ಕಂಕನಾಡಿ ಹಳೆ ರಸ್ತೆ ಬದಿ ವಾಹನ ನಿಲ್ಲಿಸೋದೇ ಕಷ್ಟ !
Team Udayavani, Jul 30, 2018, 11:09 AM IST
ಮಹಾನಗರ : ಸ್ಮಾರ್ಟ್ ಸಿಟಿ ಎಂಬ ಹಣೆಪಟ್ಟಿ ಇರುವ ನಗರದ ಹೃದಯ ಭಾಗದ ರಸ್ತೆಯ ಸಮಸ್ಯೆಯಿದು. ನಗರದ ಕಂಕನಾಡಿ ಹಳೆ ರಸ್ತೆಯ ಕೊಚ್ಚಿನ್ ಬೇಕರಿಯಿಂದ ಪಂಪ್ವೆಲ್ ರಾಷ್ಟ್ರೀಯ ಹೆದ್ದಾರಿ ತಲುಪುವ (ಕಂಕನಾಡಿ ಓಲ್ಡ್ ರೋಡ್) ಸುಮಾರು ಮುಕ್ಕಾಲು ಕಿಲೋ ಮೀಟರ್ ರಸ್ತೆಯ ಕಾಮಗಾರಿ ಕೆಲವು ತಿಂಗಳ ಹಿಂದೆ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾದರೂ ಆ ಪ್ರದೇಶದ ಮಂದಿ ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ.
ಬ್ರಿಟಿಷರ ಕಾಲದ ಸುಮಾರು 300 ವರ್ಷಗಳ ಇತಿಹಾಸವಿರುವ ಈ ರಸ್ತೆಗೆ ಅಂದು ಡಿಸ್ಟ್ರಿಕ್ಟ್ ರೋಡ್ ಎಂದು ಹೆಸರಿತ್ತು. ಸದ್ಯ ಕಂಕನಾಡಿ ಓಲ್ಡ್ ರೋಡ್ ಎಂದು ಬದಲಾಗಿದೆ. ಇಷ್ಟೊಂದು ಹೆಸರುಗಳಿಸಿರುವ ಈ ಪ್ರದೇಶದ ರಸ್ತೆ ಸದ್ಯ ಕಾಂಕ್ರಿಟ್ಮಯವಾದರೂ ಇನ್ನೂ ಕೂಡ ಕೆಲವೊಂದು ಮೂಲ ಸಮಸ್ಯೆಗಳನ್ನು ಎದುರಿಸುತ್ತಿದೆ.
ತೋಡಿನ ವ್ಯವಸ್ಥೆ ಇಲ್ಲ
ಕಂಕನಾಡಿ ಓಲ್ಡ್ ರೋಡ್ನ ಕೊಚ್ಚಿನ್ ಬೇಕರಿ ಪರಿ ಸ ರ ಸೇಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ನೀರು ಹರಿಯಲು ಸರಿಯಾದ ತೋಡಿನ ವ್ಯವಸ್ಥೆ ಇಲ್ಲ. ಇದೇ ಕಾರಣದಿಂದ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ರಸ್ತೆ ಕಾಮಗಾರಿಗೆಂದು ಈ ರಸ್ತೆಯ ಪಕ್ಕದಲ್ಲಿ ಹಾಕಲಾದ ಮಣ್ಣಿನಿಂದ ಸ್ಥಳೀಯರು ಕಿರಿಕಿರಿ ಅನುಭವಿಸುತ್ತಿದ್ದು, ಮಳೆ ಬಂದರೆ ಸಾಕು ವಾಹನಗಳು ಸ್ಕಿಡ್ ಆಗುತ್ತಿದೆ. ಅಲ್ಲದೆ, ಸುತ್ತಮುತ್ತ ವಾಹನಗಳನ್ನು ನಿಲ್ಲಿಸುವುದಂತೂ ಕಷ್ಟ ಸಾಧ್ಯವಾಗಿದೆ.
ರಸ್ತೆ ಸ್ವಚ್ಛತೆ ಮಾಡುತ್ತಿಲ್ಲ
ಸ್ಥಳೀಯರು ಹೇಳುವಂತೆ, ‘ಪಾಲಿಕೆಯು ಸುತ್ತಮುತ್ತಲಿನ ಮನೆಯವರಿಂದ ರಸ್ತೆ ಸ್ವಚ್ಛತೆಗೆಂದು ಹಣ ತೆಗೆದುಕೊಳ್ಳುತ್ತದೆ. ಆದರೆ, ಇತ್ತೀಚೆಗೆ ಕೆಲವು ದಿನಗಳಿಂದ ರಸ್ತೆ ಸ್ವಚ್ಛತೆ ಮಾಡಲು ಯಾರೂ ಬರುತ್ತಿಲ್ಲ. ಇದೇ ಕಾರಣಕ್ಕೆ ರಸ್ತೆ ಪಕ್ಕದಲ್ಲಿ ಹಾಕಲಾಗಿದ್ದ ಮಣ್ಣಿನಿಂದ ಅಪಾಯ ಕಾದಿದೆ’ ಎನ್ನುತ್ತಾರೆ.
ಈ ರಸ್ತೆ ಪಂಪ್ವೆಲ್ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಮಾಡುತ್ತದೆ. ಇದೇ ರಸ್ತೆಯ ಪಕ್ಕದಲ್ಲಿ ಯೇನಪೊಯ ನರ್ಸಿಂಗ್ ಹೋಂ ಇದೆ ಮತ್ತು ಅಕ್ಕ ಪಕ್ಕ ಅನೇಕ ಪ್ಲಾಟ್ ಇರುವುದರಿಂದ ಇಲ್ಲಿನ ಸಾರ್ವಜನಿಕರು ದಿನನಿತ್ಯದ ಚಟುವಟಿಕೆಗಳಿಗೆ ಇದೇ ರಸ್ತೆಯನ್ನು ಉಪಯೋಗಿಸಿದ್ದಾರೆ. ಅನೇಕ ಮಂದಿ ತಮ್ಮ ವಾಹನಗಳನ್ನು ನಿಲ್ಲಿಸಲು ಕಾಂಕ್ರಿಟ್ ರಸ್ತೆಯ ಎರಡೂ ಬದಿಗಳನ್ನು ಬಳಸುತ್ತಾರೆ. ಆದರೆ ಸದ್ಯ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಮಣ್ಣಿನಿಂದ ತೊಂದರೆ ಉಂಟಾಗಿದೆ.
ಪರಿಶೀಲನೆ ನಡೆಸುತ್ತೇನೆ
ಕಂಕನಾಡಿ ಓಲ್ಡ್ ರಸ್ತೆಯಲ್ಲಿ ಮಳೆ ನೀರು ಹರಿಯಲು ತೋಡಿನ ವ್ಯವಸ್ಥೆ ಕಲ್ಪಿಸಿದ್ದೇವೆ. ಆದರೆ ಈ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ಬರಲಿಲ್ಲ. ಕೂಡಲೇ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ.
– ಭಾಸ್ಕರ್ ಕೆ.,
ಪಾಲಿಕೆ ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು