ಹೈಮಾಸ್ಟ್ ದೀಪ ರಾತ್ರಿ  ಉರಿಯದೆ ಸಂಪೂರ್ಣ ಕತ್ತಲು!


Team Udayavani, Jun 11, 2018, 10:23 AM IST

11-june-2.jpg

ಮಹಾನಗರ: ಮಂಗಳೂರು ಎಂದರೆ ತತ್‌ಕ್ಷಣ ನೆನಪಾಗುವುದು ಇಲ್ಲಿನ ಸ್ಟೇಟ್‌ಬ್ಯಾಂಕ್‌ ಸರ್ವೀಸ್‌ ಬಸ್‌ ನಿಲ್ದಾಣ. ಹೊರರಾಜ್ಯ, ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸುತ್ತಿದ್ದು, ಆದರೆ ಈ
ನಿಲ್ದಾಣ ಒಂದಿಲ್ಲೊಂದು ಸಮಸ್ಯೆಯಿಂದ ಸದಾ ಸುದ್ದಿಯಲ್ಲಿರುತ್ತದೆ. ಈಗ ನಿಲ್ದಾಣದ ಹೈಮಾಸ್ಟ್‌ ದೀಪ ಉರಿಯದೆ ರಾತ್ರಿಯಾಗುತ್ತಲೇ ನಿಲ್ದಾಣ ಸಂಪೂರ್ಣ ಕತ್ತಲಾಗುವುದು.

ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣವೆಂದರೆ ಅಲ್ಲಿ ರಾತ್ರಿ ವೇಳೆಯೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇರುತ್ತಾರೆ. ಜತೆಗೆ ದೂರದೂರುಗಳ ಬಸ್‌ ಗಳು ಇರುತ್ತವೆ. ಹೀಗಾಗಿ ನಿಲ್ದಾಣದಲ್ಲಿ ಸುಸಜ್ಜಿತ ಬೆಳಕಿನ ವ್ಯವಸ್ಥೆ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಬೃಹತ್‌ ಗಾತ್ರದ ಹೈಮಾಸ್ಟ್‌ ದೀಪವನ್ನು ಅಳವಡಿಸಲಾಗಿದೆ. ಆದರೆ ಕೆಲವು ಸಮಯಗಳಿಂದ ಈ ದೀಪ ಉರಿಯದೇ ಇರುವುದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಬಸ್‌ ಚಾಲಕ- ನಿರ್ವಾಹಕರು ಆರೋಪಿಸುತ್ತಿದ್ದಾರೆ.

ಪಿಕ್‌ ಪಾಕೆಟ್‌-ಅನೈತಿಕ ಚಟುವಟಿಕೆ
ನಿಲ್ದಾಣದಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳ ಕೃತ್ಯಗಳು ಹೆಚ್ಚಿರುತ್ತದೆ. ಪಿಕ್‌ ಪಾಕೆಟ್‌, ಅನೈತಿಕ ಚಟುವಟಿಕೆಗಳ ಆತಂಕವೂ ಇರುತ್ತವೆ. ನಿಲ್ದಾಣ ಸಂಪೂರ್ಣ ಕತ್ತಲೆಯಿಂದ ಕೂಡಿದ್ದರೆ ಇಂತಹ ಕೃತ್ಯ ಗಳಿಗೆ ಅನುಕೂಲವಾಗುತ್ತದೆ. ಪ್ರಯಾಣಿಕರ ಹಣ, ಒಡವೆಗಳನ್ನು ಕಸಿದು ಓಡಿದರೆ ಯಾರೂ ಎಂಬುದೇ ಗೊತ್ತಾಗುವುದಿಲ್ಲ. ಹಿಂದೆಯೂ ಇಂತಹ ಕೃತ್ಯಗಳು ನಡೆದಿದ್ದು, ಹೀಗಾಗಿ ಬೆಳಕಿನ ವ್ಯವಸ್ಥೆ ಅಗತ್ಯವಾಗಿದೆ ಎಂದು ಬಸ್‌ ಸಿಬಂದಿಯ ಆಗ್ರಹವಾಗಿದೆ. 

ಸಮರ್ಪಕ ನಿರ್ವಹಣೆಯಿಲ್ಲ
ಸ್ಟೇಟ್‌ಬ್ಯಾಂಕ್‌ ಸರ್ವೀಸ್‌ ಬಸ್‌ ನಿಲ್ದಾಣಕ್ಕೆ ದಿನವೊಂದಕ್ಕೆ ಒಟ್ಟು 425 ಬಸ್‌ಗಳು ಆಗಮಿಸುತ್ತವೆ. ಈ ಬಸ್‌ಗಳ ನಿಲುಗಡೆಗಾಗಿ ಪ್ರತಿ ಬಸ್‌ಗಳಿಂದಲೂ 35 ರೂ. ಬಸ್‌ಸ್ಟಾಂಡ್  ಚಾರ್ಜ್‌ ತೆಗೆದುಕೊಳ್ಳಲಾಗುತ್ತದೆ. ಆದರೆ ಪಾಲಿಕೆ ನಿಲ್ದಾಣವನ್ನು ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಹೈಮಾಸ್ಟ್‌ ದೀಪದ ಸಮಸ್ಯೆಯ ಜತೆಗೆ ಇಡೀ ನಿಲ್ದಾಣವೇ ಹೊಂಡಗುಂಡಿಗಳಿಂದ ಕೂಡಿದ್ದು, ಈಗ ಮಳೆ ನೀರು ತುಂಬಿಕೊಂಡಿದೆ. ಬಸ್‌ ಶೆಲ್ಟರ್‌ಗಳ ಮೇಲ್ಛಾವಣಿ ಸಂಪೂರ್ಣ ಹೋಗಿದೆ. ಜತೆಗೆ ಪ್ರಯಾಣಿಕರು ಕುಳಿತುಕೊಳ್ಳುವ ಬೆಂಚುಗಳೂ ಮುರಿದು ಬಿದ್ದಿವೆ. ಹೀಗಾಗಿ ಕೇವಲ ಹಣ ತೆಗೆದುಕೊಳ್ಳುವುದು ಬಿಟ್ಟರೆ ಅಭಿವೃದ್ಧಿಯ ಮಾತೇ ಇಲ್ಲ ಎಂದು ಹೇಳಲಾಗುತ್ತಿದೆ.

ಇಂದು ಮನವಿ
ಬಸ್‌ ನಿಲ್ದಾಣದಲ್ಲಿ ನಿಲ್ಲುವ ಪ್ರತಿ ಬಸ್‌ಗಳಿಗೂ ಬಸ್‌ಸ್ಟಾಂಡ್ ಚಾರ್ಜ್‌ ಆಗಿ ಹಿಂದೆ 30 ರೂ. ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಬಸ್‌ ನವರಲ್ಲಿ ಯಾವುದೇ ರೀತಿಯ ಮಾತುಕತೆ ನಡೆಸದೆ ಏಕಾಏಕಿ ಅದನ್ನು 35 ರೂ.ಗಳಿಗೆ ಏರಿಸಿದ್ದಾರೆ. ಹೀಗಾಗಿ ಈ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ಕೆನರಾ ಬಸ್‌ ಮಾಲಕರ ಸಂಘವು ಜೂ. 11ರಂದು ಮನಪಾ ಮೇಯರ್‌ ಹಾಗೂ ಕಮಿಷನರ್‌ ಅವರಿಗೆ ಮನವಿ ನೀಡಲಿದೆ.

ಶೀಘ್ರ ದುರಸ್ತಿ
ಮಳೆಯ ಕಾರಣದಿಂದ ಹೈಮಾಸ್ಟ್‌ ದೀಪದಲ್ಲಿ ತೊಂದರೆ ಕಂಡುಬಂದಿದೆ. ಈ ಕುರಿತು ನಮಗೆ ಜೂ. 9ರಂದು ದೂರು ಬಂದಿದ್ದು, ಅದೇ ದಿನ ಅದರ ದುರಸ್ತಿ ಕಾರ್ಯ ಆರಂಭಿಸಿದ್ದೇವೆ. ಪ್ರಸ್ತುತ ಅದರ ಹಿಂದಿನ ಕೇಬಲ್‌ ತೆಗೆದು, ಈಗ ಹೊಸ ಕೇಬಲ್‌ ಅಳವಡಿಸಲಿದ್ದೇವೆ. ಜೂ. 11ರಂದು ಹೈಮಾಸ್ಟ್‌ ದೀಪದ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ.
 - ಶ್ರೀಕುಮಾರ್‌
ಸಹಾಯಕ ಎಂಜಿನಿಯರ್‌ (ಎಲೆಕ್ಟ್ರಿಕಲ್‌), ಮನಪಾ

ಎಲ್ಲವೂ ಸಮಸ್ಯೆಯೇ
ಹೈಮಾಸ್ಟ್‌ ದೀಪದ ಜತೆಗೆ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದಲ್ಲಿ ಎಲ್ಲವೂ ಸಮಸ್ಯೆಯಿಂದ ಕೂಡಿದೆ. ಆದರೆ ಇದಕ್ಕೆ ಪಾಲಿಕೆಯು ಸ್ಪಂದಿಸುತ್ತಿಲ್ಲ. ಜತೆಗೆ ಪ್ರತಿ ಬಸ್‌ ಗಳಿಂದ ಪಡೆಯುವ ಶುಲ್ಕವನ್ನೂ 5 ರೂ.ಏರಿಸಿದ್ದಾರೆ. ಹೀಗಾಗಿ ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿ ನಾವು ಸಂಬಂಧಪಟ್ಟವರಿಗೆ ಮನವಿ ನೀಡಲಿದ್ದೇವೆ.
 - ರಾಜವರ್ಮ ಬಲ್ಲಾಳ್‌
   ಅಧ್ಯಕ್ಷರು, ಕೆನರಾ ಬಸ್‌ ಮಾಲಕರ
   ಸಂಘ

ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.