ಅವರಿಗೆ ಮನೆ ಜವಾಬ್ದಾರಿಯೇ ಕಡಿಮೆ!


Team Udayavani, Apr 13, 2018, 1:49 PM IST

13-April-15.jpg

ಮಂಗಳೂರು: ‘ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾಗ ಅವರು ಹೊರಗಡೆಯೇ ಜಾಸ್ತಿ ಇರುತ್ತಿದ್ದರು. ಮನೆಯ ಜವಾಬ್ದಾರಿಯೇ ಕಡಿಮೆ…’ ಹೀಗೆ ಹೇಳಿ ನಕ್ಕರು ಸುಶೀಲಾ ಸುಂದರ ರಾವ್‌.

ಯಕ್ಷಗಾನ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕಲಾವಿದ ಕುಂಬ್ಳೆ ಸುಂದರ ರಾವ್‌. ಮೇಳದಲ್ಲಿ ಬಣ್ಣ ಹಚ್ಚುತ್ತಿದ್ದವರಿಗೆ ರಾಜಕೀಯವೆಂಬುದು ಅಚಾನಕ್‌ ಆಗಿ ಒಲಿದು ಬಂದದ್ದು. ಬಿಜೆಪಿಯಿಂದ ಸುರತ್ಕಲ್‌ ಕ್ಷೇತ್ರದಲ್ಲಿ ಇಬ್ಬರು ಟಿಕೆಟ್‌ ಆಕಾಂಕ್ಷಿಗಳಿದ್ದಾಗ ಯಾರಿಗೆ ಕೊಡುವುದೆಂದು ಹೊಳೆಯದೆ ಕೊನೆಗೆ ಹೊಸ ಅಭ್ಯರ್ಥಿಗಾಗಿ ಹುಡುಕಾಟ ನಡೆದಾಗ ಸಿಕ್ಕಿದವರು ಕುಂಬ್ಳೆ ಸುಂದರ ರಾವ್‌.

ಒಂದರ್ಥದಲ್ಲಿ ರಾವ್‌ ಅವರಿಗೆ ರಾಜಕೀಯ ಕ್ಷೇತ್ರ ಒಲಿದದ್ದೇ ಅಚಾನಕ್‌ ಆಗಿ. ಆ ಕಾಲದಲ್ಲಿ ಕಾಂಗ್ರೆಸ್‌ನ ವಿಜಯ ಕುಮಾರ್‌ ಶೆಟ್ಟಿ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿ 5,000 ಮತಗಳ ಅಂತರದಿಂದ ಜಯಶಾಲಿಯಾದರು.

ರಾವ್‌ ಶಾಸಕರಾದದ್ದು ಸುಮಾರು 15-20 ವರ್ಷಗಳ ಹಿಂದೆ. ಆ ದಿನಗಳ ಅವರ ರಾಜಕೀಯ ಚಟುವಟಿಕೆಗಳ ಬಗ್ಗೆ ಸರಿಯಾಗಿ ನೆನಪಿಲ್ಲ. ಆದರೂ ಹೇಳುವ ಪ್ರಯತ್ನ ಮಾಡುತ್ತೇನೆ ಎನ್ನುತ್ತಾ ಮಾತು ಆರಂಭಿಸಿದರು ಪತ್ನಿ ಸುಶೀಲಾ.

ನನ್ನನ್ನು ಮದುವೆಯಾಗುವುದಕ್ಕೂ ಮುಂಚೆಯೇ ಅವರು ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರು. ಪತಿ ಯಕ್ಷಗಾನದಲ್ಲಿ ಹೆಸರು ಮಾಡುತ್ತಿರುವ ಬಗ್ಗೆ ತುಂಬಾ ಹೆಮ್ಮೆ ಮತ್ತು ಗೌರವವಿತ್ತು. ಜತೆಗೆ ಭಾಷಣ ಕಲೆಯನ್ನೂ ಕರಗತ ಮಾಡಿಕೊಂಡಿದ್ದರು. ಒಂದು ದಿನ ಆಕಸ್ಮಿಕವಾಗಿ ಅವರನ್ನು ಎಂಎಲ್‌ಎ ಟಿಕೆಟ್‌ ಕೂಡ ಹುಡುಕಿಕೊಂಡು ಬಂತು. ನಿಜ ಹೇಳಬೇಕೆಂದರೆ ನನಗೆ ಅವರು ರಾಜಕೀಯಕ್ಕೆ ಹೋಗುವುದು ಇಷ್ಟವಿರಲಿಲ್ಲ. ಆದರೆ ರಾಜಕೀಯಕ್ಕೆ ಅವರನ್ನು ಸೆಳೆಯುವ ಪ್ರಯತ್ನ ಫಲಿಸಿದ್ದಲ್ಲದೆ, ಚುನಾವಣೆಗೆ ನಿಂತು ಮೊದಲ ಬಾರಿಯೇ ಗೆದ್ದುಬಿಟ್ಟರು. ಆ ಕ್ಷಣದಲ್ಲಿ ಪತ್ನಿಯಾಗಿ ನಾನೂ ಖುಷಿ ಪಟ್ಟಿದ್ದೆ.

ಮನೇಲಿರುವುದೇ ಕಡಿಮೆ
ಪತಿ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದಾಗಲೂ ಮನೆಯಲ್ಲಿದ್ದದ್ದು ತುಂಬಾ ಕಡಿಮೆ. ಆಟ, ಭಾಷಣ ಅಂತೆಲ್ಲ ಹೊರಗಡೆಯೇ ಹೆಚ್ಚು ಚಟುವಟಿಕೆಯಿಂದಿದ್ದರು. ರಾಜಕೀಯಕ್ಕೆ ಇಳಿದ ಮೇಲಂತೂ ಕೇಳುವುದೇ ಬೇಡ. ಮನೆಯ ಜವಾಬ್ದಾರಿ ಎಂಬುದು ಅವರಿಗೆ ತೀರಾ ಕಡಿಮೆಯೇ ಎನ್ನುತ್ತಾ ಎಲ್ಲ ರಾಜಕೀಯ ನಾಯಕರ ಪತ್ನಿಯರಂತೆ ಸುಶೀಲಾ ಅವರೂ ಪತಿಯ ಮೇಲೆ ಒಂದಷ್ಟು ಮುನಿಸು ತೋರ್ಪಡಿಸಿದರು.

ಯಾವಾಗಲೂ ಪ್ರಚಾರ
ಚುನಾವಣೆಗೆ ಎಂಎಲ್‌ಎ ಅಭ್ಯರ್ಥಿಯಾಗಿ ಘೋಷಣೆಯಾದಂದಿನಿಂದ ಮನೆಗೆ ರಾತ್ರಿ 11, 12 ಗಂಟೆಗೆಲ್ಲ ಬರುತ್ತಿದ್ದರು. ಊಟ, ನಿದ್ದೆಯನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ಯಾವಾಗಲೂ ಚುನಾವಣೆ ಪ್ರಚಾರ, ಪ್ರಚಾರ ಅಂತ ಹೋಗುತ್ತಿದ್ದರು. ನಾನಂತೂ ಪ್ರಚಾರಕ್ಕೆ ಹೋಗಿಲ್ಲ. ಅವರು ರಾಜಕೀಯಕ್ಕೆ ಹೋದ ಬಳಿಕ ಮಾಡಿದ ಜನಪರ ಕೆಲಸಗಳ ಬಗ್ಗೆ ತೃಪ್ತಿ ಇದೆ ಎನ್ನುವ ಸುಶೀಲಾ ಅವರಿಗೆ ಇಚ್ಛೆ ಇದ್ದದ್ದು ಮಾತ್ರ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವ ಪತಿಯನ್ನು ಕಾಣಲು.

ಮಕ್ಕಳಿಗೆ ರಾಜಕೀಯ ಬೇಡ
ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಆದರೆ ನನ್ನ ಮಕ್ಕಳು
ರಾಜಕೀಯಕ್ಕೆ ಹೋಗುವುದು ನನಗೆ ಇಷ್ಟವಿಲ್ಲ. ಮಕ್ಕಳಿಗೂ ಇಷ್ಟವಿಲ್ಲದ ಮಾತದು. ಮಕ್ಕಳಾದ ಶಬಿತಾ, ಮಮತಾ, ಪ್ರಸನ್ನ ಕುಮಾರ್‌, ಪ್ರವೀಣ್‌ ಕುಮಾರ್‌ ವಿವಿಧ ಉದ್ಯೋಗಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ರಾಜಕೀಯದಿಂದ ದೂರ ಇರುವುದು ನನಗೂ ಖುಷಿ ತಂದಿದೆ ಎನ್ನುತ್ತಾರೆ ಸುಶೀಲಾ.

ನನ್ನ ಪತ್ನಿ ರಾಜಕೀಯ ಅಥವಾ ನನ್ನ ಬಗ್ಗೆ ಮಾತನಾಡುವುದು ತೀರಾ ಕಡಿಮೆ. ಮಾತನಾಡುವುದೇ ಇಲ್ಲ ಅಂತಲೂ ಹೇಳಬಹುದು. ಆದರೂ ಈವತ್ತು ಇಷ್ಟೆಲ್ಲ ಮಾತನಾಡಿಸಿದ ಕ್ರೆಡಿಟ್‌ ಉದಯವಾಣಿಗೆ ಸಿಗುತ್ತದೆ.
-ಕುಂಬ್ಳೆ ಸುಂದರ್‌ ರಾವ್‌

 ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌ !

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌!

Bidar; ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

Bidar; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

Why not hold a press conference? Prime Minister Modi replied

PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ

4-Pavagada

Pavagada: ಸಿಡಿಲಿನ ಪರಿಣಾಮ ಹೊತ್ತಿ ಉರಿದ ದನದ ಕೊಟ್ಟಿಗೆ; ಸ್ಥಳದಲ್ಲಿಯೇ ಹಸು ಸಜೀವ ದಹನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ

Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.