ಮಳೆ ಹಾನಿ: ಶಾಸಕರ ಭೇಟಿ
Team Udayavani, Jul 10, 2018, 4:16 PM IST
ಪೊಳಲಿ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ-ಮಳೆಯಿಂದ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಎಂಬಲ್ಲಿನ ಆಯೆರೆಮಾರ್ ಹೇಮಾವತಿ ಹಾಗೂ ಸಂತೋಷ್ ಎಂಬವರ ಮನೆಯ ಕಂಪೌಂಡ್ ಕುಸಿದು ಕೆಳಗಿನ ಕಾವೇರಿ ಅವರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಹಿಂಭಾಗದ ಬಚ್ಚಲುಮನೆ ಸಂಪೂರ್ಣ ಜಖಂಗೊಂಡಿದೆ.
ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೇಮಾವತಿ ಅವರ ಆರ್ ಸಿಸಿ ಮನೆಯು ಕುಸಿಯುವ ಸಾಧ್ಯತೆ ಇದೆ ಎಂದು ಶಾಸಕರಿಗೆ ಮನವರಿಕೆ ಮಾಡಲಾಯಿತು. ಎಲ್ಲವನ್ನೂ ಪರಿಶೀಲನೆ ನಡೆಸಿದ ಶಾಸಕರು ಸರಕಾರದಿಂದ ಸಿಗುವ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.