಎಲ್‌.ಸಿ.) ಹಾಗೂ ಅಂತಿಮವಾದ ಪೇವ್‌ಮೆಂಟ್‌ ಕ್ವಾಲಿಟಿ ಕಾಂಕ್ರೀಟ್‌ (ಪಿ.ಕ್ಯೂ.ಸಿ.) ಈ 3 ಹಂತಗಳಲ್ಲಿ 600 ಎಂ.ಎಂ. ದಪ್ಪದಲ್ಲಿ ಪ್ರತಿದಿನ 2ರಿಂದ 3 ಕಿ.ಮೀ. ಉದ್ದಕ್ಕೆ ಕಾಂಕ್ರೀಟೀಕರಣ ನಡೆಯುತ್ತಿದೆ. ಈಗಾಗಲೇ ಎಡ ಮತ್ತು ಬಲ ಬದಿಯಲ್ಲಿ ಸುಮಾರು 3 ಕಿ. ಮೀ. ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ 9 ಕಿ. ಮೀ. ಜಿ.ಎಸ್‌.ಬಿ. ಹಂತದಲ್ಲಿ ಹಾಗೂ 3 ಕಿ. ಮೀ. ಡಿ.ಎಲ್‌.ಸಿ. ಹಂತದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳದಲ್ಲಿದ್ದ ಇಂಜಿನಿಯರ್‌ ಸುರೇಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಕಾಂಕ್ರೀಟ್‌ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಮಣ್ಣಿನ ಕಣಗಳು ಸೇರಿಕೊಳ್ಳದಂತೆ ತಡೆಯಲು ಕಾಮಗಾರಿ ಆರಂಭಕ್ಕೆ ಮುನ್ನ ರಸ್ತೆಗೆ ಮಣ್ಣಿನ ಮೇಲೆ ಜಿಯೋ ಟೆಕ್ಸ್‌ಟೈಲ್‌ ಹಾಸಲಾಗಿದೆ. ಘಾಟಿ ಪ್ರದೇಶವಾಗಿರುವುದರಿಂದಾಗಿ ನೀರಿನ ಒರತೆ ತಡೆಗಟ್ಟುವ ಸಲುವಾಗಿ ಪ್ರತೀ 25 ಮೀ. ಅಂತರದಲ್ಲಿ ಕ್ರಾಸ್‌ ಫಿಲ್ಟರ್‌ ಡ್ರೈನೇಜ್‌ ವ್ಯವಸ್ಥೆ ಮಾಡಲಾಗುತ್ತಿದೆ, ರಸ್ತೆ ತಗ್ಗು ಇರುವ ಪ್ರದೇಶಗಳಿಗೆ ನೆಲ್ಯಾಡಿ ಕಡೆಯಿಂದ ಗಟ್ಟಿ ಮಣ್ಣು ತಂದು ಹಾಕಲಾಗುತ್ತಿದೆ. ಕಾಮಗಾರಿ ಹಂತ ಹಂತವಾಗಿ ಅತಿ ವೇಗದಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಪುರಾತನ ಸಮಸ್ಯೆ – ಶಿರಾಡಿ ರಸ್ತೆ
ಬಹಳ ಹಿಂದಿನಿಂದಲೂ ಶಿರಾಡಿ ಘಾಟಿ ಸಂಚಾರ ಚಾಲಕರಿಗೂ ಪ್ರಯಾಣಿಕರಿಗೂ ನುಂಗಲೂ ಉಗುಳಲೂ ಆಗದ ತುತ್ತಾಗಿತ್ತು. ಘಟ್ಟದ ನಡುವೆ ಹಾದು ಹೋಗುವ ಕಿರಿದಾದ ಡಾಮರ್‌ ರಸ್ತೆಯ ಮೂಲಕ ಸಕಲೇಶಪುರದ ಮಾರನಹಳ್ಳಿ ಸೇರುವುದೇ ಒಂದು ಹರ ಸಾಹಸವಾಗಿದ್ದು ಘಾಟಿ ಸಂಚಾರಕ್ಕೆ ಮೂರು ತಾಸು ವ್ಯಯವಾಗುತ್ತಿತ್ತು. ಮಳೆಗಾಲ ಆರಂಭವಾದರೆ ಸಾಕು, ಕಿರಿದಾದ ಡಾಮರು ರಸ್ತೆಯಲ್ಲಿ ಹೊಂಡಗಳು ಉಂಟಾಗಿ ತೇವಾಂಶದಿಂದ ರಸ್ತೆ ಬಿರುಕು ಬಿಡುತ್ತಿತ್ತು. ಆದರೆ ಈ ಬಾರಿ ಶಾಶ್ವತ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿ ಏಕಕಾಲದಲ್ಲಿ ಎರಡು ವಾಹನಗಳು ಸುಗಮವಾಗಿ ಸಂಚಾರ ನಡೆಸಲು ಯೋಗ್ಯವಾಗುವಂತೆ ರಸ್ತೆ ನಿರ್ಮಾಣ ನಡೆಯುತ್ತಿದೆ. ವಾಹನಗಳಿಗೆ ಸಂಚಾರ ಕಾಲದಲ್ಲಿ ರಸ್ತೆ ಹಿಡಿತ ಉಂಟಾಗಲು ಮತ್ತು ಹತೋಟಿಗೆ ಸಂಪೂರ್ಣ ರಸ್ತೆಯನ್ನು ಒರಟುಗೊಳಿಸಲಾಗಿದೆ. ಈಗಾಗಲೇ ನಾಲ್ಕಕ್ಕೂ ಹೆಚ್ಚು ತಿರುವುಗಳನ್ನು ನೇರಗೊಳಿಸಲಾಗಿದೆ.

ಕೇಂದ್ರ ಹೆದ್ದಾರಿ ಇಲಾಖೆ ಹಲವಾರು ವರ್ಷಗಳಿಂದ ಕೋಟ್ಯಂತರ ರೂ. ಅನುದಾನವನ್ನು ವರ್ಷವೂ ಈ ರಸ್ತೆಯ ಡಾಮರೀಕರಣಕ್ಕೆ ಬಳಕೆ ಮಾಡಬೇಕಾದ ಅನಿವಾರ್ಯತೆ ಇತ್ತು. ಆದರೆ ಈ ಬಾರಿಯ ಕಾಂಕ್ರೀಟೀಕರಣದಿಂದ ಶಾಶ್ವತ ಪರಿಹಾರ ಒದಗಲಿದೆ ಎಂಬ ಭರವಸೆ ರಸ್ತೆ ಬಳಕೆದಾರರದು. 

ಗುಣಮಟ್ಟದ ಕಾಮಗಾರಿ – ಪ್ರಶಂಸೆ
ಮೊದಲ ಹಂತದ ಕಾಮಗಾರಿಯಾಗಿ ಹೆಗ್ಗದ್ದೆಯಿಂದ ಕೆಂಪುಹೊಳೆ ತನಕ 11.77 ಕಿ. ಮೀ. ಕಾಂಕ್ರೀಟೀಕರಣ 69.90 ಕೋ. ರೂ. ವೆಚ್ಚದಲ್ಲಿ ಆಗಿದ್ದು, ಇದನ್ನು ಇದೇ ಓಷಿಯನ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆ ನಿರ್ವಹಿಸಿತ್ತು. ಕಾಮಗಾರಿ ಗುಣಮಟ್ಟದ ಬಗ್ಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಹೆದ್ದಾರಿ ಇಲಾಖೆಯಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಈಗ ಕಾಮಗಾರಿ ಸಲುವಾಗಿ ಜ. 12ರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಉತ್ತಮ ಗುಣಮಟ್ಟದೊಂದಿಗೆ ಅತೀ ವೇಗದಲ್ಲಿ ಕಾಮಗಾರಿ ನಡೆದು ಆದಷ್ಟು ಬೇಗ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಮೇ ಅಂತ್ಯದ ಒಳಗಾಗಿ ಪೂರ್ಣ: ಓಷಿಯನ್‌ ಕನ್‌ಸ್ಟ್ರಕ್ಷನ್‌
ಕಾಮಗಾರಿ ಪೂರ್ಣಗೊಳಿಸಲು ಸರಕಾರ ನೀಡಿರುವ ಗಡುವು ಮುಂದಿನ ಆಗಸ್ಟ್‌ ತನಕ ಇದೆ. ಆದರೆ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೇ ಅಂತ್ಯ ಅಥವಾ ಜೂನ್‌ ತಿಂಗಳ ಆರಂಭದಲ್ಲಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡಿ ಕೊಡಲಾಗುವುದು ಎಂದು ಕಾಮಗಾರಿ ನಿರ್ವಹಿಸುತ್ತಿರುವ ಓಷಿಯನ್‌ ಕನ್‌ಸ್ಟ್ರಕ್ಷನ್‌ ಇಂಡಿಯಾ ಪ್ರೈ. ಲಿ. ಸಂಸ್ಥೆಯ ನಿರ್ದೇಶಕ ಶರ್ಫುದ್ದೀನ್‌ ತಿಳಿಸಿದ್ದಾರೆ.

ವಿಶೇಷ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ: ರಾಘವನ್‌
ಶಿರಾಡಿ ಘಾಟಿ ಪ್ರದೇಶದಲ್ಲಿ ವರ್ಷದ 6 ತಿಂಗಳು ನಿರಂತರ ಮಳೆ ಸುರಿಯುತ್ತಿರುತ್ತದೆ. ಬಂಡೆ ಕಲ್ಲುಗಳ ಮಧ್ಯದಿಂದ ಸದಾ ನೀರು ಜಿನುಗುತ್ತಿರುವುದು ಮತ್ತು ನೀರಿನ ಒರತೆಯಿಂದಾಗಿ ಮಣ್ಣು ಮೃದುವಾಗಿರುತ್ತದೆ. ಆದ್ದರಿಂದ ವಿಶೇಷ ತಂತ್ರಜ್ಞಾನ ಬಳಸಿಕೊಂಡು ದೃಢವಾದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಕ್ಷಿಪ್ರವಾಗಿ ನಡೆಯುತ್ತಿದ್ದು, ಮೇ ತಿಂಗಳ ಕೊನೆಗೆ ರಸ್ತೆ ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ರಾ. ಹೆ. ಪ್ರಾಧಿಕಾರದ ಅಧೀಕ್ಷಕ ಇಂಜಿನಿಯರ್‌ ರಾಘವನ್‌ ತಿಳಿಸಿದ್ದಾರೆ.

– 13 ಕಿ.ಮೀ. ಘಾಟಿ ರಸ್ತೆ
– 74 ಮೋರಿ ಕಾಮಗಾರಿ ಪೂರ್ಣ, 3 ಸೇತುವೆ ವಿಸ್ತರಣೆ
– ಸದೃಢ ಶಾಶ್ವತ ರಸ್ತೆಯ ಭರವಸೆ

ಟಾಪ್ ನ್ಯೂಸ್

Parameshwara; ಪ್ರಜ್ವಲ್‌ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲ

Parameshwara; ಪ್ರಜ್ವಲ್‌ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲ

Prajwal Revanna Case; ಪೆನ್‌ಡ್ರೈವ್‌ ಆರೋಪಿಗಳ ಜತೆ ಶ್ರೇಯಸ್‌: ಫೋಟೊ ವೈರಲ್‌

Prajwal Revanna Case; ಪೆನ್‌ಡ್ರೈವ್‌ ಆರೋಪಿಗಳ ಜತೆ ಶ್ರೇಯಸ್‌: ಫೋಟೊ ವೈರಲ್‌

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

16-

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Parameshwara; ಪ್ರಜ್ವಲ್‌ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲ

Parameshwara; ಪ್ರಜ್ವಲ್‌ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲ

Prajwal Revanna Case; ಪೆನ್‌ಡ್ರೈವ್‌ ಆರೋಪಿಗಳ ಜತೆ ಶ್ರೇಯಸ್‌: ಫೋಟೊ ವೈರಲ್‌

Prajwal Revanna Case; ಪೆನ್‌ಡ್ರೈವ್‌ ಆರೋಪಿಗಳ ಜತೆ ಶ್ರೇಯಸ್‌: ಫೋಟೊ ವೈರಲ್‌

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.