ಬಜಪೆ: ಶಾರದೋತ್ಸವ ಭವ್ಯ ಶೋಭಾಯಾತ್ರೆ
Team Udayavani, Oct 20, 2018, 11:08 AM IST
ಬಜಪೆ : ಇಲ್ಲಿನ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ ಬಜಪೆ ಕೇಂದ್ರ ಮೈದಾನದಲ್ಲಿ ಪೂಜಿಸಲ್ಪಟ್ಟ 26ನೇ ವರ್ಷದ ಶ್ರೀ ಶಾರದೋತ್ಸವದ ಭವ್ಯ ಶೋಭಾಯಾತ್ರೆಯಲ್ಲಿ ವಿವಿಧ ಸ್ತಬ್ಧ ಚಿತ್ರಗಳ ಟ್ಯಾಬ್ಲೊಗಳು ಮೆರುಗು ನೀಡಿದವು.
ಬಜಪೆ ಕೇಂದ್ರ ಮೈದಾನದಲ್ಲಿ ಮಹಾಪೂಜೆ ನಡೆದ ಬಳಿಕ ಕೇರಳದ ಪಯ್ಯಟಂ ವಾದ್ಯ ಕಲಾಸಂಗಮ್ ಕಣ್ಣೂರು ಇವರಿಂದ ಚೆಂಡೆವಾದನ, ಎಸ್.ಮೋಹನ್ ಕಳವಾರು ಇವರ ಸ್ಯಾಕ್ಸೋಫೋನ್ ವಾದ್ಯ, ಪೆರಾರದ ಕೊಂಬು,ಬ್ಯಾಂಡ್ವಾದ್ಯದೊಂದಿಗೆ ಬಜಪೆ ಪೇಟೆಯ ಮೂಲಕ ಹೊರಟ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ, ಪೌರಾಣಿಕ ಹಾಗೂ ಜನಪದ ಸ್ತಬ್ಧಚಿತ್ರಗಳೊಂದಿಗೆ ಮರವೂರಿನತ್ತ ಸಾಗಿತು. ದಾರಿಯೂದ್ದಕ್ಕೂ ಭಕ್ತರ ಪೂಜೆಗಳನ್ನು ಸ್ವೀಕರಿಸಿ, ಕರಂಬಾರು -ಕೆಂಜಾರು ಮೂಲಕ ಮರವೂರು ಗುರುಪುರ ನದಿಯಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಬಂದೋಬಸ್ತಿಗಾಗಿ ಬಜಪೆ ಪೊಲೀಸರೊಂದಿಗೆ ಮೂಲ್ಕಿ, ಸುರತ್ಕಲ್, ಕಾವೂರು, ಮೂಡಬಿದಿರೆ, ಪಣಂಬೂರು ಮುಂತಾದೆಡೆಗಳಿಂದ ಪೊಲೀಸ್ ಸಿಬಂದಿ ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ