ಕಲ್ಲಿನ ಕೋರೆಗೆ ತ್ಯಾಜ್ಯ; ಕಾವೂರಿನಲ್ಲಿ ಮುಗಿಯದ ನಿತ್ಯ ಸಮಸ್ಯೆ!
Team Udayavani, Aug 11, 2018, 10:55 AM IST
ಮಹಾನಗರ: ಕಾವೂರಿನ ಪರಪಾದೆ ಹಾಗೂ ಜಲ್ಲಿಗುಡ್ಡೆ ಶಾಲೆಯ ಹತ್ತಿರದಲ್ಲಿ 100 ಮೀಟರ್ ಆಳದ ಕಲ್ಲಿನ ಕೋರೆಗೆ ಪ್ಲಾಸ್ಟಿಕ್ ಹಾಗೂ ಇತರ ಹಾನಿಕರ ತ್ಯಾಜ್ಯ ತುಂಬಿಸುತ್ತಿರುವ ಕಾರಣದಿಂದ ಈ ವ್ಯಾಪ್ತಿಯಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗಿದ್ದು, ಇದರ ವಿರುದ್ಧ ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾವೂರು, ಆಕಾಶಭವನ, ಆನಂದನಗರ, ಮುಲ್ಲಕಾಡು ಪರಿಸರದ ನಾಗರೀಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಇತ್ತೀಚಿನ ಕೆಲವು ದಿನಗಳಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಲಾರಿ, ಟೆಂಪೋಗಳಲ್ಲಿ ತಂದು ಇಲ್ಲಿನ ಕೋರೆಗೆ ತುಂಬಿಸುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಸುತ್ತಮುತ್ತಲ ವಾತಾವರಣ ಕಲುಷಿತವಾಗಿ ದುರ್ನಾತ ಬೀರುತ್ತಿದೆ. ಹತ್ತಿರದ ಬಾವಿಗಳು ಕೂಡ ಕಲುಷಿತವಾಗಿದೆ. ಜತೆಗೆ ತ್ಯಾಜ್ಯ ತುಂಬಿದ ಲಾರಿಗಳ ಕಾರಣದಿಂದ ಸ್ಥಳೀಯರು ಇಲ್ಲಿ ನಡೆದುಕೊಂಡು ಹೋಗಲು ಕೂಡ ಸಾಧ್ಯವಾಗುತ್ತಿಲ್ಲ. ಪಾದಚಾರಿಗಳಿಗೂ ಇಲ್ಲಿ ಸಮಸ್ಯೆಯಾಗುತ್ತಿವೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.
ಕೋರೆಯ ಸುತ್ತ ಬೇಲಿ ಅಗತ್ಯ
ಕಲ್ಲಿನ ಕೋರೆಯಿರುವ ರಸ್ತೆಯು ಅಗಲ ಕಿರಿದಾಗಿದ್ದು ವಾಹನ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಜನರು, ಜಾನುವಾರುಗಳಿಗೂ ಇಲ್ಲಿ ನಡೆದುಕೊಂಡು ಹೋಗಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಕೋರೆಯ ಸುತ್ತ ಸೂಕ್ತ ಭದ್ರತಾ ಬೇಲಿ ಹಾಕಬೇಕು ಹಾಗೂ ಇಲ್ಲಿಗೆ ತ್ಯಾಜ್ಯ ಹಾಕುವುದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ಉಲ್ಲೇಖೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ