ಕಾಂತಮಂಗಲ ಸೇತುವೆ ದುರಸ್ತಿ ಆರಂಭ


Team Udayavani, Sep 8, 2018, 1:08 PM IST

8-sepctember-12.jpg

ಸುಳ್ಯ : ಸುಳ್ಯ- ಅಜ್ಜಾವರ- ಮಂಡೆಕೋಲು ಅಂತಾರಾಜ್ಯ ರಸ್ತೆಯ ಕಾಂತಮಂಗಲ ಸೇತುವೆ ದುರಸ್ತಿ ಶುಕ್ರವಾರ ಆರಂಭಗೊಂಡಿತ್ತು. ರಸ್ತೆಯ ಎರಡು ದಿಕ್ಕಿನಲ್ಲಿ ವಾಹನ ಪ್ರವೇಶಾತಿ ಸ್ಥಗಿತಗೊಳಿಸಿದ್ದು, ಪಾದಚಾರಿಗಳು ಮಾತ್ರ ಸೇತುವೆ ದಾಟಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ನಾದುರಸ್ತಿಯಲ್ಲಿದ್ದ ಸೇತುವೆ ಪ್ರಯಾಣಿಕರ ಪಾಲಿಗೆ ಅಪಾಯಕಾರಿಯೆನಿಸಿತ್ತು. ಹೀಗಾಗಿ ದುರಸ್ತಿಗೆ ಆಗ್ರಹ ಕೇಳಿ ಬಂದಿತ್ತು.

ಮಂಜೂರಾತಿ 5 ಲಕ್ಷ ರೂ. ಸೇರಿದಂತೆ ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ. ಸೇತುವೆಗೆ ಅಳವಡಿಸಿದ ಕಬ್ಬಿಣದ ಪ್ಲೇಟ್‌, ಆರು ಸಂದುಗಳಲ್ಲಿ ಕಾಂಕ್ರೀಟ್‌ ಅಳವಡಿಕೆ ಮೊದಲಾದ ದುರಸ್ತಿ ಆಗಬೇಕಿದ್ದು, ಶುಕ್ರವಾರ ಮೇಲ್ಪದರ ತೆರವು ಕಾರ್ಯ ಪ್ರಗತಿಯಲ್ಲಿತ್ತು. ಮೂರು ದಿನಗಳಲ್ಲಿ ಈ ಕೆಲಸ ಪೂರ್ಣವಾಗಿ ಬಳಿಕ ಸೇತುವೆ ಒಳಭಾಗದ ಹಾನಿಯ ಬಗ್ಗೆ ಪರಿಶೀಲಿಸಲಾಗುತ್ತದೆ. ದುರಸ್ತಿಗೆ 30 ದಿನ ಗಳೆಂದು ನಿಗದಿಪಡಿಸಿದ್ದು, ಹಾನಿ ಪ್ರಮಾಣ ಅಂದಾಜಿಸಿದ ಬಳಿಕ ಖಚಿತ ಮಾಹಿತಿ ಸಿಗಲಿದೆ. ಕಾಂಕ್ರೀಟ್‌ ಹಾಸುವ 6 ದಿನಗಳಲ್ಲಿ ಓಡಾಟಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ಉಳಿದ ದಿನಗಳಲ್ಲಿ ಪಾದಚಾರಿಗಳಿಗೆ ಸೇತುವೆ ಮುಖೇನ ತೆರಳಬಹುದು ಎಂದು ಜಿ.ಪಂ. ಎಂಜಿನಿ ಯರ್‌ ಮಣಿಕಂಠ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಮಂಡೆಕೋಲು ಅಜ್ಜಾವರ ಮಾರ್ಗವಾಗಿ ಕಾಂತಮಂಗಲ ಸೇತುವೆ ಒಂದು ಭಾಗದ ತನಕ ಖಾಸಗಿ ಬಸ್‌ಗಳು ಓಡಾಟ ನಡೆಸುತ್ತವೆ. ಅಲ್ಲಿ ಜನರನ್ನು ಇಳಿಸಿ/ಹತ್ತಿಸಿ ಕರೆದುಕೊಂಡು ಹೋಗಲಾಗುತ್ತಿದೆ. ಸುಳ್ಯ ನಗರದಿಂದ ಸೇತುವೆಯ ಇನ್ನೊಂದು ಭಾಗದ ತನಕ ವಾಹನ ಓಡಾಟ ನಡೆಸುತ್ತಿದೆ. ಅಲ್ಲಿಯು ಇದೇ ವ್ಯವಸ್ಥೆ ಇದೆ.ವಿದ್ಯಾರ್ಥಿಗಳು, ಸಾರ್ವಜನಿಕರು ಸೇತುವೆಯನ್ನು ನಡೆದುಕೊಂಡು ದಾಟಿ ಎರಡು ದಿಕ್ಕಿನಲ್ಲಿ ಇರುವ ರಿಕ್ಷಾ, ಬಸ್‌ ಇನ್ನಿತ್ತರ ವಾಹನಗಳನ್ನು ಸಂಚರಿಸುತ್ತಿದ್ದಾರೆ. ಸಂಜೆ ಮತ್ತು ಬೆಳಗ್ಗೆ ಓಡಾಟ ಹೆಚ್ಚಾಗಿದೆ. ಎರಡಕ್ಕಿಂತ ಅಧಿಕ ವಾಹನ ಹೊಂದಿರುವವರು ಸೇತುವೆ ಎರಡು ಭಾಗದ ಪರಿಚಿತರ ಮನೆಗಳಲ್ಲಿ ವಾಹನ ಇರಿಸಿದ್ದಾರೆ.

ಓಡಾಟಕ್ಕೆ ಪ್ರತ್ಯೇಕ ವ್ಯವಸ್ಥೆ 
ಪರ್ಯಾಯ ನಾಲ್ಕು ರಸ್ತೆಗಳ ಪೈಕಿ ಕೆಲ ರಸ್ತೆಗಳ ಸ್ಥಿತಿ ಸರಿಯಾಗಿಲ್ಲ. ಬಹುತೇಕ ಪ್ರಯಾಣಿಕರು ಸೇತುವೆ ತನಕ ಒಂದು ವಾಹನ ಹಾಗೂ ಸೇತುವೆ ದಾಟಿದ ಬಳಿಕ ಇನ್ನೊಂದು ವಾಹನ ಬಳಸಿ ಓಡಾತ್ತಿದ್ದಾರೆ. 

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.