ಆತ್ಮಹತ್ಯೆ: ತಡೆಯುವ ಕ್ರಮಗಳು


Team Udayavani, Sep 23, 2018, 6:00 AM IST

suicide.jpg

ಹಿಂದಿನ ವಾರದಿಂದ- ಆತ್ಮಹತ್ಯೆ ತಡೆ ಮತ್ತು ನಿಯಂತ್ರಣ
ಆತ್ಮಹತ್ಯೆಯು ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ಹೀಗಾಗಿ ಪ್ರತಿಬಂಧಕ ಪ್ರಯತ್ನಗಳಲ್ಲಿ ಆರೋಗ್ಯ ಕ್ಷೇತ್ರ ಹಾಗೂ ಶಿಕ್ಷಣ, ಕಾರ್ಮಿಕ, ಕೃಷಿ, ಉದ್ಯಮ, ನ್ಯಾಯ, ಕಾನೂನು ಮತ್ತು ಸುವ್ಯವಸ್ಥೆ, ರಕ್ಷಣೆ, ನೀತಿ ನಿಯಮಗಳು ಮತ್ತು ಮಾಧ್ಯಮಗಳಂತಹ ಇತರ ಕ್ಷೇತ್ರಗಳ ಸಹಭಾಗಿತ್ವ ಮತ್ತು ಸಹಯೋಗ ಅಗತ್ಯವಾಗಿದೆ. ಆತ್ಮಹತ್ಯೆಯಂತಹ ಸಂಕೀರ್ಣ ವಿಚಾರದ ಮೇಲೆ ಏಕರೂಪದ ಪರಿಹಾರ ಪ್ರಯತ್ನ ಫ‌ಲ ನೀಡುವ ಸಾಧ್ಯತೆ ಕಡಿಮೆ; ಹೀಗಾಗಿ ಸಮಗ್ರ ಮತ್ತು ಸಂಘಟಿತ ಪ್ರಯತ್ನಗಳು ನಡೆಯಬೇಕು. ಆತ್ಮಹತ್ಯೆಗಳನ್ನು ತಡೆಯುವುದು ಸಾಧ್ಯ. ಆತ್ಮಹತ್ಯೆ ಮತ್ತು ಆತ್ಮಹತ್ಯೆಯ ಪ್ರಯತ್ನಗಳನ್ನು ತಡೆಯಲು ಜನಸಮುದಾಯ, ಉಪ ಜನಸಮುದಾಯ ಮತ್ತು ವೈಯಕ್ತಿಕ ನೆಲೆಯಲ್ಲಿ  ತೆಗೆದುಕೊಳ್ಳಬಹುದಾದ ಅನೇಕ ಕ್ರಮಗಳಿವೆ. ಇವುಗಳೆಂದರೆ: 
–  ಆತ್ಮಹತ್ಯೆ ಮಾರ್ಗಗಳ ಲಭ್ಯತೆಯನ್ನು ಕಡಿಮೆ ಮಾಡುವುದು (ಉದಾಹರಣೆಗೆ, ಕೀಟನಾಶಕಗಳು, ಶಸ್ತ್ರಾಸ್ತ್ರಗಳು, ಕೆಲವು ಔಷಧಗಳು)
–  ಮಾಧ್ಯಮಗಳಲ್ಲಿ ಜವಾಬ್ದಾರಿಯುತವಾಗಿ ವರದಿ ಮಾಡುವುದು
– ಮದ್ಯಪಾನದ ಹಾನಿಕಾರಕ ಬಳಕೆಯನ್ನು ಕಡಿಮೆ ಮಾಡಲು ಮದ್ಯಪಾನ ನೀತಿಗಳನ್ನು ಜಾರಿಗೆ ತರುವುದು
– ಮಾನಸಿಕ ಸಮಸ್ಯೆಗಳು, ಮಾದಕ ದ್ರವ್ಯ ಬಳಕೆಯಂತಹ ತೊಂದರೆಗಳು, ದೀರ್ಘ‌ಕಾಲಿಕ ನೋವು ಮತ್ತು ಹಠಾತ್‌ ಭಾವನಾತ್ಮಕ ತೊಂದರೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಕ್ಷಿಪ್ರವಾಗಿ ಗುರುತಿಸುವುದು, ಚಿಕಿತ್ಸೆ ನೀಡುವುದು ಮತ್ತು ಆರೈಕೆ ನಡೆಸುವುದು
– ವಿಶೇಷೇತರ ಆರೋಗ್ಯ ಕಾರ್ಯಕರ್ತರನ್ನು ಆತ್ಮಹತ್ಯಾತ್ಮಕ ವರ್ತನೆಯ ವಿಶ್ಲೇಷಣೆ ಮತ್ತು ನಿರ್ವಹಣೆಯ ಬಗ್ಗೆ ತರಬೇತುಗೊಳಿಸುವುದು
– ಆತ್ಮಹತ್ಯೆಗೆ ಪ್ರಯತ್ನಿಸಿದವರಿಗೆ ಅನುಸರಣೆ ಆರೈಕೆ ಒದಗಿಸುವುದು ಹಾಗೂ ಸಮಾಜದ ಬೆಂಬಲಕ್ಕೆ ಅವಕಾಶ ಒದಗಿಸುವುದು. 

ನಿಮ್ಮ ಆತ್ಮಹತ್ಯಾತ್ಮಕ ಯೋಚನೆಗಳನ್ನು 
ನಿಭಾಯಿಸುವುದು ಹೇಗೆ?

– ನಿಮಗೆ ಹೇಗೆ ಅನ್ನಿಸುತ್ತಿದೆ ಎಂಬುದನ್ನು ವಿಶ್ವಾಸಾರ್ಹ ಕುಟುಂಬ ಸದಸ್ಯರು, ಗೆಳೆಯ-ಗೆಳತಿಯರು ಅಥವಾ ಸಹೋದ್ಯೋಗಿಯ ಜತೆಗೆ ಹಂಚಿಕೊಳ್ಳಿ.
– ನಿಮಗೆ ನೀವೇ ಹಾನಿ ಮಾಡಿಕೊಳ್ಳುವ ತತ್‌ಕ್ಷಣದ ಸಾಧ್ಯತೆ ಇದೆ ಎಂಬುದಾಗಿ ನೀವು ಭಾವಿಸಿದರೆ ಸಹಾಯವಾಣಿಯಂತಹ ತುರ್ತು ಸೇವೆಗೆ ಕರೆ ಮಾಡಿ ಅಥವಾ ಖುದ್ದು ಸಂಪರ್ಕಿಸಿ. 
– ವೈದ್ಯರು, ಮಾನಸಿಕ ಆರೋಗ್ಯ ತಜ್ಞರು, ಆಪ್ತ ಸಮಾಲೋಚಕರು ಅಥವಾ ಸಮಾಜ ಕಾರ್ಯಕರ್ತರನ್ನು ಸಂಪರ್ಕಿಸಿ. 
– ಹಾನಿಯ ಪೂರ್ವ ಅನುಭವ ಹೊಂದಿರುವ ವ್ಯಕ್ತಿ ಅಥವಾ ಸ್ವಸಹಾಯ ಗುಂಪನ್ನು ಕಂಡುಹುಡುಕಿ ಸಹಾಯ ಪಡೆಯಿರಿ. ಭಾವನೆಗಳನ್ನು ಉತ್ತಮಪಡಿಸಿಕೊಳ್ಳಲು ಈ ಮೂಲಕ ಪರಸ್ಪರ ಸಹಕರಿಸಬಹುದು. 

ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯದಲ್ಲಿರುವ 
ಇತರರಿಗೆ ನೀವು  ಹೇಗೆ ಸಹಾಯ ಮಾಡಬಹುದು?

ಬಹುತೇಕ ಸಂದರ್ಭದಲ್ಲಿ ಇತರರಲ್ಲಿ ಆತ್ಮಹತ್ಯೆಯ ಅಪಾಯದ ಬಗ್ಗೆ ಮಾತುಕತೆ ನಡೆಸಲು ನಾವು ಹಿಂಜರಿಯುತ್ತೇವೆ. ಆದರೆ ನೆನಪಿಡಿ, ಆತ್ಮಹತ್ಯೆಗಳನ್ನು ತಡೆಯಬಹುದು. ಆತ್ಮಹತ್ಯೆಯ ಬಗ್ಗೆ ಮಾತುಕತೆ ನಡೆಸುವುದರಿಂದ ಬಾಧಕವಿಲ್ಲ. ಆತ್ಮಹತ್ಯೆಯ ಬಗ್ಗೆ ಮಾತನಾಡುವುದರಿಂದ ಆತ್ಮಹತ್ಯೆಯನ್ನು ಪ್ರೋತ್ಸಾಹಿಸಿದಂತಾಗುವುದಿಲ್ಲ. ಅದರಿಂದ ಸಾಮಾನ್ಯವಾಗಿ ಖನ್ನತೆ, ಒತ್ತಡ ನಿವಾರಣೆಯಾಗಿ ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 
– ನೀವು ಕಳವಳ ಹೊಂದಿರುವ ವ್ಯಕ್ತಿಯ ಜತೆಗೆ ಮಾತನಾಡಲು ಸರಿಯಾದ ಸಮಯ ಮತ್ತು ಶಾಂತವಾದ ಸ್ಥಳವನ್ನು ಆರಿಸಿಕೊಳ್ಳಿ. ನೀವು ಅವರ ಬವಣೆ, ಸಮಸ್ಯೆಗಳ ಬಗ್ಗೆ ಆಲಿಸಲು ಇದ್ದೀರಿ ಎಂಬ ವಿಶ್ವಾಸ ಅವರಲ್ಲಿ ಮೂಡಬೇಕು. 
– ವೈದ್ಯರು, ಮನೋವೈದ್ಯರು, ಆಪ್ತಸಮಾಲೋಚಕರು, ಸಾಮಾಜಿಕ ಕಾರ್ಯಕರ್ತರಂತಹ ವೃತ್ತಿಪರರಿಂದ ಸಹಾಯ ಪಡೆಯುವಂತೆ ಆ ವ್ಯಕ್ತಿಯನ್ನು ಪ್ರೋತ್ಸಾಹಿಸಿ. ಭೇಟಿಯ ಸಮಯದಲ್ಲಿ ನೀವೂ ಜತೆಗೂಡುವ ಭರವಸೆ ನೀಡಿ.
– ವ್ಯಕ್ತಿ ತತ್‌ಕ್ಷಣ ಅಪಾಯದಲ್ಲಿದ್ದರೆ ಆತ ಅಥವಾ ಆಕೆಯನ್ನು ಏಕಾಂಗಿಯಾಗಿ ಇರಲು ಬಿಡಬೇಡಿ. ತುರ್ತು ಸೇವೆಗಳು, ಬಿಕ್ಕಟ್ಟು ಸಹಾಯವಾಣಿ, ಆರೋಗ್ಯ ಸೇವಾ ವೃತ್ತಿಪರರಂತಹ ವೃತ್ತಿಪರರ ಸಹಾಯ ಪಡೆಯಿರಿ ಅಥವಾ ಕುಟುಂಬ ಸದಸ್ಯರ ನೆರವು ಪಡೆಯಿರಿ. 
– ಆ ವ್ಯಕ್ತಿ ನಿಮ್ಮ ಜತೆಗೆಯೇ ವಾಸಿಸುವುದಾದರೆ ಸ್ವಹಾನಿ ಎಸಗುವ ವಸ್ತುಗಳು (ಉದಾಹರಣೆಗೆ, ಕೀಟನಾಶಕಗಳು, ಶಸ್ತ್ರಾಸ್ತ್ರಗಳು ಅಥವಾ ಔಷಧಗಳು) ಅವರ ಕೈಗೆ ಸಿಗದಂತೆ ಎಚ್ಚರಿಕೆ ವಹಿಸಿ. 
– ವ್ಯಕ್ತಿಯ ಬಗ್ಗೆ ಸತತ ನಿಗಾ ಇರಿಸಿ, ಆತ/ ಆಕೆ ಹೇಗಿದ್ದಾರೆ ಎಂಬುದನ್ನು ಗಮನಿಸುತ್ತಿರಿ. ಆತ್ಮಹತ್ಯೆ ಒಂದು ಜಾಗತಿಕ ಸಾಮಾಜಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಬಗ್ಗೆ ನಾವೆಲ್ಲರೂ ಗಮನ ಹರಿಸಬೇಕು. ಆತ್ಮಹತ್ಯೆಗಳನ್ನು ತಡೆಯುವುದು ಖಂಡಿತ ಸಾಧ್ಯ; ಆದರೆ ಅದಕ್ಕೆ ಚಟುವಟಿಕೆಗಳ ಸರಣಿಯನ್ನೇ ನಡೆಸಬೇಕಾಗುತ್ತದೆ. ಮಕ್ಕಳು ಮತ್ತು ಯುವ ಜನತೆ ನೆಮ್ಮದಿಯಿಂದ ಜೀವಿಸಲು ಸಾಧ್ಯವಾದ ವಾತಾವರಣ ನಿರ್ಮಾಣ, ಮಾನಸಿಕ ಸಮಸ್ಯೆಗಳನ್ನು ಸರಿಯಾದ ಸಮಯಕ್ಕೆ ಪರಿಣಾಮಕಾರಿ ಚಿಕಿತ್ಸೆಯ ಮೂಲಕ ಪರಿಹರಿಸುವುದು, ಅಪಾಯಾಂಶಗಳನ್ನು ನಿವಾರಿಸುವಂತಹ ಕ್ರಮಗಳೆಲ್ಲವೂ ಇದರಲ್ಲಿ ಒಳಗೊಳ್ಳುತ್ತವೆ. ಮಾಹಿತಿ ಮತ್ತು ಜ್ಞಾನದ ಸರಿಯಾದ ಪ್ರಸರಣ, ಅರಿವಿನ ಮಟ್ಟವನ್ನು ಎತ್ತರಿಸುವುದು ಆತ್ಮಹತ್ಯೆ ತಡೆಯಲ್ಲಿ ಅವಿಭಾಜ್ಯ ಅಂಶಗಳು. ಆತ್ಮಹತ್ಯೆಗಳನ್ನು ಪ್ರತಿಬಂಧಿಸುವಲ್ಲಿ ಪ್ರತಿಯೊಬ್ಬರೂ ಕೊಡುಗೆ ನೀಡಲು ಸಾಧ್ಯ.

ಟಾಪ್ ನ್ಯೂಸ್

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.