ರಾಜಸ್ತಾನ ಸುತ್ತ ಭರಾಟೆ
Team Udayavani, Sep 3, 2018, 11:23 AM IST
ಶ್ರೀಮುರಳಿ ಅವರು ನಾಯಕರಾಗಿ ನಟಿಸುತ್ತಿರುವ, ಚೇತನ್ ಕುಮಾರ್ ನಿರ್ದೇಶನದ “ಭರಾಟೆ’ ಚಿತ್ರಕ್ಕೆ ರಾಜಸ್ತಾನದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಒಟ್ಟು ಇಪ್ಪತ್ತು ದಿನಗಳ ಕಾಲ ಹಾಡು, ಸಾಹಸ ನಿರ್ದೇಶನ ಹಾಗೂ ಮಾತಿನ ಭಾಗದ ಚಿತ್ರೀಕರಣ ರಾಜಸ್ತಾನದಲ್ಲಿ ನಡೆಯಲಿದೆ. ಶ್ರೀಮುರಳಿ, ಶ್ರೀಲೀಲಾ, ತಾರಾ, ಸುಮನ್ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ಸುಪ್ರಿತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಭುವನ್ ಗೌಡ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ಕೆ.ರವಿವರ್ಮ, ಗಣೇಶ್, ವಿಜಯ್ ಸಾಹಸ ನಿರ್ದೇಶನ ಹಾಗೂ ಎ.ಹರ್ಷ, ಇಮ್ರಾನ್ ಸರ್ದಾರಿಯಾ, ಮುರಳಿ ನೃ ತ್ಯ ನಿರ್ದೇಶನವಿದೆ. ಶ್ರೀಮುರಳಿ, ಶ್ರೀಲೀಲಾ, ತಾರಾ, ಸುಮನ್, ಗಿರಿ, ಅಲೋಕ್, ಶಾಲಿನಿ, ಮಾಲತಿ, ದೀಪಕ್, ಉಗ್ರಂ ಮಂಜು, ರೇಖಾದಾಸ್, ಜಗನ್, ಪ್ರಮೋದ್ ಶಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.