ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ಗೆ ದಲಿತರು ದಾಳ: ಬಿಜೆಪಿ
Team Udayavani, Jun 7, 2018, 5:01 PM IST
ಹೊಸದಿಲ್ಲಿ : ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಪಕ್ಷ ದಲಿತರನ್ನು ದಾಳವಾಗಿ ಬಳಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಭೀಮಾ – ಕೋರೆಗಾಂವ್ ಹಿಂಸೆಯ ಆರೋಪಿಯಾಗಿರುವ ರಾನ್ ವಿಲ್ಸನ್ ಎಂಬಾತನ ಮನೆಯಲ್ಲಿ ದೊರಕಿರುವ ಪತ್ರವು ಈ ಆರೋಪವನ್ನು ಪುಷ್ಟೀಕರಿಸುತ್ತದೆ ಎಂದು ಬಿಜೆಪಿ ಹೇಳಿದೆ. ಹಿಂಸೆಯನ್ನು ಯಾವ ರೀತಿಯಲ್ಲಿ ಹುಟ್ಟುಹಾಕಬಹುದು ಎಂಬುದನ್ನು ಈ ಪತ್ರದಲ್ಲಿ ವಿವರಿಸಲಾಗಿದೆ ಎಂದು ಬಿಜೆಪಿ ಹೇಳಿದೆ.
2017ರ ಡಿಸೆಂಬರ್ 31ರಂದು ಭೀಮಾ ಕೋರೆಗಾಂವ್ ಹಿಂಸೆ ಆರಂಭಗೊಂಡು 2018ರ ಜನವರಿ 1ರಂದು ಪರಾಕಾಷ್ಠೆ ತಲುಪಿತ್ತು.
ಪುಣೆ ಪೊಲೀಸರು ನಿನ್ನೆ ಬುಧವಾರ ಮುಂಬಯಿ, ನಾಗ್ಪುರ ಮತ್ತು ದಿಲ್ಲಿಯಲ್ಲಿ ಭೀಮಾ ಕೋರೆಗಾಂವ್ ಹಿಂಸಾ ಪ್ರಕರಣಕ್ಕೆ ಸಂಬಂಧಿಸಿ ಪ್ರಮು ದಲಿತ ಕಾರ್ಯಕರ್ತ ಸುಧೀರ್ ಧವಳೆ ಸಹಿತ ಮಾವೋ ನಂಟು ಹೊಂದಿರುವ ಐವರನ್ನು ಬಂಧಿಸಿದ್ದರು.