ಯುವಕನ ಅಪಹರಿಸಿ ಕೊಲೆ ಯತ್ನ: ಐವರ ಬಂಧನ
Team Udayavani, Apr 25, 2018, 12:36 PM IST
ಮಂಗಳೂರು: ಯುವಕ ನೊಬ್ಬನನ್ನು ಅಪಹರಿಸಿ ಆತನ ಮೊಬೈಲ್ ಹಾಗೂ ಬೈಕನ್ನು ಸುಲಿಗೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ಕೊಲೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ಸಂಭವಿಸಿದ್ದು, ಇದಕ್ಕೆ ಸಂಬಂಧಿಸಿ ಮಂಗಳವಾರ ಐವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ 15,000 ರೂ. ಮೌಲ್ಯದ ಮೊಬೈಲ್, 20,000 ರೂ. ಮೌಲ್ಯದ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಗಳನ್ನು ವಶಪಡಿಸಿ ಕೊಂಡಿದ್ದಾರೆ.
ಪಡೀಲ್ ಗಾಣದಬೆಟ್ಟು ನಿವಾಸಿ ಧೀರಜ್ ಕುಮಾರ್ ಯಾನೆ ಧೀರು (23), ವಾಮಂಜೂರು ಸಂತೋಷ್ನಗರದ ಪ್ರಾಣೇಶ್ ಪೂಜಾರಿ (21), ಕಣ್ಣೂರು ಜಾನಕಿ ತೋಟದ ನೀಕ್ಷಿತ್ ಪೂಜಾರಿ (21), ಜಲ್ಲಿಗುಡ್ಡೆ ಜಯನಗರದ ಪ್ರೀತಮ್ ಪೂಜಾರಿ (22), ಅರ್ಕುಳದ ನಿತಿನ್ ಪೂಜಾರಿ (20) ಬಂಧಿತರು.
ಘಟನೆಯ ವಿವರ
ಆರೋಪಿಗಳು ಎ.15ರಂದು ಸಂಜೆ 4.30ರ ವೇಳೆಗೆ ಜಲ್ಲಿಗುಡ್ಡೆ ಜಯನಗರದ ಯುವಕ ಗ್ಲಾನ್ಸನ್ನನ್ನು ಬಿಕರ್ನಕಟ್ಟೆಯಿಂದ ದ್ವಿಚಕ್ರ ವಾಹನದಲ್ಲಿ ಬಲಾತ್ಕಾರವಾಗಿ ಕುಳ್ಳಿರಿಸಿ ಅಡ್ಯಾರ್ನ ರೈಲ್ವೆ ಟ್ರ್ಯಾಕ್ ಬಳಿ ಕರೆದೊಯ್ದು ಹಣ ಕೊಡುವಂತೆ ಒತ್ತಾಯಿಸಿದ್ದಲ್ಲದೆ ಮೊಬೈಲ್ಫೋನ್ ಅನ್ನು ಕಸಿದುಕೊಂಡಿದ್ದರು. ಬಳಿಕ ಆತನಿಗೆ ಚಾಕು ತೋರಿಸಿ ಮನೆಯವರಿಗೆ ಫೋನ್ ಮಾಡಿ 1 ಲಕ್ಷ ರೂ. ಕೊಡುವಂತೆ ಬೆದರಿಕೆ ಹಾಕಿದ್ದರು. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿ ಅಲ್ಲಿಂದ ನೀರುಮಾರ್ಗದ ಕೆಲರಾಯ್ಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಬಂಧಿತರು ಕ್ರಿಮಿನಲ್ ಹಿನ್ನೆಲೆಯ ವರಾಗಿದ್ದು, ಕೊಲೆಯತ್ನ ಪ್ರಕರಣದ ಆರೋಪಿಗಳಾಗಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ