ಇಂದಬೆಟ್ಟಿನಲ್ಲಿ ಒಂಟಿ ಸಲಗ
Team Udayavani, Nov 2, 2018, 10:19 AM IST
ಬೆಳ್ತಂಗಡಿ: ಇಂದಬೆಟ್ಟು ಚರ್ಚ್ ಸಮೀಪದ ತೋಟದಲ್ಲಿ ಕಾಡಾನೆಯೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ ಘಟನೆ ಗುರುವಾರ ನಡೆದಿದೆ. ಬೆಳ್ತಂಗಡಿ ಎಪಿಎಂಸಿ ಮಾಜಿ ಅಧ್ಯಕ್ಷ ಹನಿಬೆಟ್ಟು ಭರತ್ ಕುಮಾರ್ ಅವರ ತೋಟದ ಕೆಲವೊಂದು ಬಾಳೆಗಿಡಗಳಿಗೆ ಹಾನಿ ಮಾಡಿದ್ದು ಬಿಟ್ಟರೆ ಆನೆ ಹೆಚ್ಚಿನ ಹಾನಿ ಮಾಡಿಲ್ಲ.
ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಬಳಿಕ ಆನೆ ಯಾವ ಕಡೆಗೆ ತೆರಳಿದೆ ಎಂದು ಗೊತ್ತಾಗಲಿಲ್ಲ. ಆನೆಯನ್ನು ಕಾಡಿಗೆ ಓಡಿಸಲು ಕಾನರ್ಪ ಹೊಳೆ ಬದಿ ಅರಣ್ಯ ಇಲಾಖೆಯವರು ಕಾದು ಕುಳಿತಿದ್ದರು. ಆನೆ ನದಿ ದಾಟಿ ಬಂಡಾಜೆ ಅಥವಾ ಚಾರ್ಮಾಡಿ ಕಡೆಗೆ ತೆರಳಿರಬಹುದು ಎಂದು ಅಂದಾಜಿಸಲಾಗಿದೆ.