ಅನುದಾನ ಬಂದರೂ ನಿರ್ಮಾಣವಾಗದ ನೂತನ ಕಟ್ಟಡ 


Team Udayavani, Dec 1, 2018, 11:49 AM IST

1-december-3.gif

ಬೆಳ್ತಂಗಡಿ: ರಾಜ್ಯ ಸರಕಾರವು 2015ರ ಆರಂಭದಲ್ಲಿ ಒಟ್ಟು 439 ಹೊಸ ಗ್ರಾ.ಪಂ.ಗಳನ್ನು ಘೋಷಣೆ ಮಾಡಿದ್ದು, ಅದರಂತೆ ಬೆಳ್ತಂಗಡಿ ತಾಲೂಕಿನಲ್ಲೂ ಒಟ್ಟು ಐದು ಗ್ರಾ.ಪಂ.ಗಳು ಅಸ್ತಿತ್ವಕ್ಕೆ ಬಂದಿವೆ. ಗ್ರಾ.ಪಂ.ಗಳ ನೂತನ ಕಟ್ಟಡಕ್ಕೆ ಸರಕಾರದಿಂದ ಅನುದಾನ ಮಂಜೂರುಗೊಂಡಿದ್ದರೂ ಇನ್ನೂ ಯಾವುದೇ ಗ್ರಾ.ಪಂ.ಗಳಿಗೆ ಹೊಸ ಕಟ್ಟಡ ನಿರ್ಮಾಣಗೊಂಡಿಲ್ಲ.

ಬೆಳ್ತಂಗಡಿ ತಾ|ನಲ್ಲಿ ತೆಕ್ಕಾರು, ಕಳೆಂಜ, ಕಡಿರು ದ್ಯಾವರ, ನಾವೂರು ಹಾಗೂ ಸುಲ್ಕೇರಿ ಹೀಗೆ 5 ಹೊಸ ಗ್ರಾ.ಪಂ.ಗಳು ಅಸ್ತಿತ್ವಕ್ಕೆ ಬಂದಿವೆ. ಇವುಗಳಲ್ಲಿ ಪ್ರತಿ ಗ್ರಾ.ಪಂ.ಗಳ ಕಟ್ಟಡ ನಿರ್ಮಾಣಕ್ಕೂ 40 ಲಕ್ಷ ರೂ. ಅನುದಾನ ಮಂಜೂರುಗೊಂಡಿದ್ದು, ಅದರಲ್ಲಿ 10 ಲಕ್ಷ ರೂ. ಬಿಡುಗಡೆಯಾಗಿದೆ.

ಆದರೆ ಅನುದಾನ ಬಂದಿದ್ದರೂ ಕೆಲಸ ಆರಂಭಗೊಂಡಿರುವುದು ಕಳೆಂಜ ಹಾಗೂ ಸುಲ್ಕೇರಿ ಗ್ರಾ.ಪಂ.ಗಳಲ್ಲಿ ಮಾತ್ರ. ಎರಡು ಗ್ರಾ.ಪಂ.ಗಳ ನೂತನ ಕಟ್ಟಡಕ್ಕೆ ಪ್ರಸ್ತುತ ಪಿಲ್ಲರ್‌ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. 5 ಗ್ರಾ.ಪಂ.ಗಳಲ್ಲಿ ಸುಲ್ಕೇರಿ ಗ್ರಾ.ಪಂ.ನ ಆರ್‌ಟಿಸಿಯೂ ಆಗಿದ್ದು, 4 ಗ್ರಾ.ಪಂ.ಗಳ ಹೆಸರಿನ ಆರ್‌ಟಿಸಿ ಕಾರ್ಯ ಪ್ರಗತಿಯಲ್ಲಿದೆ.

ಹಾಲಿ ಎಲ್ಲೆಲ್ಲಿದೆ?
ಮಿತ್ತಬಾಗಿಲು ಗ್ರಾ.ಪಂ.ನಿಂದ ಬೇರ್ಪಟ್ಟಿರುವ ಕಡಿರುದ್ಯಾವರ ಗ್ರಾ.ಪಂ. ಹಾಲಿ ಹೇಡ್ಯದಲ್ಲಿನ ಗ್ರಾಮಚಾವಡಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ನಿಡ್ಲೆ ಗ್ರಾ.ಪಂ.ನಿಂದ ಬೇರ್ಪಟ್ಟಿರುವ ಕಳೆಂಜ ಗ್ರಾ.ಪಂ. ಪ್ರತಿ ತಿಂಗಳಿಗೆ 4,000 ರೂ.ನಂತೆ ಕಳೆಂಜದಲ್ಲಿ ಬಾಡಿಗೆ ಕಟ್ಟಡದಲ್ಲಿದೆ. ಇಂದಬೆಟ್ಟು ಗ್ರಾ.ಪಂ.ನಿಂದ ಬೇರ್ಪಟ್ಟಿ ರುವ ನಾವೂರು ಗ್ರಾ.ಪಂ. ಹಾಲಿ ಇಂದ ಬೆಟ್ಟು ಗ್ರಾ.ಪಂ. ಕಚೇರಿಯ ಒಂದು ಸಣ್ಣ ಕೊಠಡಿಯಲ್ಲಿದೆ.

ಅಳದಂಗಡಿ ಗ್ರಾ.ಪಂ.ನಿಂದ ಬೇರ್ಪಟ್ಟಿರುವ ಸುಲ್ಕೇರಿ ಗ್ರಾ.ಪಂ. ಪ್ರಸ್ತುತ ಅಳದಂಗಡಿ ಗ್ರಾ.ಪಂ.ನ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಬಾರ್ಯ ಗ್ರಾ.ಪಂ. ನಿಂದ ಬೇರ್ಪಟ್ಟಿರುವ ತೆಕ್ಕಾರು ಗ್ರಾ.ಪಂ. ಹಾಲಿ 4,000 ರೂ.ನಂತೆ ಅಕ್ಷರ ಕರಾವಳಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.

ಸುಲ್ಕೇರಿ ಆರ್‌ಟಿಸಿ ಲಭ್ಯ
5 ಹೊಸ ಗ್ರಾ.ಪಂ.ಗಳ ಪೈಕಿ ಹಾಲಿ ಸುಲ್ಕೇರಿ ಗ್ರಾ.ಪಂ. ಹೆಸರಿಗೆ 40 ಸೆಂಟ್ಸ್‌ ಆರ್‌ಟಿಸಿ ಆಗಿದೆ. ಪ್ರಸ್ತುತ ಎನ್‌ಆರ್‌ ಇಜಿಯ 20 ಲಕ್ಷ ರೂ.ನಲ್ಲಿ ಕಾಮಗಾರಿ ನಡೆಯುತ್ತಿದ್ದು, ರಾಜೀವ ಗಾಂಧಿ ಸೇವಾ ಕೇಂದ್ರದ ಯೋಜನೆಯಂತೆ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಎನ್‌ಆರ್‌ಇಜಿ ಅನುದಾನ ಮುಗಿದ ಬಳಿಕ ಬಿಡುಗಡೆಗೊಂಡಿರುವ 10 ಲಕ್ಷ ರೂ.ಗಳನ್ನು ಬಳಕೆ ಮಾಡುವ ಕುರಿತು ತೀರ್ಮಾನಿಸಿದ್ದಾರೆ.

ಬಿಲ್‌ ಪಾವತಿ ಇಲ್ಲ !
2 ಗ್ರಾ.ಪಂ.ಗಳ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರೂ ಗುತ್ತಿಗೆ ದಾರರಿಗೆ ಬಿಲ್‌ ಪಾವತಿ ಮಾಡುವಂತಿಲ್ಲ. ನಿವೇಶನದ ಕಡತ ಕಂದಾಯ ಇಲಾಖೆ ಯಲ್ಲಿದ್ದು, ಗ್ರಾ.ಪಂ. ಹೆಸರಿಗೆ ಆರ್‌ಟಿಸಿ ಹಸ್ತಾಂತರ ಬಳಿಕವೇ ಬಿಲ್‌ ಪಾವತಿಯಾ ಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಶಾಸಕರ ಸೂಚನೆ 
ನೂತನ ಗ್ರಾ.ಪಂ.ಗಳು ಮಂಜೂರುಗೊಂಡು 4 ವರ್ಷಗಳೇ ಆದರೂ ಇನ್ನೂ ಅವುಗಳ ನಿವೇಶನವೇ ಅಂತಿಮಗೊಳ್ಳದ ಕುರಿತು ಕಳೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಹರೀಶ್‌ ಪೂಂಜ ಅವರು, 2 ತಿಂಗಳೊಳಗೆ ನಿವೇಶನದ ಕಡತ ಪೂರ್ತಿಗೊಂಡು ಬಾಕಿ ಉಳಿದಿರುವ ಗ್ರಾ.ಪಂ.ಗಳ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಸೂಚನೆ ನೀಡಿದ್ದಾರೆ. ಜತೆಗೆ ಕಡತಗಳ ಪರಿಶೀಲನೆಗಾಗಿ ತಾ.ಪಂ.ನ ಶ್ರೀಧರ್‌ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಆರ್‌ಟಿಸಿ ಕಾರ್ಯ ಬಹುತೇಕ ಪೂರ್ಣ
ಆರ್‌ಟಿಸಿಗೆ ಬಾಕಿ ಇರುವ 4 ಗ್ರಾ.ಪಂ.ಗಳ ಪೈಕಿ 3 ಗ್ರಾ.ಪಂ.ಗಳ ಆರ್‌ಟಿಸಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ತೆಕ್ಕಾರು ಗ್ರಾ.ಪಂ. ಆರ್‌ಟಿಸಿ ಮಾತ್ರ ಪ್ರಗತಿಯಲ್ಲಿದೆ. ಕಳೆಂಜ, ಸುಲ್ಕೇರಿ ಗ್ರಾ.ಪಂ.ಗಳ ಕಟ್ಟಡದ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಉಳಿದಿರುವುದೂ ಶೀಘ್ರ ಆರಂಭಗೊಳ್ಳಲಿದೆ.
– ಕುಸುಮಾಧರ್‌ ಬಿ. ಕಾರ್ಯನಿರ್ವಹಣಾಧಿಕಾರಿ, ಬೆಳ್ತಂಗಡಿ ತಾ.ಪಂ. 

ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು

ಆನೆ ಕಂಡು ಚರಂಡಿಗೆ ಇಳಿದ ಬೊಲೇರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

ಆನೆ ಕಂಡು ಚರಂಡಿಗೆ ಇಳಿದ ಬೊಲೆರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ

Coconut Water ಹೆಚ್ಚಿದ ಬಿಸಿಲ ಬೇಗೆ: ಎಳನೀರಿಗೆ 60 ರೂ.!

Coconut Water ಹೆಚ್ಚಿದ ಬಿಸಿಲ ಬೇಗೆ: ಎಳನೀರಿಗೆ 60 ರೂ.!

Hijab ಧಾರಿಣಿ ಮೊದಲ ಮುಸ್ಲಿಂ ಪ್ರಧಾನಿ: ಸಂಸದ ಅಸಾದುದ್ದೀನ್‌ ಒವೈಸಿ

Hijab ಧಾರಿಣಿ ಮೊದಲ ಮುಸ್ಲಿಂ ಪ್ರಧಾನಿ: ಸಂಸದ ಅಸಾದುದ್ದೀನ್‌ ಒವೈಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು

3

Sandalwood: ನಿರುದ್ಯೋಗದ ಸುತ್ತ ಗಾಂಧಿನಗರ

Sandalwood: ಟ್ರೇಲರ್‌ನಲ್ಲಿ ಮೂರನೇ ಕೃಷ್ಣಪ್ಪ

Sandalwood: ಟ್ರೇಲರ್‌ನಲ್ಲಿ ಮೂರನೇ ಕೃಷ್ಣಪ್ಪ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Kannada Actor: ಕನ್ನಡದ ಯುವನಟ ಚೇತನ್‌ ಚಂದ್ರ ಮೇಲೆ 20 ಮಂದಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.