ಮಹಿಳೆಯರಿಗಾಗಿ ಸ್ಯಾರಿ ನಡೆ, ಓಟ
Team Udayavani, Aug 13, 2018, 1:57 PM IST
ಮಂಗಳೂರು: ಸೀರೆಯಲ್ಲಿಯೂ ಫಿಟ್ನೆಸ್ ಕಾಯ್ದುಕೊಳ್ಳಬಹುದು ಎಂದು ತೋರಿಸುವ ಉದ್ದೇಶದಿಂದ ಮಂಗಳೂರು ಮಹಿಳಾ ರನ್ ತಂಡವು ರವಿವಾರ ಮಹಿಳೆಯರಿಗಾಗಿ ಸ್ಯಾರಿ ನಡೆ ಮತ್ತು ರನ್ ಕಾರ್ಯಕ್ರಮವನ್ನು ಮಣ್ಣಗುಡ್ಡ ಮಹಾತ್ಮಾ ಗಾಂಧಿ ಪಾರ್ಕ್ ಬಳಿ ಆಯೋಜಿಸಿತು. ಕಾರ್ಯಕ್ರಮಕ್ಕೆ ಸ್ಥಳೀಯ ಕಾರ್ಪೊರೇಟರ್ ಜಯಂತಿ ಆಚಾರ್ ಹಾಗೂ ವೈಲೆಟ್ ಪಿರೇರ ಚಾಲನೆ ನೀಡಿದರು.
ಫಿಟ್ನೆಸ್ ಅರಿವು ಮೂಡಲಿ
ಈ ಸಂದರ್ಭ ಮಾತನಾಡಿದ ಸಂಯೋಜಕ ರಾಜೇಶ್, ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳುವ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವ್ಯಾಯಾಮ ಮಾಡುವ ಸಂದರ್ಭ ಅದಕ್ಕೆ ತಕ್ಕುದಾದ ಬಟ್ಟೆಗಳನ್ನು ಮಾತ್ರವೇ ಧರಿಸಬೇಕು ಎನ್ನುವ ಭಾವನೆ ಕೆಲವು ಮಹಿಳೆಯರಲ್ಲಿರುತ್ತದೆ. ಈ ಡ್ರೆಸ್ ಗಳನ್ನು ತೊಡಬೇಕಲ್ಲ ಎಂಬ ಕಾರಣಕ್ಕೆ ಮಹಿಳೆಯರು ನಡೆ ಮತ್ತು ಓಟದತ್ತ ಮುಖ ಮಾಡುತ್ತಿಲ್ಲ. ಇನ್ನೂ ಕೆಲವರಿಗೆ ಆಸಕ್ತಿ ಇದೆಯಾದರೂ ಸಾಂಪ್ರದಾಯಿಕ ಭಾವನೆಗಳು ಅವರನ್ನು ತಡೆಯುತ್ತಿವೆ. ಆದರೆ ಇವು ಅವರನ್ನು ಫಿಟ್ನೆಸ್ನಿಂದಲೇ ದೂರವಿಡುತ್ತವೆ. ಅವರಲ್ಲಿ ಫಿಟ್ನೆಸ್ ಕುರಿತು ಅರಿವು ಮೂಡಿಸಲು ಸೀರೆ ನಡೆ, ಓಟ ಆಯೋಜಿಸಿದ್ದೇವೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 650 ಮಂದಿ ನೋಂದಣಿ ಮಾಡಿಕೊಂಡಿದ್ದರು. ಇವತ್ತು 500 ಮಂದಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಓಟದಲ್ಲಿ 15ರಿಂದ 80 ವರ್ಷದೊಳಗಿನ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು ಭಾಗವಹಿಸಿದ್ದರು. ಮಹಿಳೆಯರು ಸೀರೆ ಉಟ್ಟು ಎರಡು ಕಿ.ಮೀ. ತನಕ ಓಡಿದರು. ಓಡಲು ಸಾಧ್ಯ ಇಲ್ಲದವರು ನಡಿಗೆ ಮೂಲಕ ದೂರವನ್ನು ಕ್ರಮಿಸಿದರು. ಮಾಯಾ ಅವರು ಸ್ಯಾರಿ ನಡಿಗೆಯಲ್ಲಿ ಮೊದಲ ಸ್ಥಾನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ