ಎಂ.ಟಿ. ರಸ್ತೆ ಕಾಂಕ್ರೀಟ್ಗೆ 50 ಲಕ್ಷ ರೂ.
Team Udayavani, Jul 14, 2018, 4:23 PM IST
ನಗರ : ನಗರದ ಎಂ.ಟಿ. ರಸ್ತೆಯನ್ನು ಕಾಂಕ್ರೀಟ್ಗೊಳಿಸಲು ನಗರೋ ತ್ಥಾನ ಯೋಜನೆಯಡಿ 50 ಲಕ್ಷ ರೂ. ಮಂಜೂರಾಗಿದೆ. ಮಳೆ ಕಡಿಮೆ ಯಾದ ತತ್ಕ್ಷಣ ಕಾಂಕ್ರೀಟ್ ಕಾಮಗಾರಿಯನ್ನು ನಡೆಸಲಾಗುವುದು ಎಂದು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ಹೇಳಿದರು. ಎಂ.ಟಿ. ರಸ್ತೆ ಹಾಗೂ ಮುಖ್ಯ ರಸ್ತೆಯನ್ನು ಸ್ಥಳ ಪರಿಶೀಲನೆ ಮಾಡಿ ಸಂದರ್ಭ ಅವರು ಮಾತನಾಡಿದರು.
ನಗರಸಭಾ ಹಿರಿಯ ಸದಸ್ಯ ಎಚ್. ಮಹಮ್ಮದ್ ಆಲಿ ಮಾತನಾಡಿ, ಪುತ್ತೂರು ನಗರದ ಸಮಗ್ರ ಅಭಿವೃದ್ಧಿಗಾಗಿ ನಗರೋ ತ್ಥಾನ ಯೋಜನೆಯಡಿಯಲ್ಲಿ ಹಲವಾರು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗು ವುದು. ಎಂ.ಟಿ. ರಸ್ತೆಯಲ್ಲಿ ಡಾಮರು ಕಿತ್ತು ಹೋಗಿ ಗುಂಡಿಗಳು ಬೀಳುತ್ತಿರುವುದರಿಂದ ಈ ರಸ್ತೆಯಲ್ಲಿ ಚರಂಡಿಗಳು ಇಲ್ಲದಿರುವುದರಿಂದ ರಸ್ತೆಯಲ್ಲಿ ನೀರು ಹರಿದು ಹೋಗಿ ತೊಂದರೆಯಾಗುತ್ತಿದೆ. ರಸ್ತೆ ಹಾಳಾಗು ತ್ತಿರುವುದನ್ನು ಮನಗಂಡು ನಗರಸಭಾ ಆಡಳಿತ ಎಂ.ಟಿ. ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ಗೊಳಿಸಲು ನಗರ ಸಭಾ ಆಡಳಿತ ನಿರ್ಧರಿಸಿದೆ ಎಂದರು. ಈ ಸಂದರ್ಭ ನಗರೋತ್ಥಾನ ಯೋಜನೆಯ ಯೋಜನಾ ಸಮಾಲೋಚನ ಸಂಸ್ಥೆಯ ಎಂಜಿನಿಯರ್ ಭರತ್, ನಗರಸಭಾ ಸಹಾಯಕ ಎಂಜಿನಿಯರ್ ಅರುಣ್, ಮುಗರೋಡಿ ಕನ್ಸ್ಟ್ರಕ್ಷನ್ ನ ದಾಮೋದರ್ ಮತ್ತು ನವೀನ್ ಉಪಸ್ಥಿತರಿದ್ದರು.
1 ಕೋಟಿ ರೂ.
ಮುಖ್ಯರಸ್ತೆಯಲ್ಲಿ ಕೂಡ ಆಯ್ದ ಭಾಗಗಳಲ್ಲಿ ಚರಂಡಿ ನಿರ್ಮಿಸಿ ಸುಸಜ್ಜಿತ ಫುಟ್ಪಾತನ್ನು ನಿರ್ಮಿಸಲಾಗುವುದು. ಬೊಳುವಾರು ಭಾಗದಲ್ಲಿ ರಸ್ತೆ ಅಗಲೀಕರಿಸಿ ರಸ್ತೆ ಮಧ್ಯಭಾಗದಲ್ಲಿ ರಸ್ತೆ ವಿಭಾಜಕವನ್ನು ರಚಿಸಿ ಅಭಿವೃದ್ಧಿಪಡಿಸಲಾಗುವುದು. ಒಟ್ಟು ಮುಖ್ಯರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ಮಂಜೂರು ಮಾಡಲಾಗಿರುತ್ತದೆ ಎಂದು ನಗರಸಭಾ ಸದಸ್ಯ ಎಚ್. ಮಹಮ್ಮದ್ ಆಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್