ಆಪರೇಷನ್ಗೆ ಆರ್ಥಿಕ ಸಹಾಯಕ್ಕೆ ಮೊರೆ
Team Udayavani, Sep 8, 2018, 2:20 PM IST
ಸುಳ್ಯ: ಕಳೆದ 12 ವರ್ಷದಿಂದ ನಡೆಯಲಾಗದೆ ಕುಳಿತಲ್ಲೆ ಇರುವ ಜಯನಗರ ನಿವಾಸಿ ರಾಮಕೃಷ್ಣ ನಾಯಕ್ ಅವರ ಪುತ್ರ ಪ್ರೇಮ್ ಕುಮಾರ್ ಎಸ್. ಆರ್.ಅವರು ಗುಣಮುಖವಾಗಲು ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿದೆ. ಸುಮಾರು 13 ಲಕ್ಷ ರೂ. ಆವಶ್ಯಕತೆಯಿದ್ದು ತೀರಾ ಬಡತನದಲ್ಲಿರುವ ಮನೆಯವರು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಪದವಿ ಓದುತ್ತಿದ್ದ ಸಂದರ್ಭ ಎರಡು ಕಾಲು, ಕೈ ಬಲ ಕಳೆದುಕೊಂಡು ಮಲಗಿದಲ್ಲೇ ಇರುವ 35 ವಯಸ್ಸಿನ ಪ್ರೇಮ್ ಕುಮಾರ್ ಅವರು ಚಿಕಿತ್ಸೆಗೆ ಲಕ್ಷಾಂತರ ರೂ.ವ್ಯಯಿಸಿದಲಾಗಿದೆ. ಮೂರು ತಿಂಗಳ ಹಿಂದೆ ಅಪೋಲಾ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ಸಂದರ್ಭ ಮೊದಲಿನಂತಾಗಲು ಶಸ್ತ್ರ ಚಿಕಿತ್ಸೆ ಅನಿವಾರ್ಯ ಎಂದು ತಿಳಿಸಿದ್ದಾರೆ.
ರಾಮಕೃಷ್ಣ ನಾಯಕ್ ಅವರದ್ದು ಬಡ ಕುಟುಂಬವಾಗಿದೆ. ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ವಯಸ್ಸಾದ ಕಾರಣ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಉಳಿದಿಬ್ಬರು ಮಕ್ಕಳ ದುಡಿಮೆಯೇ ಆಧಾರ. ಮನೆ ಸ್ಥಳ ಬಿಟ್ಟರೆ ಬೇರೇನೂ ಇಲ್ಲ. ಹೀಗಾಗಿ ಮಗನ ಆರೋಗ್ಯ ಸುಧಾರಣೆಗಾಗಿ ಸಹಾಯದ ನೆರವು ಕೋರಿದ್ದಾರೆ.
ದಾನಿಗಳು ಈ ಅಕೌಂಟ್ಗೆ ಸಹಾಯ ಹಸ್ತ ನೀಡಬಹುದು. ಪ್ರೇಮ್ ಕುಮಾರ್ ಎಸ್.ಆರ್,A/c 20168132528, IFSC code : SBIN0010451, ಎಸ್ಬಿಐ ಬ್ಯಾಂಕ್, ಸುಳ್ಯ ಬ್ರಾಂಚ್, ಟಿಎಪಿಸಿಎಂಎಸ್ ಕಟ್ಟಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ