ಬುದ್ಧಿವಂತರ “ಮನೋರಥ’: ಸೈಕಲಾಜಿಕಲ್ ಟ್ರೈಲರ್ ವೀಕ್ಷಿಸಿ
Team Udayavani, Sep 7, 2018, 3:10 PM IST
“ಮನೋರಥ’ ಚಿತ್ರವು ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಪ್ರಸನ್ನ ಕುಮಾರ್ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರಕ್ಕೆ “ಒನ್ಸ್ ಅಗೇನ್ ಬುದ್ಧಿವಂತರಿಗೆ ಮಾತ್ರ’ ಎಂಬ ಟ್ಯಾಗ್ ಲೈನ್ ಇದೆ. ಚಿತ್ರದಲ್ಲಿ ಮಾನಸಿಕ ಅಸಮತೋಲನ ಇರುವ ವ್ಯಕ್ತಿಯ ಮನಸ್ಥಿತಿಯನ್ನು ತೋರಿಸಲಾಗಿದೆ. ಜೊತೆಗೆ ಆತನನ್ನು ಸಮಾಜ ಹೇಗೆ ನೋಡುತ್ತದೆ ಎಂಬುದನ್ನು ಹೇಳಲಾಗಿದೆಯಂತೆ. ಚಿತ್ರದಲ್ಲಿ ರಾಜ್ ಚರಣ್ ನಾಯಕರಾಗಿ ನಟಿಸಿದ್ದಾರೆ. ಅಂಜಲಿ ನಾಯಕಿ. ಧಮಯಂತಿ, ರೇಣು ನಟಿಸಿದ್ದಾರೆ. ಚಂದ್ರು ಓಬಯ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಸೈಕಲಾಜಿಕಲ್ ಥ್ರಿಲ್ಲರ್ ಟ್ರೈಲರ್ ವೀಕ್ಷಿಸಿ.