ಗೌರಿ ಹತ್ಯೆ: ಇಂದು ನಾಲ್ವರ ವಿಚಾರಣೆ
Team Udayavani, Jul 30, 2018, 11:00 AM IST
ಸುಬ್ರಹ್ಮಣ್ಯ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಲಮೊಗ್ರದ ನಾಲ್ವರನ್ನು ವಿಶೇಷ ತನಿಖಾ ತಂಡ (ಎಸ್ಐಟಿ)ವು ಬೆಂಗಳೂರಿನಲ್ಲಿ ಸೋಮವಾರ ವಿಚಾರಣೆ ನಡೆಸಲಿದೆ. ಗೌರಿ ಹತ್ಯೆ ಸಂಬಂಧ ಬಂಧನದಲ್ಲಿರುವ ಆರೋಪಿಗಳು ನೀಡಿದ ಮಾಹಿತಿ ಆಧಾರದಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ನಿವಾಸಿಗಳಾದ ಮೋಹನ ಚಾಂತಾಳ, ಯತೀಶ್ ಮೊಗ್ರ, ಯತೀನ್ ಅಂಬೆಕಲ್ಲು, ಕುಮುದಾಕ್ಷ ಜಾಲುಮನೆ ಅವರಿಗೆ ತನಿಖೆಗೆ ಬರುವಂತೆ ಎಸ್ಐಟಿ ನೋಟಿಸ್ ಜಾರಿ ಮಾಡಿತ್ತು.
ನಾಲ್ವರೂ ನಾಪತ್ತೆ
ಎಸ್ಐಟಿ ನೋಟಿಸ್ ತಂದ ಮಾಹಿತಿ ತಿಳಿದ ಮೋಹನ ಸಹಿತ ನಾಲ್ವರೂ ನಾಪತ್ತೆಯಾಗಿದ್ದಾರೆ. ಮನೆಮಂದಿಗೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಬಗ್ಗೆ ಸಂಶಯ ಹೊಂದಲಾಗಿದೆ.
ಕೊಕ್ಕಡದ ವ್ಯಕ್ತಿಯ ವಿಚಾರಣೆ
ಬೆಳ್ತಂಗಡಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ರವಿವಾರ ಕೊಕ್ಕಡ ನಿವಾಸಿ ಜಯರಾಮ ಅವರನ್ನು ವಿಚಾರಣೆ ನಡೆಸಿರೆ. ಈ ವಿಚಾರವನ್ನು ಅವರ ಸಹೋ ದರ ದೃಢಪಡಿಸಿದ್ದಾರೆ. ರವಿ ವಾರ ಬೆಳಗ್ಗೆ ಪೊಲೀಸರು ಮನೆ ಯಿಂದ ಉಪ್ಪಿನಂಗಡಿಗೆ ಕರೆದು ಕೊಂಡು ಹೋಗಿ ವಿಚಾರಣೆ ನಡೆಸಿ ಬಳಿಕ ಬಿಟ್ಟಿ¨ªಾರೆ. ಆದರೆ ಎಲ್ಲಿಯ ಪೊಲೀಸರು ವಿಚಾ ರಣೆ ನಡೆಸಿªಾರೆ ಎಂಬುದು ಗೊತ್ತಿಲ್ಲ. ಆತ ದೊಡ್ಡ ಮಟ್ಟದಲ್ಲಿ ಯಾವುದೇ ಸಂಘಟನೆಗಳಲ್ಲಿ ಗುರುತಿಸಿ ಕೊಂಡವ ನಲ್ಲ ಎಂದು ತಿಳಿಸಿ¨ರೆ.ಪೊಲೀಸರು ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು