ಉಡುಪಿ ನಗರದಲ್ಲಿ ದಾರಿದೀಪ, ಹೈಮಾಸ್ಟ್‌ಗೆ ಗ್ರಹಣ


Team Udayavani, Jun 20, 2018, 2:10 AM IST

light-udp-19-6.jpg

ವಿಶೇಷ ವರದಿ – ಉಡುಪಿ: ನಗರದಲ್ಲಿ ದಾರಿದೀಪ, ಹೈಮಾಸ್ಟ್‌ ದೀಪಗಳಿಗೆ ಗ್ರಹಣ ಬಡಿದಿದೆ. ದೀಪಗಳು ಆಗಾಗ್ಗೆ ಕೈ ಕೊಡುತ್ತಿದ್ದರೂ, ಅವುಗಳನ್ನು ಸರಿಪಡಿಸುವ ಗೋಜಿಗೇ ಹೋಗಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಹೈಮಾಸ್ಟ್‌ ದೀಪ ಸ್ವಿಚ್‌ ಆಫ್
ತೆಂಕಪೇಟೆ ವಾರ್ಡ್‌ನಲ್ಲಿರುವ ಶ್ರೀಕೃಷ್ಣ ಮಠದ ರಥಬೀದಿಯ ನಾಲ್ಕು ದಿಕ್ಕುಗಳಲ್ಲಿ ಹೈಮಾಸ್ಟ್‌ ದೀಪ ಅಳವಡಿಸಲಾಗಿದೆ. ಈ ಪೈಕಿ ಶ್ರೀ ಸೋದೆ ಮಠ ಮತ್ತು ಶ್ರೀ ಪೇಜಾವರ ಮಠದ ಸಮೀಪದಲ್ಲಿರುವ ದೀಪಗಳು ಕೈಕೊಟ್ಟು ತಿಂಗಳುಗಳೇ ಕಳೆದಿವೆೆ. ಉಡುಪಿ ಸಿಟಿ ಬಸ್ಸು ನಿಲ್ದಾಣದಲ್ಲೂ ಇದೇ ಕಥೆ. ಒಂದು ತಿಂಗಳಿನಿಂದ ಕೆಟ್ಟು ಹೋಗಿದ್ದ ಹೈಮಾಸ್ಟ್‌ ದೀಪವನ್ನು ಜೂನ್‌ ಮೊದಲ ವಾರಗಳಲ್ಲಿ ಸರಿ ಮಾಡಿದ್ದರು. ಕೆಲವೇ ದಿನಗಳಲ್ಲಿ ಹೈವೋಲ್ಟೇಜ್‌ ಬಂದು ಹೈಮಾಸ್ಟ್‌ ದೀಪ ಮತ್ತೆ ಕೆಟ್ಟು ಹೋಗಿದೆ. ಉಳಿದಂತೆ ರಥಬೀದಿ, ರಾಜಾಂಗಣ, ಸರ್ವೀಸ್‌, ಸಿಟಿ ಬಸ್‌ ನಿಲ್ದಾಣ, ಸಿಪಿಸಿ ಪ್ಲಾಜಾದ ಬಳಿ ಇನ್ನಿತರ ಕಡೆಗಳಲ್ಲಿ ಹೈಮಾಸ್ಟ್‌ ದೀಪಗಳಿವೆೆ.

ನಿರ್ವಹಣೆ ಕಳಪೆ 
ದಾರಿದೀಪ ನಿರ್ವಹಣೆ ಕಳಪೆಯಾಗಿದೆ ಎಂದು ನಗರಸಭೆ ಸದಸ್ಯರೇ ಸಾಮಾನ್ಯ ಸಭೆಯಲ್ಲಿ ದನಿ ಎತ್ತಿದ್ದರು. ನಿರ್ವಹಣೆ ಸರಿಯಾಗಿ ಮಾಡಿ, ಇಲ್ಲವಾದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಗಲಾಟೆಯನ್ನೂ ಮಾಡಿದ್ದರು. ಆದರೂ ಸಮಸ್ಯೆ ಹಾಗೆಯೇ ಇದೆ. ನಗರಸಭೆಗೆ ದೂರು ಕೊಟ್ಟು ಸಮಸ್ಯೆ ಬಗೆಹರಿಯದ ಕಾರಣ ಜನ ರೋಸಿ ಹೋಗಿದ್ದಾರೆ. ರಾತ್ರಿ ಹೊತ್ತು ಕತ್ತಲಲ್ಲಿ ಮಕ್ಕಳು, ಮಹಿಳೆಯರು ಭಯದಿಂದಲೇ ನಡೆದಾಡುವ ದುಃಸ್ಥಿತಿ ಇದೆ. ಮಳೆಗಾಲವಾದ್ದರಿಂದ ಅಲ್ಲಲ್ಲಿ ಸಮಸ್ಯೆಯಾಗಿದೆ. ಶೀಘ್ರ ಸರಿಯಾಗುತ್ತದೆ ಎಂದು ನಗರಸಭೆಯವರು ಹೇಳುತ್ತಾರೆ. ಈ ಬಾರಿಯ ಸಿಡಿಲಿಗೆ ನಗರದಲ್ಲಿನ ಕಂಬಗಳಲ್ಲಿದ್ದ 200ಕ್ಕೂ ಅಧಿಕ ಟೈಮರ್‌ ಗಳು ಕೆಟ್ಟು ಹೋಗಿದೆ.

ರಾತ್ರಿ ಉರಿಯದ ದೀಪ ಹಗಲು ಉರಿಯುತ್ತದೆ! 
ನಗರದಲ್ಲಿ ದಾರಿದೀಪಗಳ ನಿರ್ವಹಣೆ ಸಮಸ್ಯೆ ವಿಪರೀತ ಹೆಚ್ಚುತ್ತಲಿದೆ. ದೂರು ಕೊಟ್ಟು ತಿಂಗಳು ಕಳೆದರೂ ದೀಪಗಳ ದುರಸ್ತಿಯಾಗುತ್ತಿಲ್ಲ. ಕೆಲ ಕಡೆಗಳಲ್ಲಿ ರಾತ್ರಿ ದೀಪಗಳು ಉರಿಯುತ್ತಿಲ್ಲ. ಕಂಬದಲ್ಲಿ ಅಳವಡಿಸಿರುವ ಟೈಮರ್‌ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಹಗಲಲ್ಲೂ ದಾರಿದೀಪ ಉರಿಯುವಂತಾಗಿದೆ.

ದುರಸ್ತಿ ಸಮಸ್ಯೆ ಇದೆ
ಹೈಮಾಸ್ಟ್‌ ದೀಪ ಹಾಳಾಗಿರುವ ಬಗ್ಗೆ ನಗರಸಭೆ ಗಮನಕ್ಕೆ ತಂದಿದ್ದೆ. ಆದರೆ ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಉಡುಪಿಯವರಿಗೆ ಟೆಂಡರ್‌ ಕೊಡದೆ ಅನ್ಯಜಿಲ್ಲೆಯವರಿಗೆ ಕೊಟ್ಟರೆ ಇದೇ ಸಮಸ್ಯೆ. ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದರೂ ಆಡಳಿತ ನಡೆಸುತ್ತಿರುವವರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ನಗರಸಭೆಯ ಆನ್‌ಲೈನ್‌ ದೂರು ಸ್ವೀಕರಿಸುವ ಜನಹಿತ ವಿಭಾಗವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ.
– ಶ್ಯಾಂ ಪ್ರಸಾದ್‌ ಕುಡ್ವ, ನಗರಸಭಾ ಸದಸ್ಯ

ತಿಂಗಳಾಂತ್ಯದೊಳಗೆ ಸರಿಯಾಗುತ್ತದೆ
5 ಲ.ರೂ.ಗಿಂತ ಜಾಸ್ತಿ ಮೊತ್ತದ ಕಾಮಗಾರಿಗಳಿಗೆ ಇ-ಪ್ರೊಕ್ಯೂರ್‌ವೆುಂಟ್‌ ಪ್ರಕಾರ ಆನ್‌ಲೈನ್‌ ಟೆಂಡರ್‌ ಕರೆಯಬೇಕು ಎನ್ನುವ ನಿಯಮ ಇದೆ. ಆ ಪ್ರಕಾರ ಟೆಂಡರ್‌ ಶಿವಮೊಗ್ಗದ ಗುತ್ತಿಗೆದಾರರ ಪರವಾಗಿದೆ.  ಹೊಸ ಟೆಂಡರ್‌ ನಲ್ಲಿ ಸಮಸ್ಯೆ ಸರಿಯಾಗಲಿದೆ. ಈ ನಡುವೆ ಸಿಡಿಲಿಗೆ 200 ಟೈಮರ್‌ಗಳು  ಹಾಳಾಗಿವೆೆ. ಹಾಳಾದ ಹೈಮಾಸ್ಟ್‌ ದೀಪಕ್ಕೆ ಅಗತ್ಯ ಸಲಕರಣೆ ಹೊಂದಾಣಿಕೆಯಾಗದೆ ತಡವಾಗಿದೆ. ಈ ತಿಂಗಳಾಂತ್ಯದೊಳಗೆ ಸಮಸ್ಯೆ ಬಗೆಹರಿಯುತ್ತದೆ.
– ಜನಾರ್ದನ ಭಂಡಾರ್ಕರ್‌, ನಗರಸಭೆ ಸದಸ್ಯರು

ಇಂದೇ ಚರ್ಚೆ ನಡೆಸುವೆ
ನಗರಸಭೆ ಅಧಿಕಾರಿಗಳೊಂದಿಗೆ ಜೂ. 20ರ ಅಪರಾಹ್ನ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದೇನೆ. ದಾರಿದೀಪ, ಹೈಮಾಸ್ಟ್‌ ದೀಪಗಳ ನಿರ್ವಹಣೆ ಕುರಿತು ಇದೇ ಸಭೆಯಲ್ಲಿ ಚರ್ಚಿಸಲಿದ್ದೇನೆ. ಕಳಪೆ ನಿರ್ವಹಣೆ ಬಗ್ಗೆ ನಗರದ ಸಾರ್ವಜನಿಕರಿಂದ ನನಗೂ ದೂರುಗಳು ಬಂದಿವೆೆ. ಹಿಂದೆ ಉಡುಪಿ ನಗರದ ಗುತ್ತಿಗೆದಾರರೊಬ್ಬರು ಉತ್ತಮವಾಗಿ ದಾರಿದೀಪಗಳ ನಿರ್ವಹಣೆ ಕಾರ್ಯ ಮಾಡುತ್ತಿದ್ದರು. ಈಗ ಶಿವಮೊಗ್ಗದ ಗುತ್ತಿಗೆದಾರರಿಗೆ ಟೆಂಡರ್‌ ಕೊಟ್ಟಿದ್ದಾರೆ. ಇದೇ ಪ್ರಮುಖ ಸಮಸ್ಯೆ. ರೀಟೆಂಡರ್‌ ಕರೆಯಲು ಸೂಚಿಸುತ್ತೇನೆ.
– ಕೆ. ರಘುಪತಿ ಭಟ್‌, ಉಡುಪಿ ಶಾಸಕರು

ಟಾಪ್ ನ್ಯೂಸ್

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.