ಕೆಎಂಸಿ – ಇಥಿಯೋಪಿಯ ಕಾಲೇಜು ಒಡಂಬಡಿಕೆ
Team Udayavani, Jul 31, 2018, 7:40 AM IST
ಮಂಗಳೂರು: ಕೆಎಂಸಿ-ಇಥಿಯೋಪಿಯ ವೈದ್ಯಕೀಯ ಕಾಲೇಜು ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಮಂಗಳೂರು: ಮಂಗಳೂರು ಕೆಎಂಸಿ ವಿಧಿವಿಜ್ಞಾನ (ಫೋರೆನ್ಸಿಕ್) ವಿಭಾಗ ಹಾಗೂ ಇಥಿಯೋಪಿಯ ಸೈಂಟ್ ಪೌಲ್ಸ್ ಹಾಸ್ಪಿಟಲ್ ಮಿಲೇನಿಯಂ ಮೆಡಿಕಲ್ ಕಾಲೇಜು ನಡುವೆ ವಿಧಿವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಮಾಹೆಯಲ್ಲಿ ಇತ್ತೀಚೆಗೆ ಒಡಂಬಡಿಕೆಗೆ ಸಹಿ ಮಾಡಲಾಯಿತು. ಸೈಂಟ್ ಪೌಲ್ಸ್ ಹಾಸ್ಪಿಟಲ್ ಮಿಲೇನಿಯಂ ಮೆಡಿಕಲ್ ಕಾಲೇಜಿನ ಕಾರ್ಯಕ್ರಮ ನಿರ್ದೇಶಕ ಬಾಲ್ಕಾಚೌ ನಿಗಟು, ಫೋರೆನ್ಸಿಕ್ ವಿಭಾಗದ ಮುಖ್ಯಸ್ಥ ಎನ್ಯುಡೆಬಾಸ್, ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಮಂಗಳೂರು ಕೆಎಂಸಿ ಡೀನ್ ಡಾ| ಎಂ. ವೆಂಕಟ್ರಾಯ ಪ್ರಭು, ಮಾಹೆ ಅಂತಾರಾಷ್ಟ್ರೀಯ ಸಹಯೋಗದ ನಿರ್ದೇಶಕ ಡಾ| ರಘು ರಾಧಾಕೃಷ್ಣನ್, ಅಸೋಸಿಯೇಟೆಡ್ ಡೀನ್ ಡಾ| ಅಲ್ಫ್ರೆಡ್ ಜೆ. ಆಗಸ್ಟಿನ್, ಮಂಗಳೂರು ಕೆಎಂಸಿ ವಿಧಿವಿಜ್ಞಾನ ವಿಭಾಗದ ಡಾ| ಬಿ. ಸುರೇಶ್ ಕುಮಾರ್ ಶೆಟ್ಟಿ , ಡಾ| ಜಗದೀಶ್ ರಾವ್ ಉಪಸ್ಥಿತರಿದ್ದರು.
ಇಥಿಯೋಪಿಯ ಸೈಂಟ್ ಪೌಲ್ಸ್ ಹಾಸ್ಪಿಟಲ್ ಮಿಲೇನಿಯಂ ಮೆಡಿಕಲ್ ಕಾಲೇಜಿನ ವಿಧಿವಿಜ್ಞಾನ ವಿಭಾಗವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಯೋಜನೆಗಳು ಒಡಂಬಡಿಕೆಯಲ್ಲಿ ಒಳಗೊಂಡಿವೆ. ಅಲ್ಲಿನ ಫೋರೆನ್ಸಿಕ್ ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಬ್ಯಾಚ್ಗಳಂತೆ ಮಂಗಳೂರು ಕೆಎಂಸಿಯಲ್ಲಿ ತರಬೇತಿ, ಇಲ್ಲಿನ ಫೋರೆನ್ಸಿಕ್ ವಿಭಾಗದ ಉಪನ್ಯಾಸಕರು ಇಥಿಯೋಪಿಯಕ್ಕೆ ತೆರಳಿ ತರಬೇತಿ ಹಮ್ಮಿಕೊಳ್ಳುವುದು ಯೋಜನೆಗಳಲ್ಲಿ ಒಳಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ
ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’
D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್ ನಲ್ಲಿ 6 ಬೆಡ್ ಮೀಸಲು
May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್ ಯಾತ್ರೆ
Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ
MUST WATCH
ಹೊಸ ಸೇರ್ಪಡೆ
Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ
ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ
LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ
LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು
Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ