ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ ಯುವಕ ;ಹುಡುಕಾಟ
Team Udayavani, Aug 8, 2018, 4:12 PM IST
ಮಂಗಳೂರು: ಜಪ್ಪಿನಮೊಗರು ಬಳಿ ಬುಧವಾರ ಮಧ್ಯಾಹ್ನ ಯುವಕನೊಬ್ಬ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಟೀಶರ್ಟ್ ಧಾರಿಯಾಗಿದ್ದ ಯುವಕ ಬ್ಯಾಗ್ ಹಾಕಿ ನದಿಗೆ ಹಾರಿರುವುದಾಗಿ ಮಹಿಳೆಯೊಬ್ಬರು ಹೇಳಿದ್ದು ಬಳಿಕ ನೂರಾರು ವಾಹನ ಸವಾರರು ಸೇತುವೆಯಲ್ಲಿ ಜಮಾವಣೆಗೊಂಡಿದ್ದಾರೆ.
ಕಂಕನಾಡಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರೀಶಿಲನೆ ನಡೆಸಿದ್ದಾರೆ.
ಸೇತುವೆ ಮೇಲೆ ಜಮಾಯಿಸಿದ ಕುತೂಹಲಿಗರು